ಭಾನುವಾರ, ಅಕ್ಟೋಬರ್ 24, 2010

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ

ಸಾಮಾಜಿಕ ಭದ್ರತೆಯ ಸಂಕ್ಷಿಪ್ತ ಇತಿಹಾಸ
1880ನೇ ಇಸವಿಯಲ್ಲಿ ಚಾನ್ಸೆಲರ್ ಆಟೋವನ್ ಬಿಸ್ಮಾರ್ಕ, ಜರ್ಮನಿಯ ದುರ್ಬಲ ಹಾಗೂ ಅಸಹಾಯಕ ಜನತೆಗಾಗಿ 
ಸಾಮಾಜಿಕ ವಿಮಾ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬೇರೆ ಯೂರೋಪಿಯನ್ ದೇಶಗಳು ತಮ್ಮ 
ಜನತೆಯ ಏಳಿಗೆಗಾಗಿ ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡವು. ತದನಂತರ ಅಮೇರಿಕ ಸಂಯುಕ್ತ ಸಂಸ್ಥಾನದ 
ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್, ಸಾಮಾಜಿಕ ಭದ್ರತಾ ಕಾನೂನನ್ನು 1935ನೇ ಇಸವಿಯಲ್ಲಿ , ದೇಶವನ್ನು ಅತ್ಯಂತ 
ವಿಷಮ ಆರ್ಥಿಕ ಸಂಕಷ್ಟದಿಂದ (ದಿಗ್ರೇಟ್ ಡಿಪ್ರೆಷನ್) ಮಾಡಲು ಜಾರಿಗೆ ತಂದರು.

ಕರ್ನಾಟಕ ರಾಜ್ಯ ಸರ್ಕಾರವು ಅಶಕ್ತ ವೃದ್ಧರ ರಕ್ಷಣೆಗಾಗಿ 1965 ನೇ ಇಸವಿಯಲ್ಲಿ ರೂ. 40/- ರಂತೆ ಮಾಸಿಕ 

ಪಿಂಚಣಿಯನ್ನು ನೀಡುತ್ತಾ ಬಂದಿದೆ. 
ಅಲ್ಲದೆ ಅಂಗವಿಕಲರ ಸಾಮಾಜಿಕ ಭದ್ರತೆಗಾಗಿ 1979ರಲ್ಲಿ ಹಾಗೂ ನಿರ್ಗತಿಕ ವಿಧವೆಯರ ರಕ್ಷಣೆಗಾಗಿ 
1984ರಲ್ಲಿ ರೂ.40/-ರಂತೆ ಮಾಸಿಕ ಪಿಂಚಣಿಯನ್ನು ಜಾರಿಗೆ ತಂದಿದೆ.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳನ್ನು 

(ಎನ್ ಎಸ್ ಎ ಪಿ) ಅನುಷ್ಠಾನಗೊಳಿಸಿದೆ. 
ಈ ಮಹತ್ವದ ಯೋಜನೆಯಡಿ ನಾಲ್ಕು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಿವೆ.
1. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ
2. ರಾಷ್ಟ್ರೀಯ ಕುಟುಂಬ ನೆರವು ಯೋಜನೆ
3. ಅನ್ನಪೂರ್ಣ ಯೋಜನೆ
4. ಜನನಿ ಶಿಶು ಸುರಕ್ಷಾ ಯೋಜನೆ


ಇದಲ್ಲದೆ ಕರ್ನಾಟಕ ರಾಜ್ಯ ಸರ್ಕಾರವು ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

 
1. ಅಂತ್ಯ ಸಂಸ್ಕಾರ ಯೋಜನೆ
2. ಆದರ್ಶ ವಿವಾಹ ಯೋಜನೆ
3. ದೇವದಾಸಿ ಪಿಂಚಣಿ
4. ಸಂಧ್ಯಾ ಸುರಕ್ಷಾ ಯೋಜನೆ

http://dssp.kar.nic.in/ 

ಸ್ವದೇಶೀ ತಂತ್ರಜ್ಞರ ಸಮಾವೇಶ

ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು, ರೈತರಿಗೆ ಸುಲಭ, ಅಗ್ಗ, ಪರಿಸರಸ್ನೇಹೀ ಮತ್ತು ಸಣ್ಣ ಯಂತ್ರಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಪಣತೊಟ್ಟ ಸ್ವದೇಶೀ ತಂತ್ರಜ್ಞರ ಸಮಾವೇಶವೇ ಸ್ವತಂಸಮ್.ಇದರ ಅಂತರ್ಜಾಲ ತಾಣ http://swatamsam.in.

ಶನಿವಾರ, ಅಕ್ಟೋಬರ್ 23, 2010

ಸುಪ್ರಸಿದ್ಧ ಉಧೃತಗಳು :: ವ್ಯಕ್ತಿಗಳಾದಿಯಾಗಿ :: Sorted By People


ಪರೀಕ್ಷೆಯನುಸಾರ ಪ್ರಶ್ನೆಪತ್ರಿಕೆಗಳು - ಪ್ರಶ್ನೋತ್ತರ

ನಮಸ್ತೆ... ಕನ್ನಡದಲ್ಲಿ Online ಪ್ರಶ್ನೋತ್ತರಗಳನ್ನ ಒದಗಿಸುವ ಪುಟ್ಟ ಪ್ರಯತ್ನವಿದು ..

ಹವ್ಯಾಸಿ ಇತಿಹಾಸಕಾರನ ಇತ್ಯೋಪರಿಗಳು e - ದಿನವಹಿ

ಸ್ಪರ್ಧಾಪರೀಕ್ಷೆಗಳಿಗೆ ಸ್ಪರ್ಧಾರ್ಥಿ

http://spardharthi.blogspot.com/ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಸಹಾಯ ಮಾಡುವ ಮೊದಲ ಇ-ಪತ್ರಿಕೆಯಂತೆ. ರವಿ, ಪರಶುರಾಮ್, ಲಾವಣ್ಯ, ನಿಹಾರಿಕಾ, ಗೌರಿ, ಪವನ್, ಸ್ಪಂದನಾ ಇವರೆಲ್ಲಾ ಈ ಬ್ಲಾಗಿಗೆ ವಿಷಯ ಒದಗಿಸಿದ್ದಾರೆ. ಪ್ರಚಲಿತ ವಿದ್ಯಮಾನಗಳ ಒಳನೋಟವೂ ಇಲ್ಲಿ ಲಭ್ಯ...... ವಿವಿಧ ಸ್ಥಾನಮಾನಗಳನ್ನು ಹೊಂದಿದವರ ವಿವರಗಳೂ ಇಲ್ಲಿವೆ.ಇಲ್ಲಿಯ ಬರಹಗಳನ್ನು ಫೇಸ್‌ಬುಕ್ ಮೂಲಕ ಪಡೆಯುವ ಸವಲತ್ತೂ ಕೂಡಾ ಇದೆ.ಸುಮಾರು ಎಂಟುನೂರು ಜನ ಫೇಸ್‌ಬುಕ್ ಮೂಲಕ ಸ್ಪರ್ಧಾರ್ಥಿಯನ್ನು ಪಡೆಯುತ್ತಾರೆ.ಈ ಬ್ಲಾಗಿಗೆ ನೂರು ಜನಕ್ಕಿಂತ ಹೆಚ್ಚು ಜನ ಹಿಂಬಾಲಕರಿದ್ದಾರೆ.

ಶುಕ್ರವಾರ, ಅಕ್ಟೋಬರ್ 22, 2010

ಹಬ್ಬ ಸೈಟ್


ಇತ್ತೀಚೆಗಷ್ಟೆ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದೇವೆ. ಇದರ ಹಿನ್ನೆಲೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು. ಜತೆಗೆ ಅನೇಕ ಧರ್ಮಗಳ ಬೀಡಾದ ಭಾರತದಲ್ಲಿ ಸದಾ ಹಬ್ಬಗಳು ಜರುಗುತ್ತಲೇ ಇರುತ್ತವೆ. ಹಾಂಗತ ಎಲ್ಲರಿಗೂ, ಎಲ್ಲಾ ಧರ್ಮಗಳ ಹಬ್ಬಗಳ ಬಗೆಗೂ ಗೊತ್ತಿರುತ್ತದೆ ಅಂತೇನಿಲ್ಲ. ನಿಮಗೇನಾದರೂ ಬೇರೆ ಬೇರೆ ಧರ್ಮಗಳ, ಮಹತ್ವದ ಹಬ್ಬಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸುವುದೇ? ಹಾಗಿದ್ದರೆ ಈ ವೆಬ್ ಸೈಟ್ ಗೆ ಬರಲೇಬೇಕು. ಯಾವ್ಯಾವ ಹಬ್ಬಗಳನ್ನು ಯಾವ್ಯಾವಾಗ, ಎಲ್ಲೆಲ್ಲಿ ಆಚರಿಸುತ್ತಾರೆ? ಅದರ ಮಹತ್ವ ಏನು? ಎನ್ನುವಂತಹ ವಿವರಗಳಿವೆ. ಅಲ್ಲದೆ ಯಾವ ವಿವರ ನಿಮಗೆ ಬೇಕೋ ಅದು ತಕ್ಷಣ ಕೈಗೆಟಕುವಂತೆ ಆಕಾರಾದಿಯಾಗಿ, ತಿಂಗಳುಗಳ ಪ್ರಕಾರ, ಧರ್ಮಗಳ ವಿಭಾಗದ ಮೂಲಕ ಹೀಗೆ ಹೀಗೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ ಇಲ್ಲಿಗೊಮ್ಮೆ ನಿಮ್ಮ ಬೇಟಿ ಜರುಗಲಿ. ಲಿಂಕ್- http://www.festivalsofindia.in/

ಬುಧವಾರ, ಅಕ್ಟೋಬರ್ 20, 2010

ನವ ಕರ್ನಾಟಕದ ಕರ್ತೃ ಭಾರತ ರತ್ನ ಪೂಜ್ಯನಿಯ ಶ್ರೀ ವಿಶ್ವೇಶ್ವರಯ್ಯ


ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯ ವಿಧಾತ ಸರ್  ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮ ದಿನ ಸೆಪ್ಟೆಂಬರ್ 15.
1860 ರಲ್ಲಿ ಮೈಸೂರು ಪ್ರಾಂತ್ಯ (ಈಗಿನ ಕರ್ನಾಟಕ ರಾಜ್ಯ)ಚಿಕ್ಕಬಳ್ಳಪುರದ ಮುದ್ದೇನ ಹಳ್ಳಿ ಯಲ್ಲಿ ಸಂಸ್ಕೃತ ಪಂಡಿತರು, ಆಯುರ್ವೇದಿಕ್ ಪಂಡಿತರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಚಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರ ಜನ್ಮದಿನವನ್ನು ಭಾರತ ದೇಶ "ಇಂಜಿನಿಯರುಗಳ ದಿನ" ವನ್ನಾಗಿ ಆಚರಿಸುತ್ತಿದೆ. ಇತಿ ಹಾಸದ ಪುಟಗಳಲ್ಲಿ ದಾಖಲೆಯಾಗಿರುವ ಸಾಧನೆಗಳನ್ನು ಒಮ್ಮೆ ನೋಡಿ ಭಾರತ ಮಾತೆಯ ವರಪುತ್ರ, ಅಪ್ಪಟ ದೇಶಪ್ರೇಮಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ನಂತರದ ಪ್ರೌಢ ಶಾಲಾ ಹಂತವನ್ನು ಬೆಂಗಳೂರಿನಲ್ಲಿ, 1881 ರಲ್ಲಿ ಬಿ. ಎ. ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಉನ್ನತ ವ್ಯಾಸಂಗ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರ್ ಪದವಿಯನ್ನು 1883 ರಲ್ಲಿ ರ್ಯ್ಯಾಂಕ್ ಪಡೆ ಯುವುದರ ಮೂಲಕ ಸಾಧನೆಯ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದರು. ಬಾಂಬೆ ಸರ್ಕಾರದ ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಪ್ರಾರಂಭ ವಾಯಿತು.
ಬಾಂಬೆಯ ಆಡಳಿತದಲ್ಲಿದ ಸಿಂಧ್ ಪ್ರಾಂತ್ಯದ ಜಲವಿತರಣೆ ಕಾಮಗಾರಿಕೆಯಲ್ಲಿ ಸಿಂಧೂ ನದಿ ಯಿಂದ ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ. ವಿ. ಯವರಿಗೆ ದೊರೆತು ತಮ್ಮ ತಂತ್ರಜ್ಞಾನ, ಚಮತ್ಕಾರಿಕೆಯ ಕಾರ್ಯವೈಖರಿ ಆಡಳಿತ ಸರ್ಕಾರದ ಗಮನ ಸೆಳೆಯಿತು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಪೂರ್ಣ ಗೊಳಿಸಿದರು. ನೂರು ವರ್ಷಗಳ ನಂತರ ಆ ಭಾಗಗಳಲ್ಲಿ ಭಾರೀ ಭೂಕಂಪವಾದರೂ ಯಾವುದೇ ಹಾನಿಯಾಗದೆ ಸರ್ ಎಂ. ವಿ. ಯವರ ಕಾಮಗಾರಿ ಭದ್ರವಾಗಿದೆ.
 
1903 ರಲ್ಲಿ ಪುಣೆಯ ಬಳಿ ಖಡಕ್ ವಾಸ್ಲಾ ಜಲಾಶಯದಲ್ಲಿ ತಮ್ಮ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರ ಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ. 
1909 ರಲ್ಲಿ ಹೈದರಾಬಾದ್, ವಿಶಾಖ ಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣಗೊಳಿಸಿದರು.
 
ಜನಕೋಟಿಯನ್ನು ಆಕರ್ಷಿಸುತ್ತಿರುವ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಆಣೆಕಟ್ಟು
1911 ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ದದು ಎಂದು ಹೆಗ್ಗಳಿಕೆಗೆ ಪಾತ್ರವಾದ ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿ ದರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರಿಟ್ ನಿಂದ ನಿರ್ಮಾಣವಾಗಿದ್ದರೆ, ಕೆ. ಆರ್. ಎಸ್. ಆಣೆಕಟ್ಟು ಸರ್ ಎಂ. ವಿ. ಯವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣ ದಿಂದ ಕಟ್ಟಿದ ಗಟ್ಟಿ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು ಮಂಡ್ಯ, ಬೆಂಗಳೂರು, ತಮಿಳುನಾಡಿಗೆ  ಜೀವಜಲವನ್ನು ನೀಡುತ್ತಿರುವ ವಾಸ್ತುಶಿಲ್ಪ ವಾಗಿದೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತನ್ನಷ್ಟಕ್ಕೆ ತಾನೆ ತೆರೆದು ಕೊಂಡು ಮುನ್ನುಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು  ಮುಂದಾಲೋಚನೆಯಿಂದ ಅಣೆಕಟ್ಟು ನಿರ್ಮಿಸುವಾಗಲೇ ಆಳವಾದ ನಾಲೆ ಯ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಲ್ಲಿ ಬರುವ ಕೃಷ್ಣ ರಾಜ ಸಾಗರ ಆಣೆ ಕಟ್ಟು  ಒಂದು ಲಕ್ಷ ಇಪ್ಪತ್ತು ಸಾವಿರ ಏಕರೆ ಕೃಷಿ ಭೂಮಿಗೆ ನೀರುಣಿಸಿ, ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿದ ಭಾರತದ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಮರೆಯುವಂತಿಲ್ಲ.
ಬೃಂದಾವನ ಉಧ್ಯಾನ ವನದಲ್ಲಿ ವೈವಿಧ್ಯಮಯ ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು, ಪುಷ್ಪಕಾಶಿ ಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.
ಕರ್ನಾಟಕದ ಕನ್ನಡಿಗರ ಭಾಗ್ಯೋದಯ....
1912 ರಲ್ಲಿ ಮೈಸೂರು ಪ್ರಾಂತ್ಯದ ದಿವಾನರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು. ’ಕರ್ನಾಟಕದ ಭಗಿರಥ’ ಎಂದೇ ಕರೆಯಲ್ಪಡುವ ಸರ್ ಎಂ. ವಿ. ಯವರಿಂದ 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ಯಾದ ರೆ, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ಕನ್ನಡ ಭಾಷೆಗೆ ಶತಮಾನದ ಪ್ರಾರಂಭ ದಲ್ಲೆ ಭದ್ರ ಬುನಾದಿ ದೊರೆಯಿತು. ಮೈಸೂರು ಪ್ರಾಂತ್ಯದಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. 1916 ರಲ್ಲಿ ಮೈಸೂರು ವಿಶ್ವ ವಿದ್ಯಾಲಯ ಸ್ಥಾಪಿಸಿ, ನಂತರ ಹುಡುಗಿಯರಿಗಾಗಿ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಸ್ಥಾಪಿಸಿ ಜ್ಞಾನದ ದೀಪ ಬೆಳಗಿದರು. 1912 ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ಒಟ್ಟು 4,500 ಶಾಲೆಗಳಿದ್ದು, ಆರು ವರ್ಷದ ಅವಧಿಯಲ್ಲಿ ಒಟ್ಟು 6,500 ಶಾಲೆಗಳಾಗುವಂತೆ ಮಾಡಿ 1,40,000 ವಿದ್ಯಾರ್ಥಿಗಳಿದ್ದದು 1918 ರಲ್ಲಿ ನಿವೃತಿ ಪಡೆಯುವಾಗ 3,66,000 ವಿದ್ಯಾರ್ಥಿಗಳು ವಿದ್ಯಾಭಾಸ ಪಡೆಯುವಂತಾಯಿತು. ಭಾರತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ  ತರುವಲ್ಲಿ ಮತ್ತು ಹೆಣ್ಣು ಮಕ್ಕಳು ಶಾಲೆಗೆ ತೆರಳಿ ವಿದ್ಯಭಾಸ ಪಡೆಯುವಂತೆ ಪ್ರೋತ್ಸಾಹಿಸಿ ಸಾಕ್ಷರತೆಗೆ ಅಡಿಪಾಯ ಹಾಕಿದವರು ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ ಮಾಡಿದ ಪ್ರಥಮ ಕನ್ನಡಿಗನಾಗಿ ದ್ದಾರೆ. 
1917 ರಲ್ಲಿ ಬೆಂಗಳೂರು ವಿ. ವಿ. ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ. ಭಾರತದಲ್ಲೇ ಪ್ರಾರಂಭ ವಾದ ಪ್ರಥಮ ಇಂಜಿನಿಯರಿಂಗ್ ಕಾಲೇಜು ಕನ್ನಡಿಗನ ಕೊಡುಗೆಯಾಗಿದೆ. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಶ್ರೀಗಂಧ ಎಣ್ಣೆ ತಯಾರಿಕಾ ಕಾರ್ಖಾನೆ ಸ್ಥಾಪಿಸಿದ ಮಹಾನುಭಾವ ಸರ್ ಎಂ. ವಿ. ಯವರು ಸ್ಥಾಪಿಸಿದ ಹಲವಾರು ಸಂಸ್ಥೆ ಗಳಲ್ಲಿ ಕೋಟ್ಯಾಂತರ ಮಂದಿಗೆ ಉದ್ಯೋಗ ಅವಕಾಶ ದೊರೆತು, ಅನ್ನದಾತರಾಗಿರುವುದನ್ನು  ಇಂದಿಗೂ ಸ್ಮರಿಸಿಕೊಳ್ಳುವಂತಾಗಿದೆ.
ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆಗೆ ಬ್ರಿಟಿಷರ ಅಡ್ಡಗಾಲು....
ಸರ್ ಎಂ. ವಿ. ಯವರಿಗೆ ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆ ಸ್ಥಾಪಿಸಬೇಕೆಂದು ಮಹದಾಸೆ ಇತ್ತು. ಅದಕ್ಕಾಗಿ ಅವರು ತಿಂಗಳುಗಟ್ಟಲೆ ಯುರೋಪು, ಅಮೇರಿಕಾ ಸುತ್ತಿ ಬಂದರು. ಸರ್ ಎಂ. ವಿ. ಯವರ ಮನದಾಕಾಂಕ್ಷೆಯ ಯೋಜನೆಗೆ ಮೈಸೂರು ಮಹಾರಾಜರು ಸೂಕ್ತವಾದ ಸ್ಥಳವನ್ನು ನೀಡಿದರು. ಆದರೆ ಆಗಿನ ಆಡಳಿತದಲ್ಲಿದ್ದ ಬ್ರಿಟೀಷ್ ಅಧಿಕಾರಿಗಳು ಇವರ ಯೋಜನೆಗೆ ಅಡ್ಡಕಾಲಿಟ್ಟರು. ಆದರೆ ಎದೆಗುಂದದ ಸರ್. ಎಂ.ವಿ. ಯವರು ಹಿಂದುಸ್ಥಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ ಸ್ಥಾಪಿಸಿದರು. ಸರ್. ಎಂ. ವಿ. ಯವರು ಟಾಟಾ ಇನ್ಸ್ಟಿಟ್ಯೂಟ್ ಮುಖ್ಯಸ್ಥರಿಗೆ ಏರೋನಾ ಟಿಕ್ಸ್ ಪ್ರಾರಂಭಿಸುವಂತೆ ಮಾಡಿದರು ನಂತರ ಇದರ ಫಲವಾಗಿ ಬೆಂಗಳೂರಿನಲ್ಲಿಯೂ ಬಾಹ್ಯ ಕಾಶ ಸಂಶೋಧನಾ ಕೇಂದ್ರ, ವಾಯುಪಡೆ ನೆಲೆಯೂ ಪ್ರಾರಂಭವಾಯಿತು. ಇಂದು ಬೆಂಗಳೂರು ಹಂತ ಹಂತವಾಗಿ ಏರೊನಾಟಿಕ್ಸ್ ಸಂಶೋಧನಾ ಕೇಂದ್ರ, ಉಪಗ್ರಹ ಸಂಪರ್ಕ ಜಾಲ, ಮಾಹಿತಿ ತಂತ್ರ ಜ್ಞಾನ, ಮೆಟ್ರೋ ರೈಲಿನವರೆಗೆ ತಲುಪಿದೆ.
ಸರ್ ಎಂ. ವಿ. ಅಂದಿನ ಅವರ ಕನಸಿನ ತಂತ್ರಜ್ಞಾನ ಭದ್ರ ಭುನಾದಿಯೇ ಇಂದಿನ ವಿಶ್ವ ನಿಬ್ಬೆರ ಗಾಗಿ ನೋಡುವ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ವಿಶ್ವದರ್ಜೆಯ ಮಟ್ಟದಲ್ಲಿ ಬೆಳೆದು ನಿಂತಿದೆ. ಜೋಗದ ಜಲ ವಿದ್ಯುತ್ ಯೋಜನೆ, ಮೈಸೂರು ಸಕ್ಕರೆ ಕಾರ್ಖಾನೆ, ಪ್ರಿಂಟಿಂಗ್ ಪ್ರೆಸ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು ಇವರ ಕೊಡುಗೆ. ಭದ್ರಾವತಿ ಕಾರ್ಖಾನೆಯ ಚೇರ್ ಮೆನ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಸರ್ಕಾರ ವೇತನ ನಿಗಧಿ ಪಡಿಸಿರಲಿಲ್ಲ. ಕೆಲವು ವರ್ಷಗಳ ನಂತರ ಲಕ್ಷಕಿಂತಲೂ ಹೆಚ್ಚು ಹಣವನ್ನು ಪಾವತಿಸಲು ಬಂದಾಗ ಅವರು ಒಂದು ರೂಪಾಯಿ ಸಹ ಮುಟ್ಟಲಿಲ್ಲ, ಆ ಹಣದಿಂದ ಹುಡುಗರ ಪಾಲಿಟೆಕ್ನಿಕ್ ಪ್ರಾರಂಭಿಸಲು ಸಲಹೆ ನೀಡಿದರು!. ಅವರ ಇಚ್ಚೆಯಂತೆ ನೂತನ ಪಾಲಿಟೆಕ್ನಿಕ್ ಪ್ರಾರಂಭಿಸಿ  ಸರ್ ಎಂ. ವಿ. ಯವರ ಹೆಸರನ್ನು  ಇಡಲು ಕೇಳಿಕೊಂಡಾಗ ಅವರು ಮೈಸೂರಿನ ಮಹಾರಾಜರ ಹೆಸರನನ್ನು ಇಡುವಂತೆ ಸೂಚಿಸಿದ ನಂತರ, ಶ್ರೀ ಜಯ ಚಾಮರಾಜೇಂದ್ರ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಬೆಂಗಳೂರು ಸ್ಥಾಪನೆಯಾಯಿತು. ನಂತರ ಭಾರತದ ಬೆನ್ನೆಲುಬು ಅನ್ನ ದಾತ ರೈತರ ಅಭಿವೃದ್ದಿಗಾಗಿ ಬೆಂಗ ಳೂರು ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿದರು.
ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಪುಣ್ಯ ಪುರುಷ...
ಸರ್ ಎಂ. ವಿಶ್ವೇಶ್ವರಯ್ಯ ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಅವತಾರ ಪುರುಷ ನಂತೆ ನಮ್ಮ ಕಣ್ಣಿನ ಮುಂದೆ ಬರುತ್ತಾರೆ. ಅಪ್ಪಟ ಕನ್ನಡಿಗ ಭಾರತದ ಭಾಗ್ಯ ಶಿಲ್ಪಿ, ಕಟ್ಟಾ ಶಿಸ್ತಿನ ಸಿಪಾಯಿ, ದೇಶಭಕ್ತ ಈ ಮಾಹಾ ತಪಸ್ವಿಯನ್ನು ಕಂಡಾಗ ಭಕ್ತಿ ಭಾವ, ಗೌರವ ತುಂಬಿ ಬರುತ್ತದೆ.
ಸರ್ಕಾರಿ ಕೆಲಸ ದೇವರ ಕೆಲಸ...!
ಮೈಸೂರು ಪೇಟಾ ಧರಿಸಿ ಶುಭ್ರ ಉಡುಪನ್ನುಟ್ಟು, ಬೆಳಿಗೆ 7.00 ಗಂಟೆಯಿಂದ ಸೇವಾ ದಿನಚರಿ ಯನ್ನು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾರಂಭಿಸುತ್ತಿದ್ದರು. ಸರ್ ಎಂ. ವಿ. ಯವರು ತಮ್ಮ ಬಂಧುಬಳಗದವರಿಗೆ ತಮ್ಮ ಬಳಿಗೆ ಶಿಪಾರಸು ಉಪಯೋಗಿಸಿ ತಮ್ಮ ತಮ್ಮ ಕೆಲಸವನ್ನು ಮಾಡಿಕೊಡಲು ಬರದಂತೆ ಸೂಚನೆ ನೀಡಿ, ಅದರಂತೆ  ಅಧಿಕಾರ ದುರುಪಯೋಗ ಪಡಿಸದೆ ಪಾಲಿಸಿ ತೋರಿಸಿದ್ದಾರೆ. ಮನೆಯಲ್ಲಿ ರಾತ್ರಿಯ ವೇಳೆ ಕಛೇರಿಯ ಕೆಲಸವನ್ನು ಮಾಡು ವಾಗ ಸರ್ಕಾರ ನೀಡಿದ ದೀಪವನ್ನು ಉರಿಸಿಕೊಂಡು, ಪೆನ್ ಬಳಸುತಿದ್ದರು. ನಂತರ ಸ್ವಂತ ಕೆಲಸಕ್ಕೆ ಸ್ವಂತ ದೀಪ ಪೆನ್ನನ್ನು ಬಳಸುತಿದ್ದರು. ಅದೇ ರೀತಿ ಸರ್ಕಾರದ ಕೆಲಸಕ್ಕೆ ಸರ್ಕಾರದ ಕಾರು, ಸ್ವಂತ ಕೆಲಸಕ್ಕೆ ಸ್ವಂತ ಕಾರು ಬಳಸುತ್ತಿದ್ದ ಅಪ್ಪಟ ದೇಶಪ್ರೇಮಿ.
ಭಾರತದ ರಾಜದಾನಿ ದೆಹಲಿ ಮತ್ತು ದೇಶದ ಪ್ರಮುಖ ನಗರಗಳ ಸೌಂದರ್ಯದ ರೂವಾರಿ ಯಾಗಿರುವ ಸರ್ ಎಂ. ವಿ. ಯವರು ಒರಿಸ್ಸಾ ರಾಜ್ಯದ ಹಿರಾಕುಡ್ ಆಣೆಕಟ್ಟು, ಯಮೆನ್ ರಾಷ್ಟ್ರದ ನಿರಾವರಿ ವ್ಯವಸ್ಥೆ, ಈಡನ್ ನಗರದ ನೀರಿನ ವ್ಯವಸ್ಥೆ, ವಿದೇಶದಲ್ಲಿ ಬೃಹತ್ ವಾಸ್ತುಶಿಲ್ಪ ರಚನೆ ಮಾಡಿದ ನಂತರ ಮುಖ್ಯವಾದ ಒಂದು ಕಲ್ಲಿನಲ್ಲಿ " ಮೇಡ್ ಇನ್ ಇಂಡಿಯಾ" ಕೆತ್ತಿಸಿ ಇಟ್ಟಿದ್ದಾರೆ. ಯಾರದಾರೂ ಭಾರತ ದೇಶದ ಬಗ್ಗೆ ಸಣ್ಣತನ ತೋರಿಸಿ ಆ ಕಲ್ಲನ್ನು ಕಿತ್ತು ತೆಗೆದರೆ ಪೂರ್ತಿ ವಾಸು ಶಿಲ್ಪ ಕುಸಿದು ಬೀಳುವ ರೀತಿಯಲ್ಲಿ ಭಾರತೀಯ ತಂತ್ರ ಜ್ಞಾನದ ಹಸ್ತಕೌಶಲ್ಯವನ್ನು ವಿದೇಶಿಯರಿಗೆ ತೋರಿಸಿಕೊಟ್ಟಿದಾರೆ.

ಸರ್ ಎಂ. ವಿ. ಯವರು ಸೇವೆ ಸಲ್ಲಿಸಿದ ಸಂಸ್ಥೆಗಳು.
~ ಸಹಾಯಕ ಇಂಜಿನಿಯರ್, ಬಾಂಬೆ ಸರ್ಕಾರಿ ಸೇವೆ (1884)
~ ಚೀಫ್ ಇಂಜಿನಿಯರ್, ಹೈದರಬಾದ್ ರಾಜ್ಯ (1909)
~ ಚೀಫ್ ಇಂಜಿನಿಯರ್ ಮೈಸೂರು ರಾಜ್ಯ (1909) ಕಾರ್ಯದರ್ಶಿ - ರೈಲ್ವೆಸ್.
~ ಅಧ್ಯಕ್ಷರು, ಎಜುಕೇಶನ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಮಿಟೀಸ್ ಇನ್ ಮೈಸೂರು ರಾಜ್ಯ
~ ದಿವಾನ್ ಆಫ್ ಮೈಸೂರು 1912- 18
~ ಚೇರ್ಮನ್, ಭದ್ರಾವತಿ ಉಕ್ಕಿನ ಕಾರ್ಖಾನೆ.
~ ಸದಸ್ಯರು, ಆಡಳಿತ ಮಂಡಳಿ- ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್ ಬೆಂಗಳೂರು.
~ ಸದಸ್ಯರು, ಆಡಳಿತ ಮಂಡಳಿ ಟಾಟಾ ಕಬ್ಬಿಣ ಮತ್ತು ಉಕ್ಕಿನ ಸಂಸ್ಥೆ
~ ಸದಸ್ಯರು, ಬ್ಯಾಕ್ ಬೇ ಎನ್ಕೈರಿ ಕಮಿಟಿ, ಲಂಡನ್
~ ಸದಸ್ಯರು, ಭವಿಷ್ಯ ಭಾರತದ ರಾಜ್ಯಗಳ ಸಂವಿಧಾನಾತ್ಮಕ ಸಲಹಾ ಸಮಿತಿ (1917): ಭಾರತದ ಸಂವಿಧಾನದಲ್ಲಿ ಕಡ್ಡಾಯ ಶಿಕ್ಷಣ ಜಾರಿಗೊಳಿಸಲು ಸಲಹೆ ನೀಡಿಕೆ.

ಸರ್ ಎಂ .ವಿ. ಯವರ ಹೆಸರಿನ ಮೂಲಕ ಗೌರವ ನೀಡಿ ಸೇವೆ ಸಲ್ಲಿಸುತ್ತಿ ರುವ ಸಂಸ್ಥೆಗಳು
* ವಿಶ್ವೇಶ್ವರಯ್ಯ ಟೆಕ್ನಾಲಜಿ ಯೂನಿವರ್ಸಿಟಿ ಬೆಳಗಾಂ.
* ವಿಶ್ವೇಶ್ವರಯ್ಯ ಇನ್ಸ್ಟ್ಯೂಟ್ ಅಫ್ ಅಡ್ವಾನ್ಸ್ಡ್ ಟೆಕ್ನಾಲಜಿ - ಮುದ್ದೇನ ಹಳ್ಳಿ ಕಣಿವೆನಾರಾಯಣ ಪುರ
* ಇಂಡಿಯನ್ ಇನ್ಸ್ಟ್ಯೂಟ್ ಅಫ್ ಟೆಕ್ನಾಲಜಿ ಮುದ್ದೇನ ಹಳ್ಳಿ - ಸರ್ ಎಂ. ವಿ. ಯವರ ಜನ್ಮಸ್ಥಳ
* ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್ - ಬೆಂಗಳೂರು.
* ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಕಾಲೇಜ್
* ಸರ್ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ- ಬೆಂಗಳೂರು.
* ವಿಶ್ವೇಶ್ವರಯ್ಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ ನಾಗಪುರ
* ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಜಿ ಮ್ಯೂಸಿಯಂ - ಬೆಂಗಳೂರು.
* ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರಾವತಿ.
* ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ - ಕಾಲೇಜ್ ಅಫ್ ಇಂಜಿನಿಯರಿಂಗ್ - ಪುಣೆ
* ಸರ್ ಎಂ. ವಿಶ್ವೇಶ್ವರಯ್ಯ ಹಾಸ್ಟೆಲ್ - ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ - ಬನಾರಸ್ ಹಿಂದೂ    ಯೂನಿವರ್ಸಿಟಿ (ಏಶ್ಯಾದಲ್ಲೇ ಅತಿ ದೊಡ್ದ ರೆಶಿಡೆನ್ಸಿಯಲ್ ಯೂನಿವರ್ಸಿಟಿ)
* ಕರ್ನಾಟಕ ಇಂಡಸ್ಟ್ರಿಯಲ್ ಕೋಪರೇಟಿವ್ ಬ್ಯಾಂಕ್ ಲಿಮಿಟೆಡ್.
* ಎನ್. ಐ. ಟಿ. ರೂರ್ಕೆಲಾ - ವಿಶ್ವೇಶ್ವರಯ್ಯ ಸಭಾಂಗಣ

ಸರ್ ಎಂ. ವಿ.ಯವರ ಪುಸ್ತಕಗಳು :
’ರಿ ಕನ್ಸ್ಟ್ರಕ್ಷನ್ ಇಂಡಿಯಾ - ( 1934 ), ’ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ.
ತಮ್ಮ 94 ರ ಇಳಿ ವಯಸ್ಸಿನಲ್ಲಿಯೂ ’ಪ್ಲಾನಿಂಗ್’ ನ ಬಗ್ಗೆ ಪುಸ್ತಕ ಬರೆಯುತಿದ್ದರು.
ಸರ್ ಎಂ. ವಿ. ಯವರಿಗೆ ದೊರೆತ ಗೌರವ, ಪ್ರಶಸ್ತಿಗಳು
* 1904  - ಗೌರವ ಸದಸ್ಯತ್ವ, ಲಂಡನ್ ಇನ್ಸ್ಟಿಟ್ಯೂಶನ್ ಅಫ್ ಸಿವಿಲ್ ಇಂಜಿನಿಯರ್ಸ್ - 50 ವರ್ಷಗಳ ವರೆಗೆ
* 1906  - ಕೈಸರ್ - ಇ - ಹಿಂದ್
* 1911  - ಸಿ. ಐ. ಇ. (ಕಾಂಪನಿಯನ್ ಅಫ್ ದಿ ಇಂಡಿಯನ್ ಏಂಪೈರ್) ದೆಹಲಿ ದರ್ಬಾರ್ ನಲ್ಲಿ
* 1915  - ಕೆ.ಸಿ. ಐ. ಇ. (ನೈಟ್ ಕಮಾಂಡರ್ ಅಫ್ ದಿ ಆರ್ಡರ್ ಅಫ್ ದಿ ಇಂಡಿಯನ್ ಏಂಪೈರ್)
* 1921  - ಡಿ. ಎಸ್ ಸಿ - ಕಲ್ಕತಾ ಯೂನಿವರ್ಸಿಟಿ
* 1931  - ಎಲ್ ಎಲ್ ಡಿ - ಬಾಂಬೆ ಯೂನಿವರ್ಸಿಟಿ
* 1937 - ಡಿ. ಲಿಟ್. - ಬನಾರಸ್ ಯೂನಿವರ್ಸಿಟಿ
* 1943  - ಅಜೀವ ಸದಸ್ಯತ್ವ - ಇನಿಸ್ಟಿಟ್ಯೂಶನ್ ಅಫ್ ಇಂಜಿನೀಯರ್ಸ್ - ಭಾರತ
* 1944  - ಡಿ. ಎಸ್ ಸಿ. - ಅಲಹಾಬಾದ್ ಯೂನಿವರ್ಸಿಟಿ
* 1948  - ಡಾಕ್ಟರೇಟ್ - ಎಲ್ ಎಲ್ ಡಿ., ಮೈಸೂರು ಯೂನಿವರ್ಸಿಟಿ
* 1953   - ಡಿ. ಲಿಟ್. - ಆಂದ್ರ ಯೂನಿವರ್ಸಿಟಿ
* 1955  - ಭಾರತ ರತ್ನ (ಭಾರತದ ಅತ್ಯುನ್ನತ ಗೌರವದ ಪ್ರಶಸ್ತಿ)
* 1958  - ದುರ್ಗಾ ಪ್ರಸಾದ್ ಕೈತಾನ್ ಮೆಮೊರಿಯಲ್ ಗೋಲ್ಡ್ ಮೆಡಲ್ -ರಾಯಲ್ ಏಶಿಯಾಟಿಕ್ ಸೊಸೈಟಿ ಕೌನ್ಸಿಲ್, ಬಂಗಾಳ* 1959 - ಫೆಲೋಶಿಫ್ - ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ - ಬೆಂಗಳೂರು

ಸರ್ ಎಂ. ವಿ ಯವರ ಶತವರ್ಷ ಜನ್ಮದಿನಾಚರಣೆ - 1960
ಭಾರತ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯ ನವರ ಶತ ಜನ್ಮ ದಿನಾಚರಣೆ ಸಮಾರಂಭ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಆಚರಿಸಲಾಯಿತು. ಆಗಿನ ಭಾರತದ ಪ್ರಧಾನ ಮಂತ್ರಿಯಾ ಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ ರವರು ವಿಶೇಷ ವಿಮಾನದಲ್ಲಿ ಅಗಮಿಸಿದ್ದು ಸಮಾ ರಂಭದ ಅಧ್ಯಕ್ಷತೆಯನ್ನು ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಓಡೆ ಯರ್ ವಹಿಸಿದ್ದರು.
ಅಂದಿನ ಸಮಾರಂಭದ ಸವಿನೆನಪಿಗಾಗಿ ಭಾರತ ಸರ್ಕಾರ ಸರ್ ಎಮ್. ವಿ. ಯವರ ಭಾವ ಚಿತ್ರದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು.
ಸರ್ ಎಂ. ವಿ ಯವರು ದಿವಂಗತರಾಗಿದ್ದು ಏಪ್ರಿಲ್ 12, 1962
ದೇಶ ಕಂಡ ಮಾಹಾನ್ ಚೇತನ 102  ವರ್ಷ 6 ತಿಂಗಳು 8 ದಿನ ಬದುಕಿ ದೇಶ ಸೇವೆಯನ್ನು ಮಾಡಿ ಶಿಸ್ತಿನ ಜೀವನ ನಡೆಸಿ ತಮ್ಮ ಕೊನೆಯುಸಿರು ಎಳೆದರು. ಅವರ ಜನ್ಮ ಸ್ಥಳವಾದ ಮುದ್ದೆನ ಹಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸ ಲಾಯಿತು, ಆ ಸ್ಥಳದಲ್ಲಿ ಸರ್ ಎಂ. ವಿ. ಯವರ ಸುಂದರವಾದ ಸ್ಮಾರಕ ನಿರ್ಮಿಸಲಾಗಿದೆ.
ಭಾರತದ ಇತಿಹಾಸದ ಪುಟಗಳಲ್ಲಿ ಹಲವಾರು ಮಹಾತ್ಮರ ಹೆಜ್ಜೆ ಗುರುತುಗಳು ಮುಚ್ಚಿಹೋಗಿ ವೆ. ಸರ್ ಎಂ. ವಿ. ಯವರ ಜನ್ಮ ದಿನದ ಈ ಸುಸಂದರ್ಭದಲ್ಲಿ ಅವರನ್ನು ನೆನಪು ಮಾಡಿ ಕೊಂಡು ಅವರಿಗೆ ಗೌರವ ಸಲ್ಲಿಸಿ, ಅವರ ಅದರ್ಶಗಳಲ್ಲಿ ಕೆಲವನ್ನಾದರೂ ಪಾಲಿಸಿದರೆ ಭಾರತ ದಲ್ಲಿ ಜನ್ಮ ಪಡೆದುದಕ್ಕೆ ಸಾರ್ಥಕವಾದೀತು.

ಭಾನುವಾರ, ಅಕ್ಟೋಬರ್ 17, 2010

400 ವರ್ಷಗಳ ದಸರಾ ಇತಿಹಾಸ ಹೇಳುವ ಕಥೆ ಇದು… !

 
ಮೈಸೂರು: ಇಂದಿನ ಮೈಸೂರು ‘ಮಹಿಷೂರು’ ಆಗಿದ್ದಾಗ ಹದಿನಾಡು ಗ್ರಾಮದಿಂದ ಬಂದ ಅರಸು ಜನಾಂಗದ ಮನೆತನವೊಂದು ಇತ್ತು. ದೂರದಿಂದ ಬಂದ ಯದುರಾಯನಿಗೆ ಸದ್ಗುಣ ಸಂರಕ್ಷಕನೆಂದು ತಿಳಿದು ಇದೇ ಕುಟುಂಬ ನಂಟು ಬೆಳೆಸಿತು. ಆಗ ಯದುರಾಯ ಈ ಸಣ್ಣ ಊರೊಂದರ ನೇತೃತ್ವ ವಹಿಸಿದ. ರಾಜನೆಂದು ಕರೆದರು. ಮುಂದಿನ ಉತ್ತರಾಧಿಕಾರಿಗಳಿಗೆಲ್ಲ ಹೆಸರಿನ ಮುಂದೆ ‘ಒಡೆಯರ್’ ಎಂದು ಸೇರಿಸಿಕೊಂಡು, ಕದಂಬ, ಗಂಗ, ಚಾಲುಕ್ಯರಂತೆ ಈ ಮನೆತನವೂ ಆಳ್ವಿಕೆ ನಡೆಸಲು ಪ್ರಾರಂಭಿಸಿತು. ಈ ಒಡೆಯರ್ ಎಂಬ ರಾಜಮನೆತನದಲ್ಲಿ ಪ್ರಜಾಪ್ರಭುತ್ವ ಬರುವವರೆಗೆ ‘ರಾಜತ್ವ’ ನೀಡಿದವರು 25 ಮಂದಿ. ಈ ಪೈಕಿ ಯದುರಾಯ, ಒಬ್ಬ ರಣಧೀರ ಕಂಠೀರವ, ಇನ್ನೊಬ್ಬ ತಿಮ್ಮರಾಜ, ಮತ್ತಿಬ್ಬರು ರಾಜ ಒಡೆಯರ್, ಹತ್ತು ಮಂದಿ ಚಾಮರಾಜರು, ನಾಲ್ವರು ಕೃಷ್ಣರಾಜರು, ಕೊನೆಯದಾಗಿ ಜಯಚಾಮರಾಜೇಂದ್ರ ಆಗಿ ಹೋದವರು.
ಈ ಒಡೆಯರ ಹೆಸರಿನ ರಾಜರು ಗಂಡಭೇರುಂಡ ಲಾಂಛನ ಹೊತ್ತು ಎರಡು ಕಡೆ ಆಳ್ವಿಕೆ ನಡೆಸಿದ್ದಾರೆ. ಒಂದು ಮೈಸೂರು ಮತ್ತೊಂದು ಶ್ರೀರಂಗಪಟ್ಟಣ, ಮೊದಲಿಂದ ಐವರು ಮೈಸೂರನ್ನು ಕೇಂದ್ರವಾಗಿರಿಸಿಕೊಂಡರೆ 6 ರಿಂದ 21ರವರೆಗಿನ ರಾಜರು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ನಂತರದ ನಾಲ್ವರು ಮತ್ತೆ ಮೈಸೂರಿಗೆ ಸ್ಥಳಾಂತರವಾಗಿ ಅಧಿಕಾರ ನಡೆಸಿದ್ದಾರೆ. ಹಲವರು ಯುದ್ಧ ಮಾಡಿದ್ದರೆ ಮತ್ತೆ ಕೆಲವರು ಇಂಗ್ಲಿಷರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಪ್ರಜಾಪ್ರಭುತ್ವ ಪದ್ಧತಿಯೊಂದಿಗೆ ಅಪ್ಪಿಕೊಂಡು ರಾಜತ್ವ ಸಾಧಿಸಿದವರಿದ್ದಾರೆ.
ಈ ಹಿನ್ನೆಲೆಯಲ್ಲಿ ಎಂದೋ ವಿಜಯನಗರದಲ್ಲಿ ನಡೆದಿದ್ದ ಮಹಾನವಮಿ ಆಚರಣೆಯನ್ನು ಪುನರ್ ಜಾರಿಗೊಳಿಸಿ ವೈಭವೀಕರಿಸಬೇಕೆಂದು ರಾಜ ಒಡೆಯರ್ ಇಂದಿಗೆ 400 ವರ್ಷಗಳ ಹಿಂದೆ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಈ ದಸರೆಯ ದಿಬ್ಬಣವನ್ನು ಗೌರಿ ಕಡುವೆ ಎಂಬ ಸ್ಥಳದಲ್ಲಿ ಪುನಾರಂಭಿಸಿದರು.
ಈತ ದಸರೆ ಪದ್ಧತಿಗೊಂದು ಕಟ್ಟಳೆ ರೂಪಿಸಿದ. ಇದೇ ಸಂದರ್ಭದಲ್ಲಿ ಸಿಂಹಾಸನವನ್ನೇರಿದ. ಕೆಲ ಊರುಗಳನ್ನೂ ಗೆದ್ದ. ದಳವಾಯಿ ಹುದ್ದೆಯನ್ನು ಸೃಷ್ಟಿಸಿದ. ದಸರೆಯನ್ನು ಈತ ರಾಜನ ವಾರ್ಷಿಕ ವರದಿ, ಆಡಳಿತದ ಪ್ರತಿಬಿಂಬ ಜನಮುಖಿ ಕಾರ್ಯಕ್ರಮವೆಂದುಕೊಂಡು ಆಳಿದವನು. ಇದೇ ಮಾದರಿಯಲ್ಲಿ ಮುಂದಿನ ಎಲ್ಲಾ ದಸರೆಗಳೂ ನಡೆದಿವೆ. ಆ ವೈಭವವನ್ನು ಮುಂದೆ ಬಂದ ರಾಜರು ತರಲಾಗದಿದ್ದರೂ ಯಾವ ಮಾರ್ಪಾಡನ್ನೂ ಮಾಡಿಲ್ಲ.ಕೆಲವು ಬಿಟ್ಟು ಹೋಗಿವೆ. ಹಲವು ಆಧುನಿಕ ಸ್ಪರ್ಶಕ್ಕೆ ಸಿಕ್ಕಿವೆ. ಇದೊಂದು ಪರಂಪರೆಯಾಗಿ ಶ್ರೀರಂಗಪಟ್ಟಣದಿಂದ ಮೈಸೂರಿನ ಬನ್ನಿಮಂಟಪದವರೆಗೆ ಬಂದು ನಿಂತಿದೆ. ಮೈಸೂರಿನ ದಸರೆ ಪ್ರಾರಂಭವಾಗಿ (ಮುಮ್ಮಡಿ ಕೃಷ್ಣರಾಜ ಒಡೆಯರ್) 205ನೇ ವರ್ಷ ತುಂಬುತ್ತಿದೆ.
ಬದಲಾದ ಕಾಲಘಟ್ಟದಲ್ಲಿ ಮೆರವಣಿಗೆಯಲ್ಲಿ ಹೊಸದು ತುಂಬಿಕೊಂಡಿದೆ. ಆಡಳಿತ, ಹಣಬಲದ ಅನುಕೂಲ ನೋಡಿಕೊಂಡು ಜಂಬೂಸವಾರಿಯಂತೂ ಸಾಗಿದೆ. ಆದರೆ ಅರಮನೆಯ ಅಂತರಂಗದಲ್ಲಿ ನಡೆಯುವ ದಸರೆ ಹಬ್ಬ ಪೂಜೆ-ಪುನಸ್ಕಾರ, ಕಲಾಪಗಳು ಒಂದಿಷ್ಟೂ ಬದಲಾಗಿಲ್ಲ. ಅದೇ ಕಂಕಣ, ಅದೇ ದೇವಪೂಜೆ, ಅದೇ ದರ್ಬಾರ್, ಅದೇ ವ್ಯವಸ್ಥೆ ಶಿಸ್ತುಗಳು ಇಂದೂ ಖಾಸಗಿ ದರ್ಬಾರ್ನಲ್ಲೂ ಸಾಕ್ಷೀಭೂತವಾಗಿದೆ. ಎಲ್ಲರಿಗೂ, ರಾಜ್ಯಕ್ಕೂ ಅದೇ ಅಧಿದೇವತೆ ಚಾಮುಂಡೇಶ್ವರಿ. ಈ ಹಿನ್ನೆಲೆಯಲ್ಲಿ ಈ ರಾಜ ಮಹಾರಾಜರು ಮಾಡಿದುದನ್ನೂ ಸೂಕ್ಷ್ಮವಾಗಿ ಗುರುತಿಸುವುದು ಈಗ ಸೂಕ್ತ. ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಚಾಮುಂಡಿಬೆಟ್ಟದಲ್ಲಿ ಹಿರೀಕೆರೆ ಕಟ್ಟಿಸಿದರು. ಬಿರುದಂತೆಂಬರ ಗಂಡ ಬಿರುದನ್ನು ತಿಮ್ಮರಾಜ ಹೊತ್ತ, ಸುಗುಣ ಗಂಭೀರನೆಂದು ಬೋಳ ಚಾಮರಾಜ ಕರೆಸಿಕೊಂಡ. ರಣಧೀರ ಕಂಠೀರವ ನರಸಿಂಹರಾಜ ತಿರುಚಿನಾಪಳ್ಳಿ ಜಟ್ಟಿಯನ್ನುಹೊಡೆದ. ಆಯುಧ ಶಾಲೆ ಕಟ್ಟಿಸಿದ. ಮೈಸೂರಿನಲ್ಲಿ ಕೋಟೆಯನ್ನು ಬಲಪಡಿಸಿ ಫಿರಂಗಿಗಳನ್ನಿಟ್ಟು, ಚಿಕ್ಕದೇವರಾಜ ಒಡೆಯರ್ 18 ಇಲಾಖೆಗಳನ್ನೂ ಅಂಚೆ ಪದ್ಧತಿಯನ್ನು ಜಾರಿಗೊಳಿಸಿದ. ಅರಸು ಮನೆತನದ ಗಣತಿ ಕಾರ್ಯ ನಡೆಸಿದ. ಬೆಟ್ಟದ ಭೀಮರಾಜರಿದ್ದಾಗ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ರಥಕ್ಕೂ ಮದ್ದಿನಮನೆಗಳಿಗೂ ಬೆಂಕಿ ಬಿತ್ತು. ಖಾಸಾ ಭೀಮರಾಜರಿದ್ದಾಗಲೇ ಹೈದರ್- ಟಿಪ್ಪು ಅಧಿಕಾರಕ್ಕೆ . ಮುಮ್ಮಡಿ ಕಾಲದಲ್ಲಿ ಇಂಗ್ಲಿಷರ ಪ್ರಾಬಲ್ಯ. ಆದರೂ ಸಾಹಿತ್ಯ-ಸಂಗೀತಕ್ಕೆ ಪೋಷಣೆ. ಒಡೆಯರ್ ಕಾಲದಲ್ಲಿ ಆಧುನಿಕ ಶಿಕ್ಷಣ, ಪ್ರಜಾಸತ್ತೆಯ ಕಲ್ಪನೆ ರೂಪ ಪಡೆದುಕೊಂಡಿತು. ನಾಲ್ವಡಿಯವರಿಂದ ಸಾಮಾಜಿಕ -ಕೈಗಾರಿಕೆ ಅಭಿವೃದ್ಧಿ ಜಯಚಾಮರಾಜೇಂದ್ರರ ಕಾಲದಲ್ಲಿ ರಾಜತ್ವ ಹಿಂದೆ ಸರಿದು ಪ್ರಜಾಪ್ರಭುತ್ವ ಪ್ರತ್ಯಕ್ಷವಾಯಿತು.
ಈ ಎಲ್ಲಾ ರಾಜರೂ ಹತ್ತಿತರದ ಸಂಬಂಧಿಗಳಾದ ಹಳ್ಳಿಯ ಹುಡುಗಿಯರನ್ನು ರಾಣಿಯರನ್ನಾಗಿ ಮಾಡಿಕೊಂಡಿದ್ದಾರೆ. ಇಬ್ಬರಿಂದ ಹತ್ತು ಮಂದಿವರೆಗೆ ಹಾಗೂ ಒಂದಿಬ್ಬರು ದೂರದ ರಾಜಸ್ಥಾನದವರನ್ನು ಮದುವೆಯಾದವರಿದ್ದಾರೆ.
ಆದಷ್ಟೂ ಜನಮುಖಿಯಾಗಿ ನಡೆದುಕೊಂಡು ಜನರಲ್ಲಿ ವಿಶ್ವಾಸ, ಭಕ್ತಿ ರೂಢಿಸಿಕೊಂಡ ರಾಜಮನೆತನ ಇದಾಗಿದೆ. ದಾನ, ಧರ್ಮ, ಧರ್ಮಕಾರಣ, ಜನೋಪಯೋಗಿ, ಲೋಕೋಪಯೋಗಿ ಕೆಲಸ ಮಾಡಿದವರೇ ಹೆಚ್ಚು. ಮೈಸೂರು ಒಡೆಯರ್ ಮನೆತನದಲ್ಲಿ ವರ್ಣರಂಜಿತ ಮತ್ತು ವಿವೇಕತನದಲ್ಲಿ ಬಾಳಿದವರೂ ಇದ್ದಾರೆ. ಇವರನ್ನು ನಂಬಿದವರಿಗೆಲ್ಲ ಇವರೊಂದಿಗೆ ಕಷ್ಟ ನಷ್ಟ ಹೇಳಿಕೊಂಡವರಿಗೆಲ್ಲ ಫಲ ಸಿಕ್ಕಿದೆ. ಆ ಮೂಲಕ ರಾಜ್ಯಕ್ಕೂ ಒಳ್ಳೆಯದೇ ಆಗಿದೆ.

ಶುಕ್ರವಾರ, ಅಕ್ಟೋಬರ್ 15, 2010

ಮುಖೇಶ್ ಅಂಬಾನಿ ಶತಕೋಟಿ ರು.ಗಳ ಅರಮನೆ!

ಜಗತ್ತಿನ ನಾಲ್ಕನೆ ಅತಿ ಶ್ರೀಮಂತ ಮುಖೇಶ್ ಅಂಬಾನಿ ಜಗತ್ತಿನ ಪ್ರಪ್ರಥಮ ಶತಕೋಟಿ (2 ಶತಕೋಟಿ ಡಾಲರ್) ವೆಚ್ಚದ ಮನೆಯೊಂದನ್ನು ಮುಂಬೈಯಲ್ಲಿ ನಿರ್ಮಿಸಿದ್ದಾರೆ. 27 ಮಹಡಿಗಳ ಈ ಮನೆ 173 ಮೀಟರ್ ಎತ್ತರವಿದೆ. ಸುಮಾರು 630 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದ್ದು, ಇಷ್ಟು ವೆಚ್ಚದ ಮನೆ ಜಗತ್ತಿನಲ್ಲೇ ಪ್ರಥಮ ಎನ್ನಲಾಗಿದೆ.

ಈ ಅರಮನೆಯಲ್ಲಿ ಅಂಬಾನಿ, ಅವರ ಪತ್ನಿ ಮತ್ತು ಮೂವರು ಮಕ್ಕಳು ವಾಸಿಸಲಿದ್ದಾರೆ. ಮನೆಯಲ್ಲಿ ವಿಶಾಲವಾದ ಜಿಮ್ ಮತ್ತು ನೃತ್ಯ ಸ್ಟುಡಿಯೊವನ್ನು ಹೊಂದಿರುವ ಆರೋಗ್ಯ ಕ್ಲಬ್ ಇದೆ. ಒಂದು ಈಜು ಕೊಳ, ಅತಿಥಿ ಕೋಣೆ, ವಿವಿಧ ರೀತಿಯ ಅಂಗಣಗಳು, 50 ಮಂದಿ ಕುಳಿತುಕೊಳ್ಳಬಹುದಾದ ಸಿನೆಮಾ ಮಂದಿರ ಮನೆಯೊಳಗೇ ಇದೆ ಎಂದು ವರದಿಯೊಂದು ಹೇಳಿದೆ.
ಮನೆಯ ಛಾವಣಿಯಲ್ಲಿ ಮೂರು ಹೆಲಿಪ್ಯಾಡ್‌ಗಳಿದ್ದು, ಕೆಳಗಿನ ಅಂತಸ್ತಿನಲ್ಲಿ ಸುಮಾರು 160 ವಾಹನಗಳನ್ನು ನಿಲ್ಲಿಸುವ ವಿಶಾಲವಾದ ಸ್ಥಳಾವಕಾಶವಿದೆ. ಅತಿಥಿಗಳನ್ನು ಪ್ರಾಂಗಣದಿಂದ ಕಾರ್ಯಕ್ರಮಗಳು ನಡೆಯುವ ವಿವಿಧ ಮಹಡಿಗಳಿಗೆ ತಲುಪಿಸಲು ಕಟ್ಟಡದಲ್ಲಿ 9 ಲಿಫ್ಟ್‌ಗಳಿವೆ. ಕಟ್ಟಡದ ಮೇಲಿನ ಮಹಡಿಯಲ್ಲಿ 53ರ ಹರೆಯದ ಉದ್ಯಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ನಗರ ಮತ್ತು ಸಮುದ್ರದ ಸವಿಯನ್ನು ವೀಕ್ಷಿಸಲು ಅನುಕೂಲವಿದೆ.
ಕಟ್ಟಡವು 37,000 ಚದರ ಮೀಟರ್ ವಿಸ್ತಾರವಿದ್ದು, ಇದು ವೆರ್ಸಲಿಸ್ ಅರಮನೆಗೂ ದೊಡ್ಡದಾಗಿದೆ. ಇಷ್ಟು ದೊಡ್ಡ ಮನೆಯನ್ನು ಸರಿಯಾಗಿ ನಿರ್ವಹಿಸಲು ಸುಮಾರು 600 ಸಿಬ್ಬಂದಿ ಸೇವೆಗಿದ್ದಾರೆ. ಈ ಮನೆಯನ್ನು ನಿರ್ಮಿಸಲು 44 ಮಿಲಿಯನ್ ಪೌಂಡ್‌ನಲ್ಲಿ ನಿರ್ಮಿಸಲು ಅಂದಾಜಿಸಲಾಗಿತ್ತು. ಆದರೆ ಮುಂಬೈಯ ಪ್ರಮುಖ ಕೇಂದ್ರದಲ್ಲಿ ಭೂಮಿ ಮತ್ತು ಆಸ್ತಿ ವೌಲ್ಯ ಆ ಅಂದಾಜಿನಿಂದ 15 ಪಟ್ಟು ಅಧಿಕ ವೌಲ್ಯವನ್ನು ಈ ಮನೆಗೆ ನೀಡಿದೆ. ಹೀಗಾಗಿ ಈ ಮನೆಯ ನಿರ್ಮಾಣ ವೆಚ್ಚ 630 ಮಿಲಿಯನ್ ಪೌಂಡ್ ಆಗಿದೆ ಎಂದು ಅಂದಾಜಿಸಲಾಗಿದೆ.

ಬುಧವಾರ, ಅಕ್ಟೋಬರ್ 13, 2010

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್

ಮೊಬೈಲ್ ಬಳಕೆದಾರರಿಗೆ ಕನ್ನಡ ಸುದ್ದಿಗಳನ್ನು ಎಸ್ಎಮ್ಎಸ್ ಮುಖಾಂತರ ದಟ್ಸ್ ಕನ್ನಡ [^] [^] ತಲುಪಿಸುತ್ತಿರುವುದು ನಮ್ಮ ಓದುಗರಿಗೆ ತಿಳಿದ ವಿಚಾರ. ಈ ನಮ್ಮ ಸೇವೆಯನ್ನು ಬಳಕೆದಾರರು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಆದರೆ, ಅನೇಕ ಮೊಬೈಲ್ ಹ್ಯಾಂಡ್ ಸೆಟ್ ಗಳು ಕನ್ನಡ ಅಕ್ಷರಗಳಿಗೆ ಬೆಂಬಲ ನೀಡದ ಕಾರಣ ಸಾವಿರಾರು ಓದುಗರು ಮೋಬೈಲಲ್ಲಿ ಕನ್ನಡ ಓದುವ ಅವಕಾಶದಿಂದ ವಂಚಿತರಾಗಿದ್ದಾರೆ.

ಕನ್ನಡ ಓದಬಯಸುವ ಪ್ರತಿ ಮೊಬೈಲ್ ಬಳಕೆದಾರರಿಗೆ ತಾಜಾ ಕನ್ನಡ ಸುದ್ದಿ [^]ಗಳನ್ನು ತಲುಪಿಸಬೇಕೆಂಬ ಒತ್ತಾಸೆ ನಮ್ಮದು. ಈ ಕಾರಣದಿಂದಾಗಿ ಆಂಗ್ಲ ಲಿಪಿಯಲ್ಲಿಯೇ ದಟ್ಸ್ ಕನ್ನಡ ಸುದ್ದಿ ಸಂದೇಶಗಳನ್ನು ನೀಡುವ ಉದ್ದೇಶದಿಂದ ಹೊಸ ಪದ್ಧತಿಯನ್ನು ಮೈಟುಡೆ.ಕಾಂ ಪ್ರಾರಂಭಿಸಿದೆ. ಕನ್ನಡ ಲಿಪಿ ಸಪೋರ್ಟ್ ಮಾಡ ಮೊಬೈಲ್ ಬಳಕೆದಾರರ ಆಗ್ರಹದ ಮೇರೆಗೆ ಈ ಹೆಚ್ಚುವರಿ ಸೇವೆಯನ್ನು ಪ್ರಾರಂಭಿಸಲಾಗಿದೆ.

ಮೊಬೈಲನ್ನು ಲಕ್ಷಾನುಲಕ್ಷ ಕನ್ನಡ ಭಾಷಿಗರು ಉಪಯೋಗಿಸುತ್ತಿದ್ದಾರೆ. ಮಾತೃಭಾಷೆಯಲ್ಲಿಯೇ ಸುದ್ದಿಗಳನ್ನು ಓದಬೇಕೆಂಬ ಆಸೆ ಅವರದು. ಸುದ್ದಿ ಸಂದೇಶಗಳು ಕನ್ನಡದಲ್ಲಿ ಬಂದರೂ ಹ್ಯಾಂಡ್ ಸೆಟ್ ನಲ್ಲಿ ಸೆಟ್ ಇರದ ಕಾರಣ ಇದರಿಂದ ವಂಚಿತರಾಗುತ್ತಿದ್ದಾರೆ. ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರಹ [^]) ಸುದ್ದಿ ಸಂದೇಶಗಳು ಈ ಕೊರತೆಯನ್ನು ನಿವಾರಣೆ ಮಾಡಲಿದೆ. ಈ ಸದವಕಾಶವನ್ನು ಕನ್ನಡ ಓದುಗರು ಬಳಸಿಕೊಳ್ಳುತ್ತಾರೆಂಬ ಸದಾಶಯ ನಮ್ಮದು.

ಈ ಸೇವೆಯ ಶುಲ್ಕ ಕೂಡ ರು.5, ಅದೂ ತಿಂಗಳಿಗೆ. ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಈ ಕೊಂಡಿಯನ್ನು ಕ್ಲಿಕ್ ಮಾಡಿ.

ಚಂದಾದಾರರಾಗುವುದು ಸುಲಭ

ಮೊಬೈಲ್ ಮೂಲಕ ONE-KNNEWSENG ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ  ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ.

ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.

ಮೊಬೈಲಲ್ಲಿ ಕನ್ನಡ ಇಲ್ಲವೆ? ಚಿಂತಿಸಬೇಡಿ. ಇಂಗ್ಲಿಷ್ ನಲ್ಲಿ ಕನ್ನಡ ಸುದ್ದಿಗೆ ಚಂದಾದಾರರಾಗಿ.

ಮಂಗಳವಾರ, ಅಕ್ಟೋಬರ್ 12, 2010

ಅವಿರತ - ಸಂಸ್ಥೆ

ನಾಡಿಗಾಗಿ ನಿರಂತರ ತಾಯಿನಾಡು ಹಾಗು ಮಾನವೀಯತೆಗಾಗಿ ನಿರಂತರವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವ ಪಡೆ.

ಕ್ವಿಲ್ ಪ್ಯಾಡ್

ಕನ್ನಡದಲ್ಲಿ ಬರೆಯಲು, ಹುಡುಕಲು ಇದಕ್ಕಿಂತ ಉತ್ತಮ ತಾಣ ಇನ್ನೊಂದು ಇರಲಿಕ್ಕಿಲ್ಲ. ಇಲ್ಲಿ ಧೀರ್ಘಾಕ್ಷರಗಳನ್ನು ನಾವು ಕೀಲಿಸಬೇಕಿಲ್ಲ. ತನ್ನಲ್ಲಿರುವ ನಿಘಂಟನ್ನು ಬಳಸಿ ಅಕ್ಷರಗಳನ್ನು ಸರಿಯಾಗಿ ಜೋಡಿಸಿಕೊಳ್ಳುತ್ತದೆ. ಮೊಬೈಲ್ ಫೋನಿನಲ್ಲಿರುವ ಡಿಕ್ಷ್ನರಿ ಮೋಡ್ ತರಹ ಕೆಲಸ ಮಾಡುತ್ತದೆ.

ಕನ್ನಡ ಮಿತ್ರ

ಉದ್ಯೋಗಾಂಕ್ಷಿಗಳಿಗಾಗಿ ನಿರ್ಮಿಸಿರುವ ತಾಣ. ಕನ್ನಡಿಗರನ್ನುಮುಂದೆ ತರುವ ಮಹದಾಕಾಂಕ್ಷೆ ಇಲ್ಲಿದೆ.

ಭಕ್ತಿಗೀತ.ಬ್ಲಾಗ್ ಸ್ಪಾಟ್.ಕಾಂ

ಭಕ್ತಿಗೀತೆಗಳನ್ನು ಓದಿ ಮತ್ತು ಕೇಳಿ

ಅಂತರ್ಜಾಲ ವಾಚನಾಲಯ

ಈ ತಾಣದಲ್ಲಿ 21,007 ಕನ್ನಡದ ಪುಸ್ತಕಗಳು ಇದ್ದು ಒಟ್ಟು 3299698 ಪುಟಗಳು ಇವೆ ಎಂದು ತಾಣ ಹೇಳಿಕೊಳ್ಳುತ್ತದೆ. ಕೆಲವು ಪುಸ್ತಕಗಳನ್ನು ತೆರೆದು ನೋಡಿದ್ದೇನೆ. ಕೆಲವು ಅಸ್ಪಷ್ಟವಾಗಿ, ಇನ್ನು ಕೆಲವು ಸ್ಪಷ್ಟವಾಗಿ ಸ್ಕ್ಯಾನ್ ಆಗಿದೆ.

ವಿಚಾರ ಮಂಟಪ

ದೇಶ, ಸಾಹಿತ್ಯ ಮತ್ತು ಇನ್ನೂ ಹಲವಾರು ವಿಷಯಗಳು ಇಲ್ಲಿವೆ.

ಅಂತರ್ಜಾಲ

ಅಂತರ ಜಾಲ ಎಂಬುದು ಸಹಸ್ರಾರು ಗಣಕಯಂತ್ರಗಳ ಜಾಲಗಳ ನಡುವೆ ಸಂಪರ್ಕವನ್ನು ಏರ್ಪಡಿಸಿ ನಿರ್ಮಿಸಲಾದ ಬೃಹತ್ ಜಾಲ. ಇದು ಸಾರ್ವಜನಿಕವಾಗಿ ಲಭ್ಯವಾಗಿದ್ದು ಇಂಟರ್ನೆಟ್ ಪ್ರೋಟೋಕೋಲ್ ಮೊದಲಾದ ವ್ಯವಸ್ಥೆಗಳ ಮುಖಾಂತರ ಮಾಹಿತಿ ಸಂವಹನ ನಡೆಸುತ್ತದೆ.
ಸರ್ಕಾರಿ, ಶೈಕ್ಷಣಿಕ ಮತ್ತು ವಾಣಿಜ್ಯ ಸಂಸ್ಥೆಗಳ ಅನೇಕ ಜಾಲಗಳಿದ್ದು ಅವನ್ನು ಒಂದಕ್ಕೊಂದು ಕೂಡಿಸಿ ಸೃಷ್ಟಿಸಿದ ಬೃಹತ್ ಜಾಲವೇ ಅಂತರ ಜಾಲ ಅಥವಾ ಇಂಟರ್ನೆಟ್. ಅನೇಕ ರೀತಿಯ ಮಾಹಿತಿಯನ್ನು ಸಾಗಿಸುವ ಈ ಜಾಲ, ವಿ-ಅಂಚೆ, ಅಂತರ ಜಾಲ ಹರಟೆ (ಚ್ಯಾಟಿಂಗ್), ಅಂತರ ಜಾಲ ತಾಣಗಳು ಮೊದಲಾದ ಸೇವೆಗಳನ್ನು ಒದಗಿಸುತ್ತದೆ.

1. ಅಂತರ ಜಾಲದ (ಅಂತರ್ಜಾಲದ) ಉಗಮ

೧೯೬೯ ರಲ್ಲಿ ಅಮೆರಿಕ ಸರ್ಕಾರದ ರಕ್ಷಣಾ ವಿಭಾಗ ತನ್ನ ಕೆಲಸಗಳಿಗಾಗಿ ಗಣಕಯಂತ್ರಗಳ ಒಂದು ಜಾಲವನ್ನು ನಿರ್ಮಿಸಿತು. ಇದಕ್ಕೆ ಅರ್ಪಾನೆಟ್ (ARPANET) ಎಂದು ಹೆಸರಿಡಲಾಗಿತ್ತು. ವಿಕೇಂದ್ರೀಕೃತ ಜಾಲಗಳು ಮತ್ತು ಮಾಹಿತಿ ಸಂವಹನ ವ್ಯವಸ್ಥೆಗಳ ಮೇಲಿನ ಸಂಶೋಧನೆಯ ಫಲಿತಾಂಶ ಈ ಜಾಲ. ಜನವರಿ ೧, ೧೯೮೩ ರಂದು ಅರ್ಪಾನೆಟ್ ನ ಕೆಲವು ಮೂಲಭೂತ ವ್ಯವಸ್ಥೆಗಳನ್ನು ಅಧುನಿಕೀಕರಣಗೊಳಿಸಲಾಯಿತು. ಇಂದಿನ ಅಂತರ ಜಾಲದ ಹಿರಿಯಜ್ಜ ಈ ಆಧುನಿಕೀಕೃತವಾದ ಅರ್ಪಾನೆಟ್.

ಅಂತರ ಜಾಲದ ಒಂದು ಭಾಗಶಃ ರೇಖಾಚಿತ್ರ
ಅಂತರ ಜಾಲದ ಅಭಿವೃದ್ಧಿಯಲ್ಲಿ ಇನ್ನೊಂದು ಮುಖ್ಯ ಹೆಜ್ಜೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ (National Science Foundation) ೧೯೮೬ ರಲ್ಲಿ ನಿರ್ಮಿಸಿದ ಇನ್ನೊಂದು ಕಂಪ್ಯೂಟರ್ ಜಾಲ - ಇದಕ್ಕೆ ಎನ್ಎಸ್ಎಫ್ನೆಟ್ (NSFNet) ಎಂದು ಹೆಸರಿಡಲಾಗಿತ್ತು. ನಂತರದ ವರ್ಷಗಳಲ್ಲಿ ಇನ್ನೂ ಅನೇಕ ಜಾಲಗಳು ಚಿಗುರಿಕೊಂಡವು. ಆದರೆ ಆಗ ಇನ್ನೂ ಈ ಜಾಲಗಳು ಬಿಡಿಬಿಡಿಯಾಗಿ ಹಂಚಿಹೋಗಿದ್ದವೇ ಹೊರತು ಒಂದಕ್ಕೊಂದು ಸಂಪರ್ಕವನ್ನು ಹೊಂದಿರಲಿಲ್ಲ.
೯೦ ರ ದಶಕದಲ್ಲಿ ಈ ವಿವಿಧ ಜಾಲಗಳ ನಡುವೆ ಸಂಪರ್ಕ ಏರ್ಪಡಿಸಿ ಅವುಗಳನ್ನು ಒಗ್ಗೂಡಿಸಲಾಯಿತು. ಇತರ ದೇಶಗಳಲ್ಲಿ ಜನ್ಮ ತಾಳಿದ್ದ ಕಂಪ್ಯೂಟರ್ ಜಾಲಗಳೂ ಈ ಪ್ರಯತ್ನದಲ್ಲಿ ಸೇರಿಕೊಂಡು ಅನೇಕ ಸಣ್ಣ ಸಣ್ಣ ಕಂಪ್ಯೂಟರ್ ಜಾಲಗಳನ್ನು ಒಳಗೊಂಡ ಬೃಹತ್ ಜಾಲ ರೂಪುಗೊಳ್ಳಲಾರಂಭಿಸಿತು. ಇದೇ ಈಗಿನ ಅಂತರ ಜಾಲ.

2. ಇಂದಿನ ಅಂತರ ಜಾಲ


ಅಂತರ ಜಾಲದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸೌಲಭ್ಯಗಳು - ಬ್ರೌಸರ್, ಎಫ್‍ಟಿಪಿ ಇತ್ಯಾದಿ
ಅಂತರ ಜಾಲದಲ್ಲಿ ಎಲ್ಲ ಗಣಕಯಂತ್ರಗಳನ್ನು ಸಂಪರ್ಕಿಸಲು ಅತಿ ಸಂಕೀರ್ಣವಾದ ಸಂಪರ್ಕ ಸಾಧನಗಳು ಮತ್ತು ಮಾಧ್ಯಮಗಳು ಉಪಯೋಗವಾಗಿವೆ. ಇದಲ್ಲದೆ, ಮಾಹಿತಿ ಸಂವಹನವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಮಾಡಿಕೊಂಡಿರುವ ಅನೇಕ ಒಪ್ಪಂದಗಳುಂಟು - ಇವುಗಳಿಗೆ ಪ್ರೋಟೋಕೋಲ್ ಗಳೆಂದು ಹೆಸರು. ಈ ಪ್ರೋಟೋಕೋಲ್ ಗಳು ಮಾಹಿತಿಯನ್ನು ಸರಿಯಾಗಿ ಯಾವ ರೀತಿಯಲ್ಲಿ ಕಳುಹಿಸಬೇಕೆಂಬುದನ್ನು ನಿರ್ದೇಶಿಸುತ್ತವೆ.
ಹಾಗೆಯೇ ಮಾಹಿತಿಯನ್ನು ಸಂಚಯಿಸುವ ಮಾಧ್ಯಮ ಯಾವುದು ಬೇಕಾದರೂ ಆಗಿರಬಹುದು - ತಾಮ್ರದ ತಂತಿ, ಕೋ-ಆಕ್ಸಲ್ ಕೇಬಲ್, ಯಾವ ಕೇಬಲ್ ಗಳೂ ಇಲ್ಲದೆ ವಯರ್ಲೆಸ್ ಜಾಲ - ಹೀಗೆ ವಿವಿಧ ರೀತಿಗಳಲ್ಲಿ ಮಾಹಿತಿ ಅಂತರ ಜಾಲದ ಮೂಲಕ ಸಾಗುತ್ತದೆ.
ಅಂತರ ಜಾಲದ ಪ್ರೋಟೋಕೋಲ್ ಗಳನ್ನು ಪ್ರತಿಪಾದಿಸುವ ಸಂಸ್ಥೆ ಅಂತರ ಜಾಲ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ (IETF), ಮತ್ತು ಅದರ ಸಂಬಂಧಿ ಕಾರ್ಯ ನಡೆಸುವ ಗುಂಪುಗಳ ಸಮಿತಿ. ಈ ಪ್ರತಿಪಾದನೆಗಳು ಸಾರ್ವಜನಿಕವಾಗಿ ಲಭ್ಯವಿದ್ದು ಸಾರ್ವಜನಿಕರು ಇವುಗಳ ಬಗೆಗಿನ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಈ ಸಮಿತಿ ಪ್ರತಿಪಾದನೆಗಳನ್ನು Request for Comments (RFCs) ಎಂಬ ಹೆಸರಿನಲ್ಲಿ ಪ್ರಕಟಿಸುತ್ತದೆ. ಯಾವ ಪ್ರತಿಪಾದನೆಗಳನ್ನು ಪಾಸು ಮಾಡಿ ಅಂತರ ಜಾಲದಲ್ಲಿ ಅಳವಡಿಸಿಕೊಳ್ಳಬಹುದೆಂಬುದನ್ನು Internet Architecture Board (IAB) ಸೂಚಿಸುತ್ತದೆ.
ಅಂತರ ಜಾಲದಲ್ಲಿ ಬಹಳವಾಗಿ ಉಪಯೋಗದಲ್ಲಿರುವ ಪ್ರೋಟೋಕೋಲ್ ಗಳೆಂದರೆ (ಕೆಳಗೆ ಇಂಗ್ಲಿಷ್ ಲೇಖನಗಳಿಗೆ ಸಂಪರ್ಕ ಕಲ್ಪಿಸಲಾಗಿದೆ):
IP, TCP, UDP, DNS, PPP, SLIP, en:ICMP, POP3, IMAP, SMTP, HTTP, HTTPS, SSH, Telnet, FTP, LDAP, ಮತ್ತು SSL.
ಅಂತರ ಜಾಲದಲ್ಲಿ ಉಪಯೋಗದಲ್ಲಿರುವ ಅತಿ ಜನಪ್ರಿಯ ಸೌಲಭ್ಯಗಳಲ್ಲಿ ವಿ-ಅಂಚೆ, ಅಂತರ ಜಾಲ ತಾಣಗಳು, ಹರಟೆ ಮೊದಲಾದವುಗಳು ಸೇರಿವೆ. ವಿ-ಅಂಚೆ ಮತ್ತು ಅಂತರ ಜಾಲ ತಾಣಗಳು ಅತಿ ಹೆಚ್ಚು ಉಪಯೋಗ ಕಂಡಿವೆ. ಇವನ್ನು ಆಧರಿಸಿ ಕೆಲಸ ಮಾಡುವ ವಿ-ಗುಂಪುಗಳು, ಬ್ಲಾಗ್ ಗಳು ಮೊದಲಾದ ಸೌಲಭ್ಯಗಳು ಸಹ ಜನಪ್ರಿಯವಾಗಿವೆ. ಹಾಗೆಯೇ ಅಂತರ ಜಾಲ ರೇಡಿಯೊ, ವೆಬ್‍ಕಾಸ್ಟ್ ಮೊದಲಾದವು ಸಹ ಬೆಳಕಿಗೆ ಬಂದಿವೆ.

3. ಅಂತರ ಜಾಲ ಸಂಸ್ಕೃತಿ

ಅಂತರ ಜಾಲ ಜನರು ಕೆಲಸ ನಡೆಸುವ ರೀತಿ, ಮಾಹಿತಿ ಶೋಧನೆ ಮತ್ತು ಅಭಿಪ್ರಾಯಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತಿದೆ.

3. 1. ಮಾಹಿತಿ ಸಂಗ್ರಹಣೆ

ಗೂಗ್ಲ್ ನಂತಹ ಶೋಧ ಯಂತ್ರಗಳ ಉಪಯೋಗದಿಂದ ಯಾವ ವಿಷಯದ ಬಗ್ಗೆಯೇ ಆಗಲಿ, ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಹುಡುಕಬಹುದಾಗಿದೆ. ಹಿಂದಿನ ಕಾಲದ ಮುದ್ರಿತ ವಿಶ್ವಕೋಶಗಳು ಅಥವಾ ಗ್ರಂಥಾಲಯಗಲಿಗೆ ಹೋಲಿಸಿದರೆ ಮಾಹಿತಿ ಮತ್ತು ಜ್ಞಾನದ ತೀವ್ರ ವಿಕೇಂದ್ರೀಕರಣಕ್ಕೆ ಇದು ದಾರಿ ಮಾಡಿಕೊಟ್ಟಿದೆ.

3. 2. ದೂರ ಸಂಪರ್ಕ

ಅಂತರ ಜಾಲದ ಮುಖಾಂತರ ಒಂದು ಕಂಪ್ಯೂಟರ್ ನ ಬಳಕೆದಾರರು ಪ್ರಪಂಚದ ಇನ್ನಾವುದೇ ಭಾಗದಲ್ಲಿರುವ ಇನ್ನಾವುದೇ ಕಂಪ್ಯೂಟರ್ ಗೆ ಸಂಪರ್ಕ ಏರ್ಪಡಿಸಿಕೊಳ್ಳಬಹುದಾಗಿದೆ. ಕೆಲವು ಕಂಪ್ಯೂಟರ್ ಗಳಿಗೆ ಸಂಪರ್ಕ ಕೊಡುವ ಮೊದಲು ಸುರಕ್ಷತೆ ಮತ್ತು ಸರಿಯಾದ ಪ್ರವೇಶಪದಗಳನ್ನು ಏರ್ಪಡಿಸಿಕೊಳ್ಳುವುದು ಸಾಮಾನ್ಯ.
ಇದರಿಂದಾಗಿ ನೀವು ಪ್ರಯಾಣ ಮಾಡುತ್ತಿರುವಾಗಲೂ ನಿಮ್ಮ ಕಛೇರಿಯಲ್ಲಿರುವ ಕಂಪ್ಯೂಟರ್ ಗೆ ಸಂಪರ್ಕವನ್ನೇರ್ಪಡಿಸಿಕೊಂಡು ನಿಮ್ಮ ಕೆಲಸವನ್ನು ಮುಂದುವರಿಸಬಹುದಾಗಿದೆ. ಮನೆಯಿಂದಲೇ ಕೆಲಸ ಮಾಡಬಯಸುವವರಿಗೆ ಹೊಸ ಹೊಸ ದಾರಿಗಳು ಸೃಷ್ಟಿಯಾಗಿವೆ. ಉದಾಹರಣೆಗೆ, ಅಕೌಂಟೆಂಟ್ ಒಬ್ಬರು ಮನೆಯಲ್ಲಿ ಕುಳಿತು ಬೇರಾವುದೋ ದೇಶದಲ್ಲಿರುವ ಕಂಪೆನಿಯ ಲೆಕ್ಕಪತ್ರಗಳ ಆಡಿಟ್ ಕೆಲಸವನ್ನು ಮಾಡಬಹುದಾಗಿದೆ.ಬಹಲ ಅನುಕುಲ ವಾಗಿದೆ.

3. 3. ಸಹಕಾರ

ಸುಲಭವಾಗಿ ಯೋಚನೆಗಳು, ಜ್ಞಾನ, ಮಾಹಿತಿ ಮೊದಲಾದವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿಯುವಂತೆ ಅಂತರ ಜಾಲ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಅನೇಕ ಜನರು ಒಟ್ಟಾಗಿ ಮಾಡುವ ಸಹಕಾರಿ ಕೆಲಸಗಳನ್ನು ನಡೆಸಲು ಬಹಳ ಸುಲಭವಾಗಿದೆ. ಉದಾಹರಣೆಗೆ ವಿಕಿಪೀಡಿಯ ವಿಶ್ವಕೋಶ - ಹತ್ತಾರು ದೇಶಗಳಲ್ಲಿನ ಜನರು ಸಹಕರಿಸಿ ಉಂಟಾದ ವಿಶ್ವಕೋಶ ಇದು.
ಸಹಕಾರಿ ವ್ಯವಸ್ಥೆಯಲ್ಲಿ ವೃದ್ಧಿಪಡಿಸಿದ ತಂತ್ರಾಂಶಗಳಲ್ಲಿ ಅತಿ ಪ್ರಸಿದ್ಧ ತಂತ್ರಾಂಶಗಳಲ್ಲಿ ಒಂದು ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ. ಹಾಗೆಯೇ ವಿ-ಆರೋಗ್ಯ ಮೊದಲಾದ ಯೋಚನೆಗಳು ಸೃಷ್ಟಿಯಾಗಿವೆ - ಒಂದು ಆಸ್ಪತ್ರೆಯಲ್ಲಿ ಇರುವ ರೋಗಿಯೊಬ್ಬರಿಗೆ ಸ್ಕ್ಯಾನಿಂಗ್ ನಡೆಸುತ್ತಿದ್ದರೆ ಆ ಚಿತ್ರಗಳನ್ನು ತತ್-ಕ್ಷಣ ಅದನ್ನು ಬೇರೊಂದು ದೇಶದ ವೈದ್ಯರಿಗೆ ಕಳಿಸಿ ಅವರ ಅಭಿಪ್ರಾಯ ಪಡೆಯುವುದು ಕ್ಷಣಮಾತ್ರದ ಕೆಲಸ.

3. 4. ಫೈಲ್ ಶೇರಿಂಗ್

ಗಣಕಯಂತ್ರದಲ್ಲಿ ಇಡುವ ಫೈಲ್ ಗಳನ್ನು ಹಂಚಿಕೊಳ್ಳಲು ಅಂತರ ಜಾಲ ಅನೇಕ ವಿಧಾನಗಳನ್ನು ಕಲ್ಪಿಸಿಕೊಟ್ಟಿದೆ. ವಿ-ಅಂಚೆ, ಅಂತರ ಜಾಲ ತಾಣಗಲಲ್ಲಿ ಅಪ್ಲೋಡ್ ಮತ್ತು ಡೌನ್‍ಲೋಡ್, ಫೈಲ್ ಸರ್ವರ್ ಗಳ ಉಪಯೋಗ ಇತ್ಯಾದಿ ವಿಧಾನಗಳು. ಈ ಎಲ್ಲ ವಿಧಾನಗಳಲ್ಲಿಯೂ ಯಾರು ನಿಮ್ಮ ಫೈಲ್ ಗಳನ್ನು ನೋಡಬಹುದು/ಬಾರದು ಇತ್ಯಾದಿ ವಿಷಯಗಳ ಬಗ್ಗೆ ನಿಯಂತ್ರಣವನ್ನು ಏರ್ಪಡಿಸಬಹುದಾಗಿದೆ. ಕೆಲವೊಮ್ಮೆ ಈ ಅನುಕೂಲಕ್ಕಾಗಿ ಹಣದ ಪಾವತಿ ಅಗತ್ಯವಿದ್ದಲ್ಲಿ ಅದನ್ನು ಸಹ ಅಂತರ ಜಾಲದ ಮೂಲಕವೇ ಮಾಡಬಹುದು.
ಈ ರೀತಿಯ ಅನುಕೂಲಗಳು ಜನಜೀವನವನ್ನು ಆಳವಾಗಿ ಪ್ರಭಾವಿಸಿವೆ. ಯಾವುದೇ ಸಂಸ್ಥೆಯ ಉತ್ಪನ್ನಗಳ ಅಭಿವೃದ್ಧಿ, ಅವುಗಳ ಮಾರಾಟ/ಕೊಳ್ಳುವಿಕೆ, ಹಂಚುವಿಕೆ/ವಿತರಣೆ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿಯೂ ಅಂತರ ಜಾಲದ ಅಚ್ಚನ್ನು ಕಾಣಬಹುದಾಗಿದೆ.

3. 5. ಭಾಷೆ

ಅಂತರ ಜಾಲದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಬಳಸಲ್ಪಟ್ಟಿರುವ ಭಾಷೆ ಇಂಗ್ಲಿಷ್. ಅಂತರ ಜಾಲ ಇಂಗ್ಲಿಷ್ ಮಾತನಾಡಲ್ಪಡುವ ರಾಷ್ಟ್ರಗಳಲ್ಲಿ ಮೊದಲು ಉಗಮವಾದ್ದರಿಂದ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳಲ್ಲಿ ಇಂಗ್ಲಿಷ್ ಭಾಷೆಗೆ ಪ್ರಾಧಾನ್ಯ ಇರುವುದರಿಂದ ಸ್ವಾಭಾವಿಕವಾಗಿ ಅಂತರ ಜಾಲದಲ್ಲಿ ಇಂಗ್ಲಿಷಿನ ಅಸ್ತಿತ್ವ ಹೆಚ್ಚು. ಇನ್ನೊಂದು ಕಾರಣವೆಂದರೆ ಸ್ವಲ್ಪ ವರ್ಷಗಳ ಹಿಂದೆ ಕಂಪ್ಯೂಟರ್ ಗಳು ಇಂಗ್ಲಿಷ್ ನ ಅಕ್ಷರಗಳನ್ನು ಮಾತ್ರ ಪ್ರತಿನಿಧಿಸಬಲ್ಲವಾಗಿದ್ದವು.
ಇತ್ತೀಚಿನ ವರ್ಷಗಳಲ್ಲಿ, ಅಂತರ ಜಾಲದ ಜನಪ್ರಿಯತೆ ಮತ್ತು ಉಪಯುಕ್ತತೆ ಹೆಚ್ಚಾದಂತೆ ಹಾಗೂ ಇತರ ಭಾಷೆಗಳಲ್ಲಿ ಕಂಪ್ಯೂಟರ್ ಗಳನ್ನು ಉಪಯೋಗಿಸುವ ಸೌಲಭ್ಯ ಬೆಳೆದಂತೆ ಅನೇಕ ಭಾಷೆಗಳು ಅಂತರ ಜಾಲದಲ್ಲಿ ಬೆಳೆಯುತ್ತಿವೆ.

4. ಪ್ರಸಕ್ತ ಮತ್ತು ಭವಿಷ್ಯದ ತೊಂದರೆಗಳು

ಅಂತರ ಜಾಲದಲ್ಲಿ ಹೀಗೆ ಅನೇಕ ಅನುಕೂಲಗಳಿದ್ದರೂ ನಕಾರಾತ್ಮಕವಾದ ಕೆಲವು ಗುಣಗಳು ಬೆಳಕಿಗೆ ಬಂದಿರುವುದೂ ಉಂಟು.

4. 1. ಮಕ್ಕಳ ಶೋಷಣೆ

ಮಕ್ಕಳ ಹಿತರಕ್ಷಣೆಗಾಗಿ ಇರುವ ಅನೇಕ ಸಂಸ್ಥೆಗಳ ಹೇಳಿಕೆಯಂತೆ, ಅಂತರ ಜಾಲ ಸಾರ್ವಜನಿಕರ ಉಪಯೋಗಕ್ಕೆ ಬಂದ ನಂತರ ಮಕ್ಕಳ ನಗ್ನಚಿತ್ರಗಳ ಹರಡಿಕೆ ಹತ್ತರಷ್ಟಾದರೂ ಹೆಚ್ಚಾಗಿದೆ. ಹಾಗೆಯೇ ಅಂತರ ಜಾಲ ಹರಟೆ ಮೊದಲಾದ ಸೌಲಭ್ಯಗಳು ಇರುವಲ್ಲಿ ಅನೇಕರು ಮಕ್ಕಳೊಂದಿಗೆ ಅಂತರ ಜಾಲದಲ್ಲಿ ಹರಟುತ್ತಾ ಅವರನ್ನು ನಂಬಿಸಿ ಭೇಟಿಗಾಗಿ ಏರ್ಪಾಟು ಮಾಡಿ ಆ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದವರೂ ಇದ್ದಾರೆ.

4. 2. ಕೃತಿಸ್ವಾಮ್ಯ

ಫೈಲ್ ಗಳ ಹಂಚಿಕೆಗಾಗಿ ಅನೇಕ ತಂತ್ರಾಂಶಗಳು ಸೃಷ್ಟಿಯಾಗಿವೆ. ಇವುಗಳನ್ನು ಉಪಯೋಗಿಸಿ ತಮ್ಮ ಬಳಿ ಕೃತಿಸ್ವಾಮ್ಯತೆಯ ಹಕ್ಕುಗಳಿಲ್ಲದಿದ್ದರೂ ತಮ್ಮಲ್ಲಿರುವ ಫೈಲ್ ಗಳನ್ನು ಇತರರಿಗೆ ಹಂಚುವ ಹಾವಳಿ ಉಂಟಾಗಿದೆ. ಇದು ಆ ಫೈಲ್ ಗಳ ಕೃತಿಸ್ವಾಮ್ಯಗಳ ಬಾಧ್ಯತೆಗಳನ್ನು ಮೀರುತ್ತದೆ. ಕಾನೂನಿನ ಪ್ರಕಾರ ಇದು ಅಪರಾಧವಾಗಿದ್ದರೂ ಇದನ್ನು ಪತ್ತೆಹಚ್ಚುವುದು ಕಷ್ಟವಾಗಿರುವುದರಿಂದ ಈ ಹಾವಳಿ ಮುಂದೆ ಸಾಗುತ್ತಿದೆ.

4. 3. ವೈರಸ್

ಅಂತರ ಜಾಲದಲ್ಲಿ ಸಹಸ್ರಾರು ಗಣಕಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ ಒಂದು ಕಂಪ್ಯೂಟರ್ ನಲ್ಲಿರುವ ವೈರಸ್ ಇತರ ಕಂಪ್ಯೂಟರ್ ಗಳಿಗೆ ಹರಡುವುದು ಅತಿ ಸುಲಭ. ಇದರಿಂದ ಕೆಲವೊಮ್ಮೆ ಅನೇಕ ಕಂಪ್ಯೂಟರ್ ಗಳಿಗೆ ಏಕಕಾಲದಲ್ಲಿ ತೊಂದರೆಯಾಗುವುದುಂಟು.

4. 4. ಮಾಹಿತಿ ಸುರಕ್ಷತೆ

ಅಂತರ ಜಾಲಕ್ಕೆ ಸಂಪರ್ಕಿತವಾಗಿರುವ ಕಂಪ್ಯೂಟರ್ ನಲ್ಲಿರುವ ಮಾಹಿತಿಯನ್ನು ಕದಿಯುವುದು ಸಹ ನಡೆಯುತ್ತದೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಮೊದಲಾದ ಅತಿ ಮುಖ್ಯ ಮಾಹಿತಿಯನ್ನು ಇತರರು ಕದಿಯುವ ಅಪಾಯ ಉಂಟಾಗಿದೆ. ಕಂಪ್ಯೂಟರ್ ನಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಅನೇಕ ತಂತ್ರಾಂಶಗಳಿದ್ದಾಗ್ಯೂ ಅವುಗಳು ಅನುಸ್ಥಾಪಿತವಾಗಿಲ್ಲದ ಕಂಪ್ಯೂಟರ್ ಗಳಲ್ಲಿನ ಮಾಹಿತಿಯ ಚೌರ್ಯ ಸುಲಭವಾಗಿ ನಡೆಸಬಹುದು.

4. 5. ಸಾಂಸ್ಕೃತಿಕ ತೊಂದರೆಗಳು

ಅಂತರ ಜಾಲದಲ್ಲಿ ಮಾಹಿತಿಯ ಹರಡುವಿಕೆ ಸುಲಭವಾದ್ದರಿಂದ ಸಮಾಜಕ್ಕೆ ಹಾನಿಕಾರಕ ಎಂದು ಪರಿಗಣಿತವಾಗಬಹುದಾದ ಸಂಸ್ಕಾರಗಳು ಸಹ ಸುಲಭವಾಗಿ ಹರಡಬಲ್ಲವು. ವಾಕ್-ಸ್ವಾತಂತ್ರ್ಯದ ದೃಷ್ಟಿಯಿಂದ ಇದನ್ನು ಸಮರ್ಥಿಸಬಹುದಾದರೂ ಕೆಲವೊಮ್ಮೆ ಹಿಂಸಾಚಾರದ, ಇನ್ನೂ ಅಪಾಯಕಾರಿಯಾದ ಆತ್ಮಹತ್ಯಾ ಮನೋಭಾವದ ಜನರು ಸಹ ಒಬ್ಬರನ್ನೊಬ್ಬರು ಸಂಪರ್ಕಿಸಿ, ಪ್ರೋತ್ಸಾಹಿಸಿ ಈ ಮನೋಭಾವಗಳು ಇನ್ನೂ ವೇಗವಾಗಿ ಹರಡುವುದೂ ಸಾಧ್ಯ (ಉದಾಹರಣೆಯಾಗಿ ಅನೇಕ ಭಯೋತ್ಪಾದಕ ಅಂತರ ಜಾಲ ತಾಣಗಳು).



ಕನ್ನಡ ಶುಭಾಶಯಕ್ಕೊಂದು ಅಂತರ್ಜಾಲ ತಾಣ

ಅಂತರ್ಜಾಲದ ಶುಭಾಶಯಗಳು ಕೈಯಿಂದ ಬರೆದ ಸಾಂಪ್ರದಾಯಿಕ ಶುಭಾಶಯಗಳಂತಹ ಭಾವನೆಯನ್ನು ಕೊಡದೇ ಇರಬಹುದು ಆದರೆ ತಾಂತ್ರಿಕ ಮುನ್ನಡೆಯಿಂದ ಆಪ್ತವೆನ್ನಿಸುವ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಆನ್‌ಲೈನ್ ಗ್ರೀಟಿಂಗ್ಸ್ ಮೂಲಕ ಉಚಿತ ಶುಭಾಶಯ ಪತ್ರಗಳನ್ನು, ಕೆಲವೇ ಕ್ಷಣದಲ್ಲಿ ನಿಮ್ಮ ಆತ್ಮೀಯರಿಗೆ ತಲುಪಿಸಬಹುದು. ಇವು ಕಾಗದ ಉಪಯೋಗಿಸದಿರುವುದರಿಂದ (ವಿದ್ಯುನ್ಮಾನ ತಂತ್ರಜ್ಞಾನದಿಂದ ರವಾನಿಸಲಾಗುತ್ತದೆ) ಪರಿಸರ ಪ್ರೇಮಿಗಳಾಗಿವೆ.

ಕನ್ನಡ ಗ್ರೀಟಿಂಗ್ಸ್ ತಾಣ ಕಟ್ಟಿದ ಉವಾಚ :

ಕನ್ನಡದಲ್ಲಿ ಇದು ನನ್ನ ಮೊದಲನೆಯ ಪ್ರಯತ್ನವಾಗಿದೆ. ಕನ್ನಡಿಗನಾಗಿದ್ದು, ಕನ್ನಡಿಗರೊಂದಿಗೆ ಸದಾ ಒಡನಾಟವಿರುವುದರಿಂದ ನನ್ನ ಮಾತೃಭಾಷೆಗಾಗಿ ಏನಾದರೂ ಮಾಡಬೇಕೆಂಬ ಹಲವು ವರ್ಷಗಳ ಕನಸಿತ್ತು. ಕಳೆದ ವರ್ಷ ಹೊಸ ವರ್ಷಕ್ಕಾಗಿ ನನ್ನ ಸ್ನೇಹಿತರೆಲ್ಲರಿಗೂ ಕನ್ನಡದಲ್ಲಿ ಶುಭಾಶಯ ಕಳುಹಿಸಬೆಕೆಂದು ಅಂತರ್ಜಾಲ ಜಾಲಾಡಿದಾಗ ಕೈಗೆ ಸಿಕ್ಕಿದ್ದು ಆಂಗ್ಲ ಭಾಷೆಯ ಶುಭಾಶಯಗಳು ಹಾಗು ಕೆಲವೇ 'ಸಾಮಾನ್ಯ'ವೆನ್ನಬಹುದಾದ ಕನ್ನಡದ ಶುಭಾಶಯಗಳು. ಕೊನೆಗೆ ಒಂದು ಶುಭಾಶಯ ನಾನೇ ತಯಾರಿಸಿಬಿಟ್ಟೆ. ಅಂದಿನಿಂದ ನಾನೆ ಯಾಕೆ ಶುಭಾಶಯಗಳನ್ನು ಮಾಡಿ ಇತರ ಕನ್ನಡಿಗರಿಗರೊಂದಿಗೆ ಹಂಚಿಕೊಳ್ಳಬಾರದು ಎಂಬ ಅಲೋಚನೆ ಬರತೊಡಗಿತು.

ನಾಲ್ಕು ತಿಂಗಳ ನಂತರ ಕೆನಡಾಗೆ ಸ್ಥಳಾಂತರವಾದ ನಂತರ ನನಗೆ ಸಾಕಷ್ಟು ಸಮಯ ಸಿಗತೊಡಗಿತು. ಆನಂತರ ಮಾಡಿದ ಪ್ರಯೋಗಾತ್ಮಕ ಶುಭಾಶಯಗಳು ಹಲವು ಸ್ನೇಹಿತರಿಗೆ ಮೆಚ್ಚುಗೆಯಾದವು. ಸ್ವಲ್ಪ ದಿನಗಳಲ್ಲೇ ಈ ಶುಭಾಶಯ ತಾಣ ಹುಟ್ಟಿಕೊಂಡಿತು. ಸ್ನೇಹಿತ ಸೋಮು(ನವಿಲುಗರಿ) ಈ ಶುಭಾಶಯಗಳಿಗೆ ಹೃದಯ ತಟ್ಟುವ ಕವನ/ಚುಟುಕುಗಳನ್ನು ಬರೆದಿದ್ದಾನೆ. ಸೇರಿದಂತೆ ಸಾಕಷ್ಟು ಬ್ಲಾಗಿಗಳು, ಇನ್ನಿತರ ಸಹೃದಯ ಕನ್ನಡಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಈ ತಾಣವನ್ನು ಉತ್ತಮ ಪಡಿಸುವಲ್ಲಿ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ನಾವು ಚಿರಋಣಿ.

ಉದ್ದೇಶ ಹಾಗೂ ಆಶಯ:

ಕನ್ನಡಿಗರಿಗೆ ಅಂತರ್ಜಾಲದಲ್ಲಿ ಕನ್ನಡದಲ್ಲಿ ಶುಭಾಶಯಗಳನ್ನು ಕಳಿಸುವ ಹಾಗೂ ಶುಭಾಶಯ ಕೋರುವ ಎಲ್ಲಾ ವಿಧಾನಗಳ ಸಮ್ಮಿಳನ. ಇದರ ಮುಖ್ಯ ಉದ್ದೇಶ ಕನ್ನಡದಲ್ಲೇ ಕುಶಲ ಶುಭಾಶಯಗಳನ್ನು ಮಾಡಿ ಕನ್ನಡಿಗರೊಂದಿಗೆ ಹಂಚಿಕೊಳ್ಳುವದು. ಉತ್ತಮ ಶುಭಾಶಯಗಳಿಗಾಗಿ ಕನ್ನಡಿಗರು ಆಂಗ್ಲ ಭಾಷೆಯ ತಾಣಗಳ ಮೊರೆ ಹೊಗುವುದನ್ನು ತಡೆಯುವದು ನಮ್ಮ ಒಂದು ಗುರಿಯಾಗಿದೆ. ಈ ಶುಭಾಶಯಗಳನ್ನು ಕೇವಲ ಬೆರೆಯವರಿಗೆ ಕಳಿಸುವದಲ್ಲದೇ ನೀವು ಇತರೆ ಆರ್ಕುಟ್‌ನಂತಹ ಸಾಮಾಜಿಕ ಸಂಪರ್ಕ ತಾಣಗಳಲ್ಲೂ ಉಪಯೋಗಿಸಬಹುದು. ಚರ್ಚಾ ವೇದಿಕೆಯೂ ಕನ್ನಡದ ಶುಭಾಶಯಗಳಿಗೆ ಸಂಬಂಧಿಸಿದ ಚರ್ಚೆಗೆ ಮೀಸಲಾಗಿದೆ.

ನಿಮ್ಮ ಪ್ರೀತಿ ವ್ಯಕ್ತಪಡಿಸುವುದಿರಲಿ, ಜನನ, ಹುಟ್ಟು ಹಬ್ಬ, ಮದುವೆ, ಹಬ್ಬಗಳಿಗಾಗಿ, ರಾಜ್ಯೋತ್ಸವ ಅಥವಾ ಇತರ ಯಾವುದೇ ಸಂದರ್ಭಕ್ಕೆ ನಮ್ಮ ತಾಣದ ಹಲವು ವಿಭಾಗಗಳಿಂದ ಶುಭಾಶಯಗಳನ್ನು ಆರಿಸಿಕೊಳ್ಳಿ. ಪ್ರತಿ ವಾರ ಹಲವಾರು ಹೊಸ ಶುಭಾಶಯಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಆಗಾಗ ನಮ್ಮ ತಾಣದಲ್ಲಿ ಸೇರ್ಪಡೆಯಾದ ಹೊಸ ಶುಭಾಶಯಗಳನ್ನು ನೊಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಶುಭಾಶಯಗಳನ್ನು ಆಯ್ದು ಕಳಿಸಿ.

ಈ ತಾಣದ ಕೆಲವು ವೈಶಿಷ್ಟ್ಯಗಳು

* ನಮ್ಮ ಹಲವಾರು ವಿಭಾಗಗಳಿಂದ ಸ್ಥಿರಚಿತ್ರ ಹಾಗೂ ಫ್ಲಾಶ್ ಶುಭಾಶಯಗಳನ್ನು ಆರಿಸಿಕೊಳ್ಳಿ.
* ನೀವು ಕನ್ನಡದಲ್ಲಿ ಸಂದೇಶ ಬರೆದು ಈ ಶುಭಾಶಯಗಳೊಂದಿಗೆ ಲಗತ್ತಿಸಬಹುದು.
* ಈ ಶುಭಾಶಯಗಳನ್ನು ನೀವು ಆರ್ಕುಟ್ ಸ್ಕ್ರ್ಯಾಪ್‌ಗಳಲ್ಲಿ ಉಪಯೋಗಿಸಬಹುದು.
* ಶುಭಾಶಯಕ್ಕನುಗುಣವಾಗಿ ಹಿನ್ನೆಲೆ ಚಿತ್ರವನ್ನು ಆಯ್ದುಕೊಳ್ಳಬಹುದು.
* ನೀವು ಕಳಿಸಿದ ಶುಭಾಶಯವನ್ನು ನಿಮ್ಮವರು ತೆಗೆದು ನೋಡಿದಾಗ ನಿಮಗೆ ಆ ಬಗ್ಗೆ ಇ-ಮೈಲ್ ಮುಖಾಂತರ ತಿಳಿಸಲಾಗುವದು.
* ಶುಭಾಶಯಗಳನ್ನು ಮುಂಚಿತವಾಗಿ ರಚಿಸಿ ಪೂರ್ವ ನಿರ್ಧಾರಿತ ದಿನದಂದು ಕಳುಹಿಸಬಹುದು.
* ಗೂಗಲ್-ಗ್ಯಾಜೆಟ್‌ನಿಂದ ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಸೇರಿಸಲ್ಪಟ್ಟ ಹೊಸ ಶುಭಾಶಯಗಳನ್ನು ನೋಡಬಹುದು.
* ಚರ್ಚಾ ವೇದಿಕೆಯಿಂದ ಲೇಖಕರೊಂದಿಗೆ ಹಾಗೂ ಈ ತಾಣದ ಇತರ ಭೇಟಿಕಾರರೊಂದಿಗೆ ವಿಚಾರ ವಿನಿಮಯ ಮಾಡಬಹುದು.
* ಶುಭಾಶಯಗಳನ್ನು ಮುಂಚಿತವಾಗಿ ರಚಿಸಿ ಪೂರ್ವ ನಿರ್ಧಾರಿತ ದಿನದಂದು ಕಳುಹಿಸಬಹುದು.
* ತಾಣದಲ್ಲಿ ಸರಿಯಾದ ಶುಭಾಶಯ ಸಿಕ್ಕದಿದ್ದಲ್ಲಿ ನಮಗೆ ತಿಳಿಸಿ, ನಿಮಗಾಗಿ ನಾವು ಹೊಸದೊಂದು ಶುಭಾಶಯ ತಯಾರಿಸುವೆವು.

ಕುವೆಂಪು.com

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ. ಕುವೆಂಪು.com ಅಂತರ್ಜಾಲ ತಾಣ.

"ಕನ್ನಡ ಕವಿ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿ


ಕನ್ನಡನಾಡು ನುಡಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ ಕನ್ನಡ ಭಾಷೆ ಹಾಗು ಸಂಸ್ಕೃತಿಯ ಬಗ್ಗೆ ಎಲ್ಲರಲ್ಲಿ ಅಭಿಮಾನ ಉಂಟಾಗಲಿ ಎಂಬ ಉದ್ದೇಶದಿಂದ ನಮ್ಮ ತಂಡ "ಕನ್ನಡ ಕವಿ ಬಳಗ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಸಲುವಾಗಿ "ಕನ್ನಡ ಕವಿ" (www.kannadakavi.com)ಎಂಬ ಅಂತರ್ಜಾಲ ತಾಣವೊಂದನ್ನು ನಿರ್ಮಿಸಿ ಈಗಾಗಲೇ ವರ್ಷ ಕಳೆದಿದೆ. ಈಗ ಹೊಸ ವಿನ್ಯಾಸದಲ್ಲಿ ಯುನಿಕೋಡ್ ಆವೃತ್ತಿಯಲ್ಲಿ ಓದುಗರ ಸಮಕ್ಷಮಕ್ಕೆ ಇಡಲಾಗುತ್ತಿದೆ. ಬಾನುಲಿ ಡಿಸೈನ್ ಸ್ಟುಡಿಯೋಸ್(ಈ ಮುಂಚೆ ಐಡಿ ಟಕ್ನಾಲಜಿ)ಸಂಸ್ಥೆಯ ಶ್ರೀ ಪ್ರಶಾಂತ್ ಕಲ್ಲೂರ್ ಹಾಗೂ ತಂಡದವರು ಈ ಹೊಸ ವಿನ್ಯಾಸದ ರುವಾರಿಗಳಾಗಿದ್ದಾರೆ.

ಭಾನುವಾರ, ಅಕ್ಟೋಬರ್ 10, 2010

ಪ್ರೊ.ಎಸ್.ಎಲ್.ಭೈರಪ್ಪನವರ ವೆಬ್ಸೈಟ್


ಖ್ಯಾತ ಸಾಹಿತಿ, ಚಿಂತಕ ಪ್ರೊ.ಎಸ್.ಎಲ್.ಭೈರಪ್ಪ ಅವರು ತಮ್ಮ ನೂತನ ವೆಬ್ಸೈಟ್ನ್ನು ಉದ್ಘಾಟಿಸಿ ಹೈಟೆಕ್ ಆಗಿದ್ದಾರೆ.
ಇಂಗ್ಲಿಷ್ನಲ್ಲಿರುವ ಈ ವೆಬ್ಸೈಟ್ (www.slbhyrappa.com) ಅನ್ನು ನಂತರ ಕನ್ನಡದಲ್ಲೂ ಹೊರತರಲಾಗುವುದು ಎಂದು ಹೇಳಿದ್ದಾರೆ.
ಇನ್ನು ಮುಂದೆ ಪ್ರೊ.ಅವರ ಅಭಿಮಾನಿಗಳು ಅವರನ್ನು ಸಂಪರ್ಕಿಸಲಾಗುತ್ತಿಲ್ಲ ಎಂಬ ನೋವು ಕಾಡಿಸದು. ಏಕೆಂದರೆ ವೆಬ್ಸೈಟ್ನಲ್ಲಿ ನಿತ್ಯವೂ ಅವರ ಚಟುವಟಿಕೆ, ಇನ್ನಿತರ ವಿಷಯಗಳ ಕುರಿತು ನೋಡಬಹುದಾಗಿದೆ.
ವೆಬ್ ನಲ್ಲೇನಿದೆ?
ಭೈರಪ್ಪನವರ ಸ್ವ ವಿವರ, ರಚಿಸಿದ ಕೃತಿಗಳು, ಲಭಿಸಿದ ಪ್ರಶಸ್ತಿ, ಅವರ ಹವ್ಯಾಸ ಮತ್ತಿತರ ವಿಷಯಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲಾಗಿದೆ. ಇದಲ್ಲದೇ ಎಸ್ಎಲ್ಬಿ ಅವರು ಮೊದಲಿನಿಂದಲೂ ಇಲ್ಲಿಯವರೆಗೆ ರಚಿಸಿದ ಪ್ರತಿ ಪುಸ್ತಕ ಕುರಿತು ವಿವರ ಒದಗಿಸಲಾಗಿದೆ. ಇದರ ಜತೆಗೆ ದಿನಪತ್ರಿಕೆ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಇವರ ಬರಹಗಳು ಪ್ರಕಟವಾದುದ್ದನ್ನು ಇಲ್ಲಿ ನೋಡಬಹುದು.
ಅಪರೂಪದ ಚಿತ್ರಗಳು
ವೆಬ್ಸೈಟ್ನಲ್ಲಿ ಭೈರಪ್ಪ ಅವರ ಅಪರೂಪದ ಚಿತ್ರಗಳನ್ನು ವೀಕ್ಷಿಸಬಹುದು. ಅವರ ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಪ್ರತಿಯೊಂದು ಇಲ್ಲಿ ಲಭ್ಯ.

ಶನಿವಾರ, ಅಕ್ಟೋಬರ್ 9, 2010

ಆಸ್ಪತ್ರೆ ಅವ್ಯವಸ್ಥೆ: ‘ಇ-ವ್ಯವಸ್ಥೆ’ಗೆ ದೂರು ನೀಡಿ


ನಿಮ್ಮೂರು ಆಸ್ಪತ್ರೆಯಲ್ಲಿ ವೈದ್ಯರಿಲ್ಲವೇ? ಆ ವೈದ್ಯರ ಸೇವೆ ತೃಪ್ತಿಕರವಾಗಿಲ್ಲವೆ? ಆಸ್ಪತ್ರೆಯಲ್ಲಿ ಯಾರಾದರೂ ಲಂಚ ಕೇಳಿದರೆ? ಶೌಚಾಲಯ ಸರಿಯಾಗಿಲ್ಲವೆ? ಕುಡಿಯುವ ನೀರು ದೊರೆಯುತ್ತಲ್ಲವೆ? ಈ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು?
‘ದೊರೆ’ಯ ಬಳಿ ದೂರು ಹೇಳುವುದು, ಅದಕ್ಕೆ ಉತ್ತರ ಪಡೆಯುವುದು ಅಷ್ಟು ಸುಲಭವಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೆ? ಈ ಯಾವ ಪ್ರಶ್ನೆಗಳಿಗೂ ಜನಸಾಮಾನ್ಯರು ಇನ್ನು ಚಿಂತೆ ಮಾಡಬೇಕಿಲ್ಲ !
ಹೌದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ದೂರು, ಕುಂದುಕೊರತೆಗಳನ್ನು ನೇರವಾಗಿ ಇಲಾಖೆಗೆ ಮಂತ್ರಿಗಳ ಗಮನಕ್ಕೆ ತರಲು ‘ ಇ-ವ್ಯವಸ್ಥಾ’ ಯೋಜನೆ ಜಾರಿಗೆ ತಂದಿದೆ !.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ’ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ’ ಘೋಷವಾಕ್ಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಬರೀ ದೂರು ಹೇಳುವುದಕ್ಕಷ್ಟೇ ಈ ಪತ್ರ ಸೀಮಿತವಾಗಿಲ್ಲ. ನಿಮ್ಮೂರು ಆಸ್ಪತ್ರೆಯ ಅಭಿವೃದ್ಧಿಗೆ ನೀವು ಸಲಹೆಗಳನ್ನೂ ನೀಡಬಹುದು.
ಅಂದರೆ ಈ ಪತ್ರ ಬರೆಯುವುದು ಹೇಗೆ? ಆ ಪತ್ರ ಎಲ್ಲಿ ಸಿಗುತ್ತದೆ? ಅದಕ್ಕೆ ತಗುಲುವ ಅಂಚೆ ವೆಚ್ಚ ಭರಿಸುವವರು ಯಾರು? ಉತ್ತರ ನಿರೀಕ್ಷಿಸುವುದು ಹೇಗೆ? ಎಂಬ ಆಲೋಚನೆಯೇ?
ಅದಕ್ಕೆ ನೀವೇನು ಚಿಂತಿಸಬೇಕಾದ್ದಿಲ್ಲ… ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲೂ ಪ್ರಿಪೇಡ್ ಪತ್ರಗಳು ಉಚಿತವಾಗಿ ನಿಮಗೆ ಸಿಗುತ್ತವೆ. ಈ ಪತ್ರ ಭರ್ತಿ ಮಾಡಿ ನೀವು ಆಸ್ಪತ್ರೆ ಮುಖ್ಯಸ್ಥರ ಕೈಗೂ ಕೊಡಬೇಕಿಲ್ಲ. ಅಲ್ಲಿರುವ ದೂರು ಪೆಟ್ಟಿಗೆಯಲ್ಲಿ ಹಾಕಬೇಕಾಗಿಯೂ ಇಲ್ಲ. ನೇರವಾಗಿ ಅಂಚೆ ಪೆಟ್ಟಿಗೆಗೆ ಹಾಕಿದರೆ ನಿಮ್ಮ ಕೆಲಸ ಅಲ್ಲಿಗೆ ಮುಗಿಯಿತು.
ನಿಮ್ಮ ಪತ್ರ ವಿಧಾನಸೌಧದ ಆರೋಗ್ಯ ಸಚಿವರ ಕಚೇರಿ ತಲುಪುತ್ತದೆ. ಆ ಕಚೇರಿಯಿಂದ ನಿಮ್ಮ ದೂರು ನೋಂದಣಿಯಾಗಿರುವ ಕುರಿತು ನಿರ್ದಿಷ್ಟ ಕೋಡ್ ನಂಬರ್ ಹೊಂದಿರುವ ‘ಮೇಘಧೂತ’ ಅಂಚೆ ಕಾರ್ಡ್ ತಕ್ಷಣ ನಿಮಗೆ ಬರುತ್ತದೆ. ಆಗಿಂದ ನಿಮ್ಮ ವ್ಯವಹಾರವೇನಿದ್ದರೂ ಆ ಕೋಡ್ ನಂಬರ್ ಮೂಲಕವೇ ನಡೆಯಬೇಕು.
ಕೇವಲ ಕೋಡ್ ನಂಬರ್ ನೀಡಿ ಇಲಾಖೆ ಕೈತೊಳೆದುಕೊಳ್ಳುವುದಿಲ್ಲ. ನಿಮ್ಮ ದೂರು ಯಾವ ಜಿಲ್ಲೆಗೆ ಸಂಬಂಧಿಸಿರುತ್ತದೆ, ಆ ಜಿಲ್ಲೆಯ ಆರೋಗ್ಯ ಮತುತ ಕುಟುಂಬ ಕಲ್ಯಾಣಾಧಿಕಾರಿಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗುತ್ತದೆ.
ಆರೋಗ್ಯ ಇಲಾಖೆ ಇಂತಹ ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ಮುದ್ರಿಸಿ ಈಗಾಗಲೇ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿದೆ. ವೈದ್ಯರು ಅಥವಾ ಮುಖ್ಯಸ್ಥರ ಬಳಿ ‘ವ್ಯವಹಾರಿಕ ಮರು ಉತ್ತರ ಪತ್ರ’ ಕೊಡಿ ಎಂದು ಕೇಳಿ ಪಡೆದು ಅದನ್ನು ಭರ್ತಿ ಮಾಡಿ ಕಳುಹಿಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆರೋಗ್ಯ ಇಲಾಖೆ ಈ ವಿನೂತನ ‘ಇ -ವ್ಯವಸ್ಥಾ’ ಯೋಜನೆ ಜಾರಿಗೊಳಿಸಿದೆ. ಇದಕ್ಕೆ ಸಾರ್ವಜನಿಕರಿಂದ ದೊರೆಯುವ ಪ್ರತಿಕ್ರಿಯೆ ನೋಡಿಕೊಂಡು ಪತ್ರಗಳನ್ನು ವೆಬ್ಸೈಟ್ಗೆ ಹಾಕುವ ಪ್ರಯತ್ನವನ್ನೂ ಮಾಡಲು ಇಲಾಖೆ ಚಿಂತನೆ ನಡೆಸಿದೆ.

ಶುಕ್ರವಾರ, ಅಕ್ಟೋಬರ್ 8, 2010

ಚೆಕ್ ಬರೆಯುವಾಗ ಇರಲಿ ಎಚ್ಚರ

ಇನ್ನು ಮುಂದೆ ಹಿಂದಿನಂತೆ ಚೆಕ್ ಬರೆಯುವಾಗ ಸ್ಪೆಲ್ಲಿಂಗ್ ಅಥವಾ ಡೇಟ್ ತಪ್ಪಾದರೆ ಅದನ್ನೇ ತಿದ್ದಿ, ಅದರ ಮೇಲೆಯೇ ಸಣ್ಣದೊಂದು ಸಹಿ ಮಾಡಿ ಚೆಕ್ ಪ್ರೆಸೆಂಟ್ ಮಾಡುವ ಹಾಗಿಲ್ಲ. ತಿದ್ದಿದ ಚೆಕ್ಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿಬಿಟ್ಟಿದೆ. ಅದಕ್ಕೆಂದೇ ಪ್ರತ್ಯೇಕ ನಿಯಮವನ್ನೂ ಜಾರಿಗೊಳಿಸುತ್ತಿದೆ. ಚೆಕ್ ತಿದ್ದುವಿಕೆಗಳು ವಂಚನೆಗೆ ಕಾರಣವಾಗುತ್ತಿವೆ ಎಂದು ಭಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮ ಜಾರಿಗೆ ತರುತ್ತಿದೆ. ಚೆಕ್ಗಳಿಗೆ ನಿರ್ದಿಷ್ಟ ಸ್ಟ್ಯಾಂಡರ್ಡ್ ಹಾಗೂ ಸೆಕ್ಯೂರಿಟಿ ಇರಬೇಕೆನ್ನುವ ಕಾರಣವೂ ಹೊಸ ನಿಯಮ ರೂಪಿಸಲು ಕಾರಣವಾಗಿದೆ.
ಹೊಸ ನಿಯಮ ಇನ್ನೊಂದು ತಿಂಗಳಲ್ಲಿ  ಜಾರಿಗೆ ಬರಲಿದೆ. ಅನುಷ್ಠಾನಕ್ಕೆ ಬರಲಿರುವ ನಿಯಮಗಳನ್ನು ಸಿ.ಟಿ.ಎಸ್. 2010 ಸ್ಟ್ಯಾಂಡರ್ಡ್ ಎಂದು ಕರೆಯಲಾಗಿದೆ.  ಸಿಟಿಎಸ್ ಎಂದರೆ ಚೆಕ್ ಟ್ರಂಕೇಶನ್ ಸಿಸ್ಟಮ್. ಹಾಗೂ ತಿದ್ದಿದ ಚೆಕ್ ಅನ್ನೇ ಕೊಟ್ಟರೆ ಅದಕ್ಕೆ ದಂಡವನ್ನೂ ವಿಧಿಸಲಾಗುತ್ತದೆ ಎಂಬುದೂ ನಿಮ್ಮ ಗಮನದಲ್ಲಿರಲಿ. ತಿದ್ದಿದ ಚೆಕ್ಗಳಿಗೆ ದಂಡ ವಿಧಿಸುವ ಅಧಿಕಾರವನ್ನು ಬ್ಯಾಂಕ್ಗಳಿಗೆ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು 100 ರೂಪಾಯಿನಿಂದ 250 ರೂ.ಗಳ ವರೆಗೆ ದಂಡ ವಿಧಿಸಬಹುದಾದರೆ ಖಾಸಗಿ ವಲಯದ ಬ್ಯಾಂಕ್ಗಳು 550 ರೂಪಾಯಿಗಳ ವರೆಗೆ ದಂಡ ವಿಧಿಸಬಹುದು.
ಸಿಟಿಎಸ್ 2010ರ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಆರ್ಬಿಐ ಬ್ಯಾಂಕ್ಗಳಿಗೆ ನೀಡಿದೆ. ಎಲ್ಲ ಬ್ಯಾಂಕ್ಗಳು ಗ್ರಾಹಕರಿಗೆ ಈ ಬಗ್ಗೆ ಇನ್ನೂ ಮಾಹಿತಿ ನೀಡಬೇಕಿದೆ.

ಸಿಟಿಎಸ್ ಏನು ಹೇಳುತ್ತದೆ?

=    ಚೆಕ್ ಪ್ರಿಂಟ್ ಮಾಡುವ ಪೇಪರ್ಗಳ ಗುಣಮಟ್ಟಕ್ಕೆ ಒತ್ತು
=    ಚೆಕ್ ಲೀಫ್ನ ಮೇಲೆ ಸಿಟಿಎಸ್ ಇಂಡಿಯಾ ಎನ್ನುವ ವಾಟರ್ ಮಾಕರ್್ ಕಡ್ಡಾಯ
=    ಈ ವಾಟರ್ ಮಾಕರ್್ ಎಲ್ಲ ರೀತಿಯ ಬೆಳಕಿಗೆ ಕಾಣುವಂತಿರಬೇಕು.
=    ಚೆಕ್ ಬರೆಯುವಾಗ ದಿನಾಂಕ ತಪ್ಪಿದರೆ ಅದನ್ನು ತಿದ್ದಲು ಮಾತ್ರ ಅವಕಾಶ
=    ಆದರೆ ಪೇಯೀಸ್ ನೇಮ್, ಲೀಗಲ್ ಅಮೌಂಟ್ (ಅಕ್ಷರದಲ್ಲಿ ಮೊತ್ತ) ಹಾಗೂ ಕರ್ಟಸಿ ಅಮೌಂಟ್ 
       (ಅಂಕೆಗಳಲ್ಲಿ ಮೊತ್ತ)     ತಿದ್ದುವಂತಿಲ್ಲ.
=    ಬರೆಯುವಾಗ ಏನಾದರೂ ತಪ್ಪಿತೆಂದರೆ ಹೊಸ ಚೆಕ್ ಬರೆಯಬೇಕು.

ಇದು ಮೂವತ್ತೆರಡರ ಯುವಕನ ಮಾತು

ಗೂಗಲ್ ಎಂಬ ಅಂತರ್ಜಾಲ ಅಕ್ಷರಗಳನ್ನು ಗೊಂಬೆಯಂತೆ, ಕುಂಬಳಕಾಯಂತೆ, ಧ್ವಜದಂತೆ ಬರೆದು ಎಲ್ಲರ ಮನ ಗೆಲ್ಲುವಾತ ಮೂವತ್ತೆರಡು ವರ್ಷದ ಯುವಕ ಅಂದರೆ ನಂಬುತ್ತೀರಾ ? ಇವನ ಕಲಾಕೃತಿಯನ್ನು ಯಾವ ಆಟರ್್ ಗ್ಯಾಲರಿಯಲ್ಲಾಗಲೀ, ಮ್ಯೂಸಿಯಂನಲ್ಲಾಗಲೀ ತೂಗು ಹಾಕಿಲ್ಲ. ಆದರೂ ಈತ ಬರೆದ ಚಿತ್ರವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನ ವೀಕ್ಷಿಸಿ ಖುಷಿ ಪಡುತ್ತಾರೆ !
ಗೂಗಲ್ ಎಂದರೆ ಏನೆಂದು ಗೊತ್ತಿಲ್ಲದವರನ್ನು ಅನಕ್ಷರಸ್ಥ ಅಂತ ಕರೆಯುವ ಕಾಲ ಬಂದಿದೆ. ಗೂಗಲ್ ಇಲ್ಲದ ಅಂತರ್ಜಾಲ ಉಪ್ಪಿಲ್ಲದ ಸಮುದ್ರ ಅಂತಲೇ ಹೇಳಬೇಕು. ಈ `ಹೈಫೈ’ ಯುಗದಲ್ಲಿ ಬದುಕುತ್ತಿರುವ ನಾವು ಅಂತರ್ಜಾಲ ತಾಣಕ್ಕೆ ಹೋದರೆ, ಕೂತರೆ ಒಂದಲ್ಲ ಒಂದು ಸಲ ಗೂಗಲ್ ಪುಟವನ್ನು ಎಡತಾಕಲೇ ಬೇಕು.
ಗೂಗಲ್ ಪುಟ ತೆರೆದೊಡನೆ ನಮಗೆ ಬಣ್ಣ ಬಣ್ಣಗಳಲ್ಲಿ ಬರೆದ ಗೂಗಲ್ ಬರಹ ಕಾಣುತ್ತದೆ. ಕೆಲವೊಮ್ಮೆ ಈ ಆರು ಅಕ್ಷರಗಳು ಕೇವಲ ಅಕ್ಷರಗಳಾಗಿರದೆ ಯಾರದೋ ಮುಖದ ಕಣ್ಣುಗಳೋ, ಕಪ್ಪೆಯ ಕಾಲುಗಳೋ, ಡಿಎನ್ಎ ಸರಪಳಿಯೋ, ಲೈಟುಕಂಬವೋ ಆಗುವುದುಂಟು ! ಇತ್ತೀಚೆಗೆ ಗೂಗಲ್ ಪುಟ ಪಕ್ಮಾನ್ ಎಂಬ ಅತ್ಯಂತ ಜನಪ್ರಿಯ ಆಟದ ಅಂಗಳವಾಗಿ ಮಾರ್ಪಟ್ಟಿತ್ತು !
ಹೀಗೆ, ಇರುವ ಅಕ್ಷರಗಳನ್ನೇ ತಿರುಗಿಸಿ ಹಿಗ್ಗಿಸಿ ಹಿಂಜಿ ಹೊಸಹೊಸ ರೂಪ ಕೊಡುವ ಕಲೆಗೆ `ಡೂಡಲ್’ ಎನ್ನುತ್ತಾರೆ. ಗೂಗಲ್ ತೆರೆದಾಗ ಎಲ್ಲರ ಕಣ್ಣು ಸೆಳೆಯುವ ಈ ಡೂಡಲ್ಗಳು ಎಷ್ಟು ಜನಪ್ರಿಯವಾಗಿವೆಯೆಂದರೆ, ಅದರ ಮೇಲೆ ಬೇರೆ ಬೇರೆ ವೆಬ್ಪುಟಗಳಲ್ಲಿ ಪೇಜುಗಟ್ಟಲೆ ವಾದ ಹೂಡುವ, ಮೆಚ್ಚುಗೆ ಸೂಚಿಸುವ, ಕತೆ- ಪುರಾಣ ಬರೆಯುವ ಜಾಲಿಗರಿದ್ದಾರೆ. ಡೂಡಲ್ಗೇ ನೂರಾರು ಫ್ಯಾನ್ಕ್ಲಬ್ಗಳು ಹುಟ್ಟಿಕೊಂಡಿವೆ. ವಾರಕ್ಕೆ ಕನಿಷ್ಠ ಎರಡಾದರೂ ಇಂತಹ ಚಿತ್ರ `ವಿಚಿತ್ರ’ ಡೂಡಲ್ಗಳನ್ನು ಬರೆದು ಜಗತ್ತಿನ ಜಾಲಿಗರ ಕಣ್ಣು ತಂಪು ಮಾಡುವವನು ಡೆನ್ನಿಸ್ ಹ್ವಾಂಗ್ ಎಂಬ ಮೂವತ್ತೆರಡರ ಹರೆಯದ ಕೊರಿಯನ್ ಕಲಾವಿದ.
ಡೆನ್ನಿಸ್ ಹ್ವಾಂಗ್ ಗೂಗಲ್ಗೆ ಬಣ್ಣ ಮೆತ್ತಲು ಶುರು ಮಾಡಿದ್ದು ಅನಿರೀಕ್ಷಿತವಾಗಿ. ಗೂಗಲ್ ಕಂಪೆನಿಯಲ್ಲಿ ವೆಬ್ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ಹ್ವಾಂಗ್ ಬಳಿ ಗೂಗಲ್ ಮಾಲೀಕರಾದ ಲ್ಯಾರಿ ಪೇಜ್ ಮತ್ತು ಸೆಗರ್ಿ ಬ್ರಿನ್ ಬಂದು `ಹೇಗೂ ಕಾಲೇಜಲ್ಲಿ ಕಲೆಯನ್ನು ಕಲಿತವನು ನೀನು, ಯಾಕೆ ನಮ್ಮ ಕಂಪೆನಿಯ ಹೆಸರಿನ ಜೊತೆ ತುಸು ಕಸರತ್ತು ಮಾಡಬಾರದು?’ ಎಂದು ಕೇಳಿದರಂತೆ. ಮಾಲೀಕರ ಈ ಮಾತೇ ಅವನ ಪ್ರಯೋಗಗಳಿಗೆ ಒಂದು ಮುಖ್ಯ ಕಾರಣವಾಯಿತು. 2000ರ ಜುಲೈ 14ರಂದು ಹ್ವಾಂಗ್, ಬ್ಯಾಸ್ತಿಲ್ ದಿನಕ್ಕಾಗಿ ಒಂದು ವಿಶೇಷ ಡೂಡಲ್ ಬರೆದ. ಅದುವರೆಗೆ ಕೇವಲ ಹೆಸರನ್ನಷ್ಟೇ ನೋಡಿ ಒಗ್ಗಿಹೋಗಿದ್ದ ಜಾಲಿಗರಿಗೆ ಹ್ವಾಂಗ್ ಬರೆದ ಡೂಡಲ್ ಖುಷಿ ಕೊಟ್ಟಿತು. ಹೊಸ ಹವೆ ಕಣ್ಣುಗಳಿಗೆ ಮುತ್ತಿಕ್ಕಿ ಹೋದಂತಾಯಿತು. ಜಗತ್ತಿನಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂತು. ಅಂದಿನಿಂದ ಇಂದಿನವರೆಗೆ ಹ್ವಾಂಗ್, ತನ್ನ ಕಂಪೆನಿಯ ಪುಟ ಕಟ್ಟುವ ಕೆಲಸದಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದಾನೆ. ವರ್ಷಕ್ಕೆ ಕನಿಷ್ಠ ಐವತ್ತು ಡೂಡಲ್ ಬರೆದು ಜಾಲಿಗರ ಮನಸ್ಸಿಗೆ ಕಚಗುಳಿಯಿಡುತ್ತಾನೆ.
ಹ್ವಾಂಗ್ ಮೂಲತಃ ಕೊರಿಯದವನು. ಅಪ್ಪ ಫುಲ್ಬ್ರೈಟ್ ಫೆಲೋಶಿಪ್ ಪಡೆದು ಅಧ್ಯಯನಕ್ಕೆಂದು ಅಮೆರಿಕೆಗೆ ಬಂದಾಗ, ಜತೆಯಲ್ಲೇ ತಾನೂ ಬಂದವನು. ಆಗ ಅವನಿಗೆ ಹದಿನಾಲ್ಕು ವರ್ಷ. ಕೊರಿಯನ್ ಬಿಟ್ಟರೆ ಬೇರಾವ ಭಾಷೆಯೂ ಗೊತ್ತಿರಲಿಲ್ಲ. ಸುಮಾರು ಆರೇಳು ತಿಂಗಳು ಶಾಲೆಯಲ್ಲಿ ಓರಗೆಯವರು ಮತ್ತು ಅಧ್ಯಾಪಕರ ಬಾಯಿ ನೋಡುತ್ತ ಕೂರುವುದೇ ಅವನ ಕೆಲಸವಾಗಿತ್ತು !
ಮುಂದಿನ ದಿನಗಳಲ್ಲಿ ಕಷ್ಟಪಟ್ಟು ಇಂಗ್ಲಿಷ್ ಕಲಿತ. ಅಮೆರಿಕದ ಶಾಲೆಯಲ್ಲಿ ಕಲಿತಾದ ಮೇಲೆ ಸ್ಟಾನ್ಫೋಡರ್್ ವಿವಿಯಿಂದ ಕಲೆ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ  ಪದವಿ ಪಡೆದ. ಗೂಗಲ್ ಕಂಪೆನಿಯಲ್ಲಿ ವೆಬ್ಮಾಸ್ಟರ್ ಆಗಿ ಸೇರಿದ. ತನ್ನ  ಕೌಶಲ ಮತ್ತು ಜಾಣ್ಮೆಯಿಂದ, ಸೇರಿದ ಕೆಲವೇ ದಿನಗಳಲ್ಲಿ ಮುಂಬಡ್ತಿ ಪಡೆಯುತ್ತಾ ಹೋಗಿ, ಗೂಗಲ್ ತಾಂತ್ರಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಮುಖ್ಯಸ್ಥನ ಹುದ್ದೆಗೇರಿದ. ಬಿಡುವಿನ ಸಮಯದಲ್ಲಿ ಡೂಡಲ್ ಗೆರೆಗಳನ್ನೆಯುವ ಹ್ವಾಂಗ್ನಿಗೆ ಉಳಿದಂತೆ ತಲೆ ತುಂಬ, ಕೈತುಂಬ ಕೆಲಸ ಇದ್ದೇ ಇದೆ.
ಅವನ ಪ್ರಕಾರ ಎಯನ್ನು ಬೇಕಾದಂತೆ ಬಗ್ಗಿಸಲು ತುಂಬ ಕಷ್ಟ. ಹೆಸರಿನಲ್ಲಿ ಎರಡು ಕಡೆ ಬರುವ ಈ ಅಕ್ಷರ `ಕಲಾವಿದನಿಗೆ ತಲೆನೋವು ಮತ್ತು ಸವಾಲು’ ಎನ್ನುತ್ತಾನೆ ಆತ.
ಡೆನ್ನಿಸ್ ಹ್ವಾಂಗ್ ಜಗತ್ತಿನಾದ್ಯಂತ ಅತಿ ಹೆಚ್ಚು ಜನಪ್ರಿಯನಾದ, ಆದರೂ ಅಜ್ಞಾತವಾಗಿಯೇ ಉಳಿದಿರುವ ವಿಶಿಷ್ಟ ಕಲಾವಿದ. ದಿನವೊಂದಕ್ಕೆ ಕೋಟಿಗಟ್ಟಲೆ ಜನ ಡೂಡಲ್ಗಳತ್ತ ಕಣ್ಣು ಹಾಯಿಸಿದರೂ ಅದರ ಹಿಂದಿರುವ ಕೈಗಳ ಬಗ್ಗೆ ಚಿಂತಿಸುವವರು ವಿರಳ. ಸಂಕೋಚದ ಮುದ್ದೆಯಾಗಿರುವ ಹ್ವಾಂಗ್ಗೆ ಕೂಡ ಅನಾಮಿಕನಾಗಿಯೇ ಉಳಿಯುವುದು ಇಷ್ಟ. ವಿಚಿತ್ರವೆಂದರೆ, ಹ್ವಾಂಗ್ ಇಂತಹ ಡೂಡಲ್ಗಳಿಗೆ ಪಡೆಯುವ ಸಂಭಾವನೆ ಎಷ್ಟೆಂದು ಆತ ಮತ್ತು ಆತನ ಬಾಸ್ಗಳನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ !

ನೀಟಾಗಿರಲಿ ಬಯೋಡೇಟಾ

ಉದ್ಯೋಗ ಅರಸ ಹೊರಟವರ ಕೈಲಿ ಇರಬೇಕಾದ ಮೊದಲ ಆಯುಧವೇ ಸ್ವ-ವಿವರ ಅಥವಾ ಬಯೋಡೇಟಾ. ತನ್ನ ವೈಯಕ್ತಿಕ ಸಾಧನೆಗಳ ವಿವರ, ಶೈಕ್ಷಣಿಕ ಅರ್ಹತೆ, ಕೌಶಲ, ಅನುಭವ ಇತ್ಯಾದಿಗಳ ಕುರಿತು ಉದ್ಯೋಗಾಕಾಂಕ್ಷಿ ನೀಡುವ ಸಂಕ್ಷಿಪ್ತ ಪಟ್ಟಿ ಇದು. ತಮ್ಮಲ್ಲಿ ಖಾಲಿ ಇರುವ ಹುದ್ದೆ ತುಂಬುವಾಗ ಉದ್ಯೋಗದಾತರು ಮೊದಲು ನೋಡುವುದು ಇದೇ ಸ್ವ ವಿವರವನ್ನು. ಅದು ಯೋಗ್ಯ ಎನಿಸಿದರೆ ಮಾತ್ರ ಅಭ್ಯರ್ಥಿಗೆ ಭೇಟಿಯಾಗುವ ಅವಕಾಶ. ಹಾಗಾಗಿ ಸ್ವ-ವಿವರ ಎನ್ನುವುದು ಅಷ್ಟು ಪ್ರಭಾವಿಯಾಗಿರುವುದು ಅಗತ್ಯ. ಹಾಗಾಗಿ ಇದನ್ನು ತಯಾರಿಸುವಾಗ ಅಭ್ಯರ್ಥಿಯು ಬಹಳ ಕಾಳಜಿ ವಹಿಸಬೇಕು. ಹುದ್ದೆಯ ಅವಶ್ಯಕ್ಕೆ ಪೂರಕವಾಗಿ ತನ್ನಲ್ಲಿರುವ ಅರ್ಹತೆಗಳನ್ನು ಮಾತ್ರ ತಿಳಿಸಬೇಕು. ಅಂಥ ಪ್ರಭಾವಿ ಸ್ವ-ವಿವರ ತಯಾರಿಸುವುದೂ ಒಂದು ಕಲೆ.

ಚಿಕ್ಕ ಹಾಗೂ ಚೊಕ್ಕದಾಗಿರಲಿ

ಉನ್ನತ ಹುದ್ದೆಯಲ್ಲಿರುವವರಿಗೆ ಸಮಯ ಅತ್ಯಮೂಲ್ಯ. ಉದ್ದನೆ ಸ್ವ-ವಿವರ ನೋಡಲೂ ಅವರಿಗೆ ಸಮಯ ಇರಲಿಕ್ಕಿಲ್ಲ. ಹಾಗಾಗಿ ಅದು ಆದಷ್ಟು ಚಿಕ್ಕದು ಹಾಗೂ ಚೊಕ್ಕದಾಗಿರಬೇಕು. ಸೂಕ್ತ ಶಬ್ದ ಬಳಸಿ, ಎಲ್ಲಾ ಅವಶ್ಯ ಮಾಹಿತಿಗಳನ್ನೂ ನೀಡಬೇಕು. ಕೆಲವು ಉದ್ಯೋಗಗಳಿಗೆ ಅವುಗಳದ್ದೇ ಆದ ಅರ್ಹತೆ, ಕೌಶಲಗಳು ಮುಖ್ಯ. ಅಭ್ಯಥರ್ಿಗಳು ಅದನ್ನು ಗಮನಿಸಿ ಸ್ವ-ವಿವರ ತಯಾರಿಸಬೇಕು.

ವಿಷಯ ಏನಿರಬೇಕು?

ಸ್ವವಿವರವು ನಿಮ್ಮ ಸಾಧನೆಗಳ ಪಟ್ಟಿ ಮಾತ್ರ ಆಗಿರಬೇಕು. ಯಾವುದೇ ತಪ್ಪು ಮಾಹಿತಿ ಕೊಡಬಾರದು. ಮೊದಲ ಸಲ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ತಮ್ಮ ಸ್ವ-ವಿವರದಲ್ಲಿ ಹೆಸರು, ವಿದ್ಯಾರ್ಹತೆ, ಭಾಷೆಗಳ ಜ್ಞಾನ, ಪಠ್ಯೇತರ ಚಟುವಟಿಕೆ, ವಿಶೇಷ ಜ್ಞಾನ, ವಯಸ್ಸು, ಸಮಾಜ ಸೇವೆ, ಎನ್ಎಸ್ಎಸ್, ಎನ್ಸಿಸಿ, ಕ್ರೀಡೆ ಇತ್ಯಾದಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದರ ಬಗ್ಗೆ ಬರೆದಿರಬೇಕು. ಸಂಪರ್ಕಿಸಬೇಕಾದ ಕಾಯಂ ವಿಳಾಸ ಇರಬೇಕು. ಅನುಭವಿ ಕೆಲಸಗಾರರು ಎರಡನೆ ಹಂತದ ಉದ್ಯೋಗಕ್ಕೆ ಸೇರಬಯಸುವವರು ಮೇಲ್ಕಂಡ ವಿಷಯಗಳ ಜತೆ ತಮ್ಮ ಈಗಿನ ಹುದ್ದೆ ಹಾಗೂ ಸಂಸ್ಥೆಯ ಹೆಸರು ತಿಳಿಸಬೇಕು. ಆ ಉದ್ಯೋಗದಲ್ಲಿ ಮಾಡಿರುವ ಸಾಧನೆಗಳ ಬಗ್ಗೆಯೂ ತಿಳಿಸಬಹುದು.

ಶೈಕ್ಷಣಿಕ ಅರ್ಹತೆಗಳು

ಅತಿ ಹೆಚ್ಚಿನ ಅರ್ಹತೆಯನ್ನು ಮೊದಲು ಬರೆದು ನಂತರ ಇಳಿಕೆ ಕ್ರಮದಲ್ಲಿ ಉಳಿದವುಗಳನ್ನು ಬರೆಯಬೇಕು. ಉದಾ: ಎಂಎ ಮಾಡಿಕೊಂಡಿರುವುದನ್ನು ಮೊದಲು ಬರೆದು, ನಂತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಬಗ್ಗೆ ಬರೆಯಬೇಕು. ಯಾವ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ್ದೀರಿ ಎಂಬುದರ ಜತೆಗೆ ಆ ಸಂಸ್ಥೆಯ ಸಾಮಾಜಿಕ ಮನ್ನಣೆ ಬಗ್ಗೆಯೂ ಬರೆಯಬಹುದು. ಪಡೆದ ಅಂಕಗಳು, ಗ್ರೇಡ್, ಶೇಕಡಾವಾರು, ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡ ವಿಷಯದ ಬಗೆಗೂ ತಿಳಿಸಬೇಕು.

ಪಠ್ಯೇತರ ಚಟುವಟಿಕೆಗಳು

ನೀವು ಕೇವಲ ಶೈಕ್ಷಣಿಕ ಅರ್ಹತೆ ಹಾಗೂ ಅನುಭವ ಪಡೆದುಕೊಂಡಿದ್ದರೆ ಸಾಲದು. ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರ ಬಗ್ಗೆ ಬರೆದರೆ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಉದ್ಯೋಗದಾತರಿಗೆ ಸಾಧ್ಯವಾಗುವುದು. ನೀವು ಸಾಮಾಜಿಕ ಜೀವಿ ಹಾಗೂ ಹೊಂದಾಣಿಕೆ ಸ್ವಭಾವದವರೆಂದು ತಿಳಿದುಕೊಳ್ಳಲು ಇದರಿಂದ ಸಾಧ್ಯ.

ಅನುಭವವೇ ಆಧಾರ

ಅನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ತರಬೇತಿ ಸಮಯ ಹಾಗೂ ವೆಚ್ಚ ಉಳಿತಾಯವಾಗುತ್ತದೆ. ಹಾಗಾಗಿಯೇ ಅನುಭವಸ್ಥರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ನೀವೂ ಕೂಡ ಅನುಭವದ ಅವಧಿ, ಪಡೆದಿರುವ ಕೌಶಲ, ಸಾಧನೆಗಳ ಪಟ್ಟಿ ಇತ್ಯಾದಿಗಳನ್ನು ವಿವರವಾಗಿ ನೀಡಬೇಕು.

ಸಂಪೂರ್ಣ ವಿಳಾಸ ಇರಲಿ

ಇಂದು ಅಂತರ್ಜಾಲದ ಮೂಲಕ ಶೀಘ್ರವಾಗಿ ಮಾಹಿತಿ ರವಾನಿಸುವ ಕಾಲ. ಹಾಗಾಗಿ ನಿಮ್ಮ ವಿಳಾಸವು ಇ-ಮೇಲ್, ಮೊಬೈಲ್ ಸಂಖ್ಯೆ ಹೊಂದಿರಲಿ. ಸದ್ಯದ ವಿಳಾಸ ಹಾಗೂ ಕಾಯಂ ವಿಳಾಸವನ್ನೂ ತಿಳಿಸುವುದು ಅಗತ್ಯ.

ಇತರೆ ವಿಷಯಗಳು

ಹೆಚ್ಚು ಭಾಷೆಗಳ ಜ್ಞಾನ ಹೊಂದಿದ್ದರೆ ಒಳಿತು. ಆ ಬಗ್ಗೆ ನಿಮ್ಮ ಸ್ವ ವಿವರದಲ್ಲಿ ತಿಳಿಸಿ. ನಿಮ್ಮ ವಯಸ್ಸು, ಮುಂದಿನ ಗುರಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು, ಸದಸ್ಯತ್ವ ಪಡೆದುಕೊಂಡಿರುವುದು, ಇಬ್ಬರು ಪರಿಚಯಸ್ಥರು ಹಾಗೂ ಅವರ ಹುದ್ದೆ, ವಿಳಾಸ ತಿಳಿಸಬೇಕು.

ಅರ್ಜಿಯೂ ಇರಲಿ

ಯಾವುದೇ ಉದ್ಯೋಗಕ್ಕೆ ನೇರವಾಗಿ ಸ್ವ-ವಿವರ ನೀಡಬೇಡಿ. ಅದರ ಜತೆಗೆ ಒಂದು ಅರ್ಜಿ ಇರಲಿ. ಯಾವ ಹುದ್ದೆ ಬಯಸುತ್ತಿದ್ದೀರಿ ಎಂಬುದನ್ನು ಅದರಲ್ಲಿ ಸ್ಪಷ್ಟವಾಗಿ ತಿಳಿಸಿ. ಅರ್ಜಿಯು ಚಿಕ್ಕ ಹಾಗೂ ಚೊಕ್ಕದಾಗಿದ್ದು, ನಿಮ್ಮ ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ಪ್ರಮುಖವಾದ ಒಂದು ವಾಕ್ಯ ಅದರಲ್ಲಿರಲಿ. ಅರ್ಜಿಯ ಕೊನೆಯಲ್ಲಿ ತಾವು ಅವಕಾಶ ಮಾಡಿ ಕೊಟ್ಟಲ್ಲಿ ಸಂದರ್ಶನಕ್ಕೆ ಹಾಜರಾಗಲು ಸಿದ್ಧನಿರುವುದಾಗಿ ತಿಳಿಸಬೇಕು.
ಅರ್ಜಿ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೆಂದು ದಪ್ಪಕ್ಷರದಲ್ಲಿ ಬರೆಯಬೇಕು. ಪ್ರತಿ ಹುದ್ದೆಗೂ ವಿಶೇಷವಾಗಿ ಸ್ವ-ವಿವರ ತಯಾರಿಸುವುದು ಸೂಕ್ತ.

ಮರದಿಂದ ಮೊಬೈಲ್ ಚಾರ್ಜ್

ಕಾಲಿಟ್ಟಲ್ಲೆಲ್ಲಾ ಪರಿಸರವನ್ನು ಹಾಳು ಮಾಡೋ ಸ್ವಭಾವ ನಮ್ಮದು. ಮರಗಿಡಗಳನ್ನು ನೆಲಸಮ ಮಾಡಿ ಕಾಂಕ್ರಿಟ್

ಕಾಡು ಬೆಳೆಸೋ ತಿಕ್ಕಲುತನ . ಈ ಪ್ರಕೃತಿಯಾದ್ರೂ ಅಷ್ಟೇ. ಬರೀ ಜೀವ ತೇಯೋದೊಂದು ಗೊತ್ತು. ಸ್ವಾರ್ಥ ಅನ್ನೋದೇ ಇಲ್ವೇ? ತನ್ನ ಮೇಲೆ ಇಷ್ಟೆಲ್ಲ ದಾಳಿ ನಡೆಸ್ತಾ ಇದ್ರೂ ಹೆಲ್ಪ್ ಮಾಡೋದು ಮರೆಯಲ್ಲ. ಅದರ ಸಾಲಿಗೆ ಈಗ ಇನ್ನೊಂದು ಸೇರಿದೆ. ಏನಪ್ಪಾ ಅಂದ್ರೆ, ಮರದಲ್ಲಿರುವ ಬಯೋಎಲೆಕ್ಟ್ರಿಕ್ ಅಂಶ ತುಂಬ ನೈಸಗರ್ಿಕವಾಗಿ ನಮ್ಮ ಎಲೆಕ್ಟ್ರಾನಿಕ್ ಸರ್ಕ್ಯೂಟ್ಗೆ ಶಕ್ತಿ ನೀಡಬಲ್ಲದು! ಆಧುನಿಕ ಮೊಬೈಲ್ಗೆ ತೀರ ಕಡಿಮೆ ವಿದ್ಯುತ್ ಸಾಕು. ಹೀಗಾಗಿ ಟಚ್ ಸ್ಕ್ರೀನ್ ಮೊಬೈಲ್ ಬ್ಯಾಟರಿಯನ್ನು ಮರದಿಂದ ನೇರವಾಗಿ ಚಾರ್ಜ್ ಮಾಡ್ಕೋಬಹುದು ಅಂತ ಹೇಳಲಾಗ್ತಿದೆ. ಅಮೆರಿಕದ ಮೇಪಲ್ ಮರಗಳಿಂದ 1.1 ವೋಲ್ಟ್ ವಿದ್ಯುತ್ ಪಡೆಯಲಾಗಿದೆಯಂತೆ. ಇನ್ನಾದರೂ ಮನೆಯಂಗಳದಲ್ಲಿ ಮರ ಬೆಳೆಸೋ ಹವ್ಯಾಸ ರೂಢಿಸಿಕೊಳ್ತಾರೇನೋ ನಮ್ಮ ಜನ. ಯಾಕೆಂದ್ರೆ ಸುಲಭವಾಗಿ ರೀಚಾರ್ಜ್ ಮಾಡ್ಕೋಬಹುದಲ್ವಾ?

ಗುರುವಾರ, ಅಕ್ಟೋಬರ್ 7, 2010

ಕೊನೆಗೂ ಬಂತು ಕೃತಕ ರಕ್ತ

ಬ್ರಿಟಿಷ್ ವಿಜ್ಞಾನಿಗಳು ಭ್ರೂಣದ ಕಾಂಡಕೋಶಗಳಿಂದ ಮಾನವ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು, ರಕ್ತ ವರ್ಗಾವಣೆ ಸಮಯದಲ್ಲಿ  ಅಗತ್ಯವಿರುವ ಕೃತಕ  `ಒ’  ನೆಗೆಟಿವ್ ರಕ್ತವನ್ನು ತಯಾರಿಸಲು ಅನುವು ಮಾಡಿಕೊಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪರ್ಯಾಯ ರಕ್ತವನ್ನು ತಯಾರಿಸುವ ಸಲುವಾಗಿ ಆರಂಭಿಸಲಾದ 300 ಲಕ್ಷ ಪೌಂಡ್ ವೆಚ್ಚದ ಸಂಶೋಧನಾ ಯೋಜನೆಯಡಿ ಈ ಮಹತ್ವದ ಯಶಸ್ಸನ್ನು ಸಾಧಿಸಲಾಗಿದೆ. ಭ್ರೂಣದ ಹೆಚ್ಚುವರಿ ಕಾಂಡಕೋಶಗಳ ನೆರವಿನಿಂದ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ಸನ್ನು ಸಾಧಿಸಲಾಗಿದೆ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಕೃತಕ ಗರ್ಬಧಾರಣೆ ಕ್ಲಿನಿಕ್ಗಳಲ್ಲಿ ಬಳಸಿದ ನಂತರ ಉಳಿದಿದ್ದ ಸುಮಾರು 100ಕ್ಕೂ ಹೆಚ್ಚು ಭ್ರೂಣಗಳ ನೆರವಿನಿಂದ ಈ ಪ್ರಯೋಗವನ್ನು ನಡೆಸಲಾಗಿದೆ. ಈ ಭ್ರೂಣಗಳಿಂದ ಹಲವಾರು ಲೈನ್ಸ್ ಎಂಬ ಕಾಂಡಕೋಶಗಳನ್ನು ನಿರ್ಮಿಸಲಾಗಿದೆ. ಆರ್ಸಿ-7 ಎಂಬ ಲೈನನ್ನು, ಆಮ್ಲಜನಕವನ್ನು ಸಾಗಿಸುವ ಗುಣವುಳ್ಳ ಹಿಮೊಗ್ಲೋಬಿನ್ ಹೊಂದಿರುವ ಕೆಂಪು ರಕ್ತ ಕಣಗಳನ್ನಾಗಿ ಪರಿವರ್ತಿಸುವ ಮೊದಲು, ರಕ್ತದ ಕಾಂಡಕೋಶದೊಳಕ್ಕೆ ವರ್ಗಾವಣೆ ಮಾಡಲಾಗಿತ್ತು.
ಎಡಿನ್ಬರ್ಗ್ ನಲ್ಲಿನ ಸ್ಕಾಟಿಶ್ ನ್ಯಾಷನಲ್ ಬ್ಲಡ್ ಟ್ರಾನ್ಸ್ ಫ್ಯೂಷನ್ ಸರ್ವಿಸ್  ಸಂಸ್ಥೆಯ ನಿರ್ದೇಶಕ ಹಾಗೂ ಈ ಸಂಶೋಧನಾ ತಂಡದ ಮುಖ್ಯಸ್ಥ ಪ್ರೊ. ಮಾರ್ಕ್  ಟರ್ನರ್ ಹೇಳಿದ್ದಾರೆ. ಭಾರಿ ಪ್ರಮಾಣದಲ್ಲಿ ಕೃತಕ ರಕ್ತ ನಿರ್ಮಾಣದಿಂದ ರಕ್ತದ ಕೊರತೆಯನ್ನು ನಿವಾರಿಸಬಹುದಾಗಿದೆ ಮತ್ತು ರಕ್ತ ವರ್ಗಾವಣೆ ಸಮಯದಲ್ಲಿ ರಕ್ತದ ದಾನಿಗಳು ಮತ್ತು ರಕ್ತವನ್ನು ಪಡೆಯುವವರಲ್ಲಿ ಯಾವುದೇ ರೀತಿಯ ಸೋಂಕನ್ನು ತಡೆಗಟ್ಟಲು ಸಹ ಇದು ಸಹಕಾರಿ ಎಂದು ಅವರು ಹೇಳಿದ್ದಾರೆ. ಭ್ರೂಣದ ಕಾಂಡಕೋಶಗಳ ಲೈನ್ಗಳಿಂದ ಕೆಂಪು ರಕ್ತ ಕಣಗಳನ್ನು ತಯಾರಿಸಬಹುದು ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಮೂರು ವರ್ಷಗಳ ಅಂತ್ಯದಲ್ಲಿ ನಾವು ಒಂದು ಪಿಂಟ್  ಉನ್ನತ ಮಟ್ಟದ, ಮಾನವ ರಕ್ತ ಸ್ವಭಾವದ ಎಲ್ಲ ಬಗೆಯ ಗುಣಲಕ್ಷಣಗಳನ್ನು ಹೊಂದಿರುವ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದು ಪ್ರೊ.ಟರ್ನರ್ ಹೇಳಿದ್ದಾರೆ.

ಬುಧವಾರ, ಅಕ್ಟೋಬರ್ 6, 2010

ಕಾರು ಕಳವು ತಡೆಗೆ ನೂತನ ತಂತ್ರಜ್ಞಾನ

ಇದು ವಾಹನ ಮಾಲೀಕನಿಗೆ ಎಸ್ಎಂಎಸ್ ಕಳುಹಿಸುತ್ತದೆ
ಇತೀಚಿನ ದಿನಗಳಲ್ಲಿ ಸಿರಿವಂತರಷ್ಟೇ ಅಲ್ಲ ಮಧ್ಯಮ ವರ್ಗದವರ ಮನೆ ಮುಂದೆಯೂ ಕಾರುಗಳು ಇರುವುದು ಈಗ ಸಾಮಾನ್ಯ ನೋಟ. ಥರಹೇವಾರಿ ಕಾರುಗಳಿಗೇನು ಕೊರತೆ ಇಲ್ಲ. ತಿಂಗಳಲ್ಲಿ ಹಲವು ಹೊಸ ಮಾದರಿ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತವೆ. ಮಾರಾಟವೂ ಅಷ್ಟೇ ಭರ್ಜರಿಯಾಗಿ ನಡೆಯುತ್ತಿದೆ.
ಜತೆಗೆ ಕಾರು ಕಳ್ಳರ ಕೈಚಳಕವೂ ಹೆಚ್ಚಾಗಿದೆ. ಕಾರುಗಳ ಕಳ್ಳತನದಲ್ಲಿ ದೆಹಲಿ, ಮುಂಬಯಿ ನಂತರ ಸ್ಥಾನದಲ್ಲಿ ಬೆಂಗಳೂರು ಹಾಗೂ ಮೈಸೂರು ಇದೆ. ವಾಹನ ಕಳ್ಳತನ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವ ಅಪರಾಧವಾಗಿದೆ. ಕಾರು ಕಳೆದುಕೊಂಡು ಪರದಾಡುವವರಿಗೆ ಈಗ ತಂತ್ರಜ್ಞಾನ ನೆರವಿಗೆ ಬಂದಿದೆ. ಈ ಸಾಧನಗಳ ನೆರವಿನಿಂದ ಕಾರುಗಳನ್ನು ಕಳ್ಳತನ ಆಗದಂತೆ ತಡೆಗಟ್ಟಬಹುದು.
 
ಅದು ಮೊಬೈಲ್ ಫೋನ್ನಿಂದ ಮಾತ್ರ ಅಂದ್ರೆ ವಿಚಿತ್ರ ಅನ್ಸುತ್ತೆ. ಆದ್ರೂ ನಿಜ. ಅಂತಹ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನ ‘ಐಟ್ರಾನ್ಸ್ ಟೆಕ್ನಾಲಜೀಸ್’ ಪರಿಚಯಿಸಿದೆ.
ಈ ತಂತ್ರಜ್ಞಾನದ ಹೆಸರು ‘ಟಿಕಾಪ್’ ಇದು ಜಿಎಸ್ಎಂ ಆಧಾರಿತ ತಂತ್ರಜ್ಞಾನ. ಟಿಕಾಪ್ನಲ್ಲಿ ವೋಡಾಫೋನ್ ಸಿಮ್ ಕಾರ್ಡನ್ನು ಹಾಕಿ ಕಾರಿನಲ್ಲಿ ಅಳವಡಿಸಿ ಅಕ್ಟಿವೇಟ್ ಮಾಡಲಾಗುತ್ತದೆ. ಟಿಕಾಪ್ ಜತೆ ಮಾಲೀಕನ ಯಾವುದೇ ಟೆಲಿಕಾಂ ಸೇವೆಯ ಮೊಬೈಲ್ ಸಂಪರ್ಕ ಕಲ್ಪಿಸಬಹುದು. ಇದೊಂದು ಪುಟ್ಟ ಸಾಧನವಾಗಿದ್ದು, ವಾಹನ ಕಳ್ಳತನವಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಹೆಚ್ಚು ಅನುಕೂಲತೆ ಕಲ್ಪಿಸಿದೆ.
ಟಿಕಾಪ್ ತಂತ್ರಜ್ಞಾನ ಅಳವಡಿಸಿದ ವಾಹನವು ಪ್ರತಿ 5 ನಿಮಿಷಕ್ಕೊಮ್ಮೆ ಯಾವ ಸ್ಥಳದಲ್ಲಿದೆ ಎಂಬುದನ್ನು ಎಸ್ಎಂಎಸ್ ಮೂಲಕ ಸೂಚನೆ ನೀಡುತ್ತದೆ. ಯಾರಾದರೂ ಕಾರು ಕಳ್ಳತನ ಮಾಡುವ ಉದ್ದೇಶದಿಂದ ಒಳ ನುಗ್ಗಲು ಯತ್ನಿಸಿದರೆ ತಕ್ಷಣವೇ ಕಾರು ಮಾಲೀಕನಿಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನಿಸುತ್ತದೆ.
ಆಗ ಮಾಲೀಕ ತಕ್ಷಣ ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಬಹುದು. ಕಾರ್ ಕಳ್ಳತನ ಮಾಡಿದ ಕಳ್ಳನು ಟಿಕಾಪ್ ಅಳವಡಿಕೆಯ ಬಗ್ಗೆ ಗೊತ್ತಿಲ್ಲದೆ ಇದ್ದಾಗ ಮಾಲೀಕರು ತಕ್ಷಣವೇ ಎಸ್ಎಂಎಸ್ ಮಾಡಿ ಸೈರನ್ ಆನ್ ಆಗುವ ಹಾಗೆ ಮಾಡಬಹುದು. ಇದರಿಂದ ಕಳ್ಳನು ಸಿಕ್ಕಿಬೀಳುವ ಸಾಧ್ಯತೆಗಳುಂಟು. ಸೈರನ್ ಬೇಕಾದಾಗ ಆನ್ ಅಥವಾ ಆಫ್ ಮಾಡುವ ಸೌಲಭ್ಯವೂ ಉಂಟು. ಯಾರಾದರೂ ನಿಮ್ಮ ವಾಹನವನ್ನು ಕೇಳಿ ಪಡೆದು ಬೇಕಾಬಿಟ್ಟಿ ಎಲ್ಲೆಲ್ಲೊ ಸುತ್ತಾಡುವುದಕ್ಕೂ ತಡೆ ಹಾಕಬಹುದು.
ಈ ಟೆಕಾಪ್ ತಂತ್ರಜ್ಞಾನದಿಂದ ಇದೆಲ್ಲಾ ಹೇಗ್ಪಾ ಸಾಧ್ಯ ಅಂತೀರಾ? ಟೆಕಾಪ್ ಅಳವಡಿಸಿದ ಯಾವುದೇ ವಾಹನವು ಚಾಲನೆಯಾದ 72 ಗಂಟೆಗಳ ಚಲನೆಯ ದತ್ತಾಂಶಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ. ವಾಹನ ದುರ್ಬಳಕೆ ಮತ್ತು ಕಳ್ಳತನಕ್ಕೆ ಟೆಕಾಪ್ ದೊಡ್ಡ ಅಸ್ತ್ರವೇ ಆಗಿದೆ.
ಶಾಲಾ ವಾಹನ ಸೇರಿದಂತೆ ಅನೇಕ ವಾಹನಗಳನ್ನು ಹೊಂದಿರುವವರಿಗೂ ಇದರಿಂದ ಲಾಭವಿದೆ. ಬಳಿಯಲ್ಲಿ ಹಲವು ಚಾಲಕರು ಕೆಲಸಕ್ಕೆ ಇರುವಾಗಲೂ ಇದು ಬಹಳ ಸಹಾಯಕ. ಮಕ್ಕಳ ಪಾಲಕರಿಗೆ ಶಾಲಾ ವಾಹನ ಎಲಿದೆ. ಬರಲು ಇನ್ನೂ ಎಷ್ಟು ಸಮಯ ಬೇಕು ಎನ್ನುವ ಮಾಹಿತಿ ತಿಳಿಸಬಹುದು. ಬೇಕೆಂದಾಗ ಮೊಬೈಲ್ ಸಂಖ್ಯೆಗಳನ್ನು ಸೇರಿಸಬಹುದು ಅಥವಾ ತೆಗೆಯಬಹುದು.
ಮಾಹಿತಿಗೆ http://www.tcop.co.in/ತಾಣಕ್ಕೆ ಭೇಟಿ ನೀಡಿ.

ಮುಕ್ತ ವಿವಿಯಲ್ಲಿ ಇ-ರಿಸೋರ್ಸ್ ಸೆಂಟರ್ ಆರಂಭ

                             Ksou buliding
ಪ್ರಸಕ್ತ ಸಾಲಿನಲ್ಲಿ 2 ಲಕ್ಷ ವಿದ್ಯಾರ್ಥಿಗಳಿಂದ ವಿವಿ ಪ್ರವೇಶ

ಮೈಸೂರು: ದಿನೇ ದಿನೆ ತನ್ನ ಕಾರ್ಯವ್ಯಾಪಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ.
ಈ ಕುರಿತು ಜಸ್ಟ್ ಕನ್ನಡದೊಂದಿಗೆ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ. ಆರ್.ರಂಗಪ್ಪ ತನ್ನ ನೂತನ ಯೋಜನೆಗಳನ್ನು ವಿವರಿಸಿದ್ದು ಹೀಗೆ…
ತನ್ನ ವಿದ್ಯಾರ್ಥಿಗಳಿಗೆ ಕುಳಿತಲ್ಲಿಯೇ ಪಠ್ಯ ಮತ್ತಿತರ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರಂಥಾಲಯದಲ್ಲಿ ವಿದ್ಯುನ್ಮಾನ-ಸಂಪನ್ಮೂಲ ಕೇಂದ್ರ (ಇ ರಿಸೋರ್ಸ್ ಸೆಂಟರ್) ಆರಂಭಿಸಲಾಗಿದೆ.
ದೂರಶಿಕ್ಷಣ ಕಲ್ಪಿಸುವ ಸವಾಲುಗಳನ್ನು ಮೀರಿ ನಿಲ್ಲಲು ಅಭ್ಯರ್ಥಿಗಳು ತಾವು ಇರುವಲ್ಲಿಯೇ ಅಥವಾ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದಲೇ ಕಲಿಕೆಗೆ ಮುಂದಾಗಲಿ ಎಂಬ ಉದ್ದೇಶದಿಂದ ಇಂತಹ ಅತ್ಯಾಧುನಿಕ ಸೇವೆಗಳನ್ನು ಕಲ್ಪಿಸುತ್ತಿದೆ. ಇಲ್ಲಿನ ಗ್ರಂಥಾಲಯದಲ್ಲಿ ಇ-ಸಂಪನ್ಮೂಲವಲ್ಲದೆ 1 ಲಕ್ಷಕ್ಕೂ ಹೆಚ್ಚು ಸಂಪುಟಗಳನ್ನು ಹೊಂದಿದೆ. ಸುಸಜ್ಜಿತ ಕಂಪ್ಯೂಟರ್ ಸೇವೆಗಳು, ಸಿಡಿ-ಡಿವಿಡಿ ಮೂಲಾಂಶ, ಅಂತರ್ಜಾಲ, ಇ-ಕಲಿಕಾ ಪ್ಯಾಕೇಜ್, ಸಂಪೂರ್ಣ ಪಠ್ಯವಿರುವ ಇ-ಸಂಪನ್ಮೂಲ ಮತ್ತಿತರ ಸೇವೆ ಒಳಗೊಂಡಿದೆ. ಹೀಗಾಗಿ ಸಾಂಪ್ರದಾಯಕ ಗ್ರಂಥಾಲಯವು ಸಹ ಅತ್ಯಾಧುನಿಕ ಸ್ಪರ್ಶವನ್ನು ಪಡೆದುಕೊಂಡಿದ್ದು, ಕಲಿಕಾರ್ಥಿಗಳ ಇಂದಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಸಜ್ಜಾಗಿದೆ.
KSOU VC pro.Rangappa
ಸಮರ್ಗ ಮಾಹಿತಿಗೆ ಈ ವೆಬ್ ಸೈಟ್ ನೋಡಿ
www.ksoumysore.edu.in ವೆಬ್ ಸೈಟ್ ಪ್ರವೇಶಿಸಿ, ತಮಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ಸಹ ಪಡೆಯಬಹುದು. ಒಂದೇ ಮಾಹಿತಿಯನ್ನು ಏಕಕಾಲದಲ್ಲಿ ಹಲವು ಮಂದಿ ಪಡೆಯಬಹುದು. ಒಂದೇ ಮಾಹಿತಿಯನ್ನು ಏಕಕಾಲದಲ್ಲಿ ಹಲವು ಮಂದಿ ಪಡಯಬಹುದು. ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯೋದ್ದೇಶವನ್ನು ಸಾಕಾರಗೊಳಿಸುವ ಗುರಿಯೊಂದಿಗೆ ಈ ಕೇಂದ್ರ ಆರಂಭವಾಗಿದೆ. ದೃಷ್ಟಿ ದೋಷ ಉಳ್ಳವರಿಗೆ ಅಗತ್ಯ ಸಾಫ್ಟ್ ವೇರ್ ಗಳನ್ನು ಬಳಸುವ ಮೂಲಕ ವಿಶೇಷ ಸೇವೆ ಕಲ್ಪಿಸಲು ವಿವಿ ಯೋಜಿಸಿದೆ. ಇದಲ್ಲದೆ ಸಾವಿರಾರು ಇ-ಜರ್ನಲ್ ಗಳು, ಇ-ಪುಸ್ತಕಗಳು ಮೊದಲಾದವುಗಳನ್ನು ಅಂತರ್ಜಾಲದ ಮೂಲಕ ಡೆಯಬಹುದು ಎಂದು ರಂಗಪ್ಪ ವಿವರಿಸಿದರು.
2009-10ನೇ ಸಾಲಿನಲ್ಲಿ ವಿವಿಗೆ ಪ್ರವೇಶ ಪಡೆದವರ ಸಂಖ್ಯೆ 1 ಲಕ್ಷ ಮೀರಿತ್ತು. 2010-11ನೇ ಸಾಲಿನಲ್ಲಿ ಈ ಸಂಖ್ಯೆ 2 ಲಕ್ಷ ಮುಟ್ಟುವ ನಿರೀಕ್ಷೆ ಇದೆ. ಈ ಪ್ರಮಾಣದ ವಿದ್ಯಾರ್ಥಿಗಳ್ನು ಸುಲಭವಾಗಿ ತಲುಪುವಂತಗಲು ವಿವಿಯು ಅತ್ಯಾಧುನಿಕ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಗೊಂದಲ ಅಥವಾ ಮತ್ತಷ್ಟು ಮಾಹಿತಿ ಬೇಕೆಂದರೆ ದೂರವಾಣಿ ಸಂಖ್ಯೆ: 0821-2512471 ಅನ್ನು ಸಂಪರ್ಕಿಸಬಹುದು .