ಬುಧವಾರ, ಜನವರಿ 5, 2011

(ಕ್ಷಮಿಸಿ) ವಿಶ್ವೇಶ್ವರ ಭಟ್ ಬ್ಲಾಗಿಗೆ ದಾರಿ

ಕನ್ನಡ ಪತ್ರಕರ್ತ, ಲೇಖಕ ಮತ್ತು ಲೋಕ ಪ್ರಸಿದ್ಧ ವಿಜಯ ಕರ್ನಾಟಕದ ವಿಶ್ವ ಪ್ರಸಿದ್ಧ ವಿಶ್ವೇಶ್ವರ ಭಟ್ ಅವರು ಅಂತರಜಾಲ ಕಕ್ಷೆಗೆ ತಮ್ಮನ್ನು ತಾವು ಉಡಾಯಿಸಿಕೊಂಡಿದ್ದಾರೆ. ಅವರದೇ ನಾಮಾಂಕಿತ, "ವಿಶ್ವೇಶ್ವರ ಭಟ್" ವೆಬ್ ಸೈಟು ಆರಂಭವಾಗಿದ್ದು ಕಳೆದ ಮೂರು ದಿನಗಳಿಂದ ಸೈಟು ಸೈಬರ್ ಗಲ್ಲಿಗಳಲ್ಲಿ ಗಿರಗಿರಗಿರ ತಿರುಗಲಾರಂಭಿಸಿದೆ.

ಅನೇಕ ಪತ್ರಕರ್ತರು ತಮ್ಮದೇ ಆದ ವೆಬ್ ಸೈಟು ಇಟ್ಟುಕೊಂಡಿದ್ದಾರೆ. ಆದರೆ, ಭಟ್ಟರ ವೆಬ್ ಸೈಟು ತೆರೆದಿರುವುದು ಸುದ್ದಿ ಆಗುತ್ತಿರುವುದು ಏಕೆ ಎಂದು ತಾವು ಕೇಳುವ ಮುನ್ನ, ವೆಬ್ ಸೈಟಿನಲ್ಲಿ ಭಟ್ಟರು ಅವರ ಬಗ್ಗೆ ಅವರೇ ಬರೆದುಕೊಂಡಿರುವ ಅವರ ಪರಿಚಯವನ್ನು ಮೊದಲು ಓದಿಕೊಳ್ಳಿ. ಅದು ಹೀಗಿದೆ.
ವಿಶ್ವೇಶ್ವರ ಭಟ್ ಉತ್ತರ ಕನ್ನಡದ ಕುಮುಟಾದ ಮೂರೂರಿನವರು. ಓದಿದ್ದು ಎಂ.ಎಸ್.ಸಿ ಹಾಗು ಎಮ್.ಎ. ನಾಲ್ಕು ಚಿನ್ನದ ಪದಕದ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. 48 ಪುಸ್ತಕಗಳ ಲೇಖಕ.

ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದ ಮಾಜಿ ಪ್ರಧಾನ ಸಂಪಾದಕ. ಸೃಜನಶೀಲ ಬರಹಗಾರ, ಅಂಕಣಕಾರ. ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಇಪ್ಪತ್ತೈದಕ್ಕೂ ಅಧಿಕ ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜೊತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ.
ಈ ಮಾರ್ಗವಾಗಿ ನೀವು ವಿಶ್ವೇಶ್ವರಭಟ್ಟರ ವಿಭಟ್ ಡಾಟ್ ಇನ್ ವೆಬ್ ಸೈಟಿಗೆ ಪ್ರವಾಸ ಕೈಗೊಳ್ಳಬಹುದು.
 
(ಕ್ಷಮಿಸಿ) ಏಕೆಂದರೆ ನಾನು ನನ್ನ ಬ್ಲಾಗನ್ನು ಮುಂದುವರೆಸಬಾರದೆಂಬ ಷರತ್ತನ್ನು ಮೀರಿ. ನನ್ನ ನೆಚ್ಚಿನ  ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದ ಮಾಜಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ರವರು ವೆಬ್ ಸೈಟನ್ನು ಆರಂಭಿಸಿರುವುದು ತಿಳಿದು ತುಂಬಾ ಖುಷಿಯಾಯಿತು ಹಾಗೂ ಕಳೆದುಹೋದ ವಸ್ತುವೊಂದು ನಿಧಿ ರೂಪದಂತೆ ಸಿಕ್ಕ ಸಂತೋಷವನ್ನು ನನ್ನ ಬ್ಗಾಗಿನ ಓದುಗರಾದ  ತಮ್ಮೆಲ್ಲರಿಗೂ ತಿಳಿಸಲೇಬೇಕೆಂದು ನನ್ನ ಬ್ಲಾಗಿನಲ್ಲಿ ಪೋಸ್ಷ್ ಮಾಡಿದ್ದೇನೆ. ದಯವಿಟ್ಟು ಭೇಟಿ ಕೊಡಿ.