ಭಾನುವಾರ, ಡಿಸೆಂಬರ್ 25, 2011

ಎರಡನೆ ವರ್ಷದ ಸಂಭ್ರಮದಲ್ಲಿ


ಈ ಡಿಸೆಂಬರ್ 16-12-2011ರ [ಎರಡು ವರ್ಷ] ದ ಹೊತ್ತಿಗೆ ಸರಿಯಾಗಿ ನನ್ನ ಕರ್ನಾಟಕಪರಂಪರೆ  ಬ್ಲಾಗ್ ವಿಶ್ವದಾದ್ಯಂತ "23000+" ಬಾರಿ ತೆರೆದುಕೊಂಡಿದೆ.
ಕರ್ನಾಟಕಪರಂಪರೆ ಬ್ಲಾಗ್‍ನಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ. ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಗೆಳೆಯರು ಕೈಬೆರಳುಗಳ ತುದಿಗಳು ಕೀಬೋರ್ಡ್ ಒತ್ತುತ್ತಿದ್ದಂತೆ ಸಿಕ್ಕಿಬಿಡುತ್ತಾರೆ. ಜೊತೆಗೆ .................
ಲೈಫು ಇಷ್ಟೇನೆ.. ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಕೆಲಸ ಕಾರ್ಯಗಳು ಜೊತೆಗೆ ಸಮಾಜ ಸೇವೆ, ರಾಜಕೀಯ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಆಸಕ್ತಿ,  ಆರ್ಟ್ ಎಗ್ಸಿಬಿಶನ್, ತಿಳದಿದ್ದು, ತಿಳಿಯದಿದ್ದು, ಗೊತ್ತಿಲ್ಲದೆ ಇರುವಂತದ್ದು ಇಂತಹದರ ಜೊತೆ ಸಿಕ್ಕಾ ಪಟ್ಟೆ ಮಾತು, ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ  ಅಂದ್ರೆ ಹರಟೆ ಹೊಡೆಯಲು ಸಾಕಷ್ಟು ಗೆಳೆಯರು.........
ಏನೆಲ್ಲಾ…
ಹುಟ್ಟಿದ್ದು ಗಡಿನಾಡ ಹಳ್ಳಿಯಲ್ಲಿ, ಓದಿದ್ದು ಅಲ್ಪ ಆದರೆ ತೀಳದುಕೊಂಡಿದ್ದು ಸಿಕ್ಕಾಪಟ್ಟೆ ಯಾವುದೋ ಕೆಲಸ ಮಾಡಲು ಹೋಗಿ ಮತ್ಯಾವುದೋ ಕೆಲಸ ಮಾಡಿ ವೃತ್ತಿ ಜೀವನವೆಂಬ ಯಾಂತ್ರಿಕ ಜೀವನದಲ್ಲಿ ಮುಳುಗಿ, ತೇಲಿ ಕಡೆಯದೇನೋ ಎಂಬಂತೆ ಮಲ್ಟಿಮೀಡಿಯಾ ಎಂಬ ನಾಮದೇಯ, ಗೊತ್ತು ಗುರಿ ಇಲ್ಲದ ವೃತ್ತಿ ಜೀವನ ಆರಂಭ. ಜೀವನದಲ್ಲಿ ಎಸ್ಟೊಂದು ಕೆಲಸಗಳು ಅಬ್ಬಾ ನೆನೆದರೆ ಅದ್ಬುತವೇನೂ ಎಂಬ ಜೀವನ ಹೇಳುತ್ತಿದ್ದರೆ ಮುಗಿಯದ ಕಥೆ..............................
ಹಾಗಾಗಿ ‘ಕರ್ನಾಟಕಪರಂಪರೆ  ಬ್ಲಾಗ್’ ಏನೇನಾಗುತ್ತೆ? ಇಲ್ಲಿ ಏನು ಸಿಗುತ್ತೆ  ಅನ್ನೋ ಲಿಸ್ಟ್ ಇಲ್ಲಿ ಸಿಗುತ್ತೆ, ಬೇರೆ ವೃತ್ತಿಗಳ ವಿಚಾರಗಳ ಬಗ್ಗೆ ಮಾಹಿತಿ ಹಾಗೂ ಆಹ್ವಾನಗಳೂ ಇಲ್ಲಿರುತ್ತೆ. ಅಷ್ಟೇ ಅಲ್ಲ, ಬೇಕಾದ, ಬೇಡದ ವಿಚಾರಗೂ ಇಲ್ಲಿರುತ್ತೆ.
ಹಾಗಾಗಿ ,
ದಯವಿಟ್ಟು ತಪ್ಪದೇ ಬನ್ನಿ. 

ವೆಬ್ ಲೋಕದಲ್ಲಿ ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಬ್ಲಾಗ್ ಗೆಳೆಯರು.
 ಅದಕ್ಕೆ ನನ್ನ ದೊಡ್ಡ ನಮನಗಳು.

ಶನಿವಾರ, ಮೇ 28, 2011

ಕರ್ನಾಟಕದಲ್ಲಿ ಎಷ್ಟು ಜಿಲ್ಲೆ ಇದೆ

ಇದೇನೂ ದೊಡ್ಡ ಸಂಗತಿ, ನಮ್ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತ ನಮಗೆ ಗೊತ್ತಿಲ್ವ ಅಂತ ಗುರಾಯಿಸಬೇಡಿ. ನಿಮ್ಮ ಪಕ್ಕದಲ್ಲಿರುವರನ್ನು ಒಂದಿಬ್ಬರನ್ನು ಕೇಳಿ ನೋಡಿ. ಖಂಡಿತಾ ಒಬ್ಬರೊಬ್ಬರದ್ದು ಒಂದೊಂದು ಉತ್ತರ. ಕೆಲವರು ಇಪ್ಪತ್ತಾರರಿಂದ ಸುರು ಮಾಡುತ್ತಾರೆ.

ಹೆಚ್ಚಿನವರಿಗೆ ನಮ್ಮ ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ ಎಂದು ಗೊತ್ತಿಲ್ಲ. ಯಾವೆಲ್ಲ ಜಿಲ್ಲೆಗಳಿವೆ ಅಂತ ಕೇಳಿದರೆ ಗೋವಿಂದ. ತನ್ನ ಊರಿನ ಆಸುಪಾಸು ಮತ್ತು ಕೆಲಸ ಮಾಡುವ ಪ್ರದೇಶದ ಆಸುಪಾಸಿನ ಜಿಲ್ಲೆಗಳನ್ನು ಹೇಳುತ್ತಾರೆ. ಹೀಗೆ ಹೇಳುತ್ತ ಹೋದಂತೆ ಸಂಖ್ಯೆ 20 ದಾಟಿಸಲು ಕಷ್ಟಪಡುತ್ತಾರೆ. ಕೆಲವು ಹೆಸರುಗಳು ಗಂಟಲಿನಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತವೆ.

ಗೊತ್ತಿಲ್ಲದವರು, ಅರ್ಧ ಗೊತ್ತಿರುವರು ದಯವಿಟ್ಟು ಮುಂದೆ ಓದಿಕೊಳ್ಳಿ. ಯಾರಾದ್ರೂ, ಯಾವತ್ತಾದ್ರೂ ಕೇಳಿದ್ರೆ ಪಟಪಟನೆ ಹೇಳುತ್ತ ಹೋಗಿರಿ. ಕರ್ನಾಟಕದ ಆಡಳಿತ ಸುಲಭಗೊಳಿಸಲು ಒಟ್ಟು ನಾಲ್ಕು ವಿಭಾಗಗಳಾಗಿ 30 ಜಿಲ್ಲೆಗಳನ್ನು ವಿಂಗಡಿಸಲಾಗಿದೆ.

ಬೆಂಗಳೂರು ವಿಭಾಗ: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ.

ಬೆಳಗಾವಿ ವಿಭಾಗ: ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ

ಗುಲ್ಬರ್ಗ ವಿಭಾಗ: ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ

ಮೈಸೂರು ವಿಭಾಗ: ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು

ಛೀ ನಮ್ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ, ಯಾವೆಲ್ಲ ಜಿಲ್ಲೆಗಳಿವೆ ಅಂತ ಕನ್ನಡಿಗಾರದ ನಮಗೆ ಗೊತ್ತಿಲ್ಲದಿದ್ದರೆ ನಾಚಿಕೆಗೇಡು ಅಲ್ವೆ. ಯಾವೆಲ್ಲ ಜಿಲ್ಲೆಗಳಿವೆ ಅಂತ ಮರೆತು ಹೋದ್ರೆ ಮತ್ತೆ ಓದಿಕೊಳ್ಳಿ. ಜೈ ಕರ್ನಾಟಕ.
krupe:http://thatskannada.oneindia.in

ಭಾನುವಾರ, ಏಪ್ರಿಲ್ 17, 2011

ನಮ್ಮ ಕರ್ನಾಟಕ

ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು."ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.ಕರ್ನಾಟಕದ ಪಶ್ಚಿಮಕ್ಕೆ ಅರಬ್ಬೀ ಸಮುದ್ರ, ವಾಯವ್ಯಕ್ಕೆ ಗೋವ ರಾಜ್ಯ, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರ ಪ್ರದೇಶ ಆಗ್ನೇಯಕ್ಕೆ ತಮಿಳುನಾಡು ಮತ್ತು ನೈರುತ್ಯಕ್ಕೆ ಕೇರಳ ರಾಜ್ಯಗಳಿವೆ.ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.ಪಶ್ಚಿಮ ಘಟ್ಟಗಳು - ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.ಬಯಲು ಸೀಮೆ - ದಖನ್ ಪ್ರಸ್ಥಭೂಮಿ, ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು,ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.ಭಾರತದ ಚಿನ್ನದ ಉತ್ಪಾದನೆಯ ಶೇ. ೯೦ ಕ್ಕೂ ಹೆಚ್ಚು ಕರ್ನಾಟಕದಲ್ಲಿ ನಡೆಯುತ್ತದೆ.
ಕರ್ನಾಟಕದ ಜನಸಂಖ್ಯೆ ಈ ಒಂದು ದಶಕದಲ್ಲಿ (2001ರ ಜನಗಣತಿಯಿಂದೀಚೆಗೆ) 83 ಲಕ್ಷ ಹೆಚ್ಚಳ ಕಂಡು, 6.11 ಕೋಟಿಗೆ ತಲುಪಿದೆ. ಇದರೊಂದಿಗೆ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯಗಳಲ್ಲಿ ಕರ್ನಾಟಕವು 9ನೇ ಸ್ಥಾನ ಪಡೆದಿದೆ.

2001ರ ಜನಗಣತಿಯಲ್ಲಿ ರಾಜ್ಯದ ಜನ ಸಂಖ್ಯೆಯು 5.28 ಲಕ್ಷ ಇತ್ತು. ಈ ಹತ್ತು ದಶಗಳಲ್ಲಿ ಜನಸಂಖ್ಯೆಯ ವೃದ್ಧಿಯ ದರವು ಕೂಡ ಶೇ.2ರಷ್ಟು ಕುಸಿತ ಕಂಡಿದೆಯಾದರೂ, ಲಿಂಗಾನುಪಾತದ ಪ್ರಮಾಣ ಏರಿಕೆಯಾಗಿದೆ. ಅಂದರೆ ಸಾವಿರ ಪುರುಷರಿಗೆ ಅನುಗುಣವಾಗಿ 968 ಮಹಿಳೆಯರ ಸಂಖ್ಯೆಯಿದೆ.

ಸಾಕ್ಷರತಾ ಪ್ರಮಾಣವು ಕೂಡ ಶೇ.66ರಿಂದ ಶೇ.75ಕ್ಕೆ ಏರಿಕೆಯಾಗಿದ್ದು ವಿಶೇಷ. ಅವರಲ್ಲಿಯೂ ಶೇ. 82ರಷ್ಟು ಪುರುಷರು ಸಾಕ್ಷರರಾಗಿದ್ದರೆ, ಶೇ.68ರಷ್ಟು ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಇಲ್ಲೂ ಲಿಂಗ ತಾರತಮ್ಯ ಇನ್ನೂ ಎದ್ದು ಕಾಣುತ್ತಿದೆ.

ಬುಧವಾರ, ಜನವರಿ 5, 2011

(ಕ್ಷಮಿಸಿ) ವಿಶ್ವೇಶ್ವರ ಭಟ್ ಬ್ಲಾಗಿಗೆ ದಾರಿ

ಕನ್ನಡ ಪತ್ರಕರ್ತ, ಲೇಖಕ ಮತ್ತು ಲೋಕ ಪ್ರಸಿದ್ಧ ವಿಜಯ ಕರ್ನಾಟಕದ ವಿಶ್ವ ಪ್ರಸಿದ್ಧ ವಿಶ್ವೇಶ್ವರ ಭಟ್ ಅವರು ಅಂತರಜಾಲ ಕಕ್ಷೆಗೆ ತಮ್ಮನ್ನು ತಾವು ಉಡಾಯಿಸಿಕೊಂಡಿದ್ದಾರೆ. ಅವರದೇ ನಾಮಾಂಕಿತ, "ವಿಶ್ವೇಶ್ವರ ಭಟ್" ವೆಬ್ ಸೈಟು ಆರಂಭವಾಗಿದ್ದು ಕಳೆದ ಮೂರು ದಿನಗಳಿಂದ ಸೈಟು ಸೈಬರ್ ಗಲ್ಲಿಗಳಲ್ಲಿ ಗಿರಗಿರಗಿರ ತಿರುಗಲಾರಂಭಿಸಿದೆ.

ಅನೇಕ ಪತ್ರಕರ್ತರು ತಮ್ಮದೇ ಆದ ವೆಬ್ ಸೈಟು ಇಟ್ಟುಕೊಂಡಿದ್ದಾರೆ. ಆದರೆ, ಭಟ್ಟರ ವೆಬ್ ಸೈಟು ತೆರೆದಿರುವುದು ಸುದ್ದಿ ಆಗುತ್ತಿರುವುದು ಏಕೆ ಎಂದು ತಾವು ಕೇಳುವ ಮುನ್ನ, ವೆಬ್ ಸೈಟಿನಲ್ಲಿ ಭಟ್ಟರು ಅವರ ಬಗ್ಗೆ ಅವರೇ ಬರೆದುಕೊಂಡಿರುವ ಅವರ ಪರಿಚಯವನ್ನು ಮೊದಲು ಓದಿಕೊಳ್ಳಿ. ಅದು ಹೀಗಿದೆ.
ವಿಶ್ವೇಶ್ವರ ಭಟ್ ಉತ್ತರ ಕನ್ನಡದ ಕುಮುಟಾದ ಮೂರೂರಿನವರು. ಓದಿದ್ದು ಎಂ.ಎಸ್.ಸಿ ಹಾಗು ಎಮ್.ಎ. ನಾಲ್ಕು ಚಿನ್ನದ ಪದಕದ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. 48 ಪುಸ್ತಕಗಳ ಲೇಖಕ.

ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದ ಮಾಜಿ ಪ್ರಧಾನ ಸಂಪಾದಕ. ಸೃಜನಶೀಲ ಬರಹಗಾರ, ಅಂಕಣಕಾರ. ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಇಪ್ಪತ್ತೈದಕ್ಕೂ ಅಧಿಕ ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜೊತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ.
ಈ ಮಾರ್ಗವಾಗಿ ನೀವು ವಿಶ್ವೇಶ್ವರಭಟ್ಟರ ವಿಭಟ್ ಡಾಟ್ ಇನ್ ವೆಬ್ ಸೈಟಿಗೆ ಪ್ರವಾಸ ಕೈಗೊಳ್ಳಬಹುದು.
 
(ಕ್ಷಮಿಸಿ) ಏಕೆಂದರೆ ನಾನು ನನ್ನ ಬ್ಲಾಗನ್ನು ಮುಂದುವರೆಸಬಾರದೆಂಬ ಷರತ್ತನ್ನು ಮೀರಿ. ನನ್ನ ನೆಚ್ಚಿನ  ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದ ಮಾಜಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ರವರು ವೆಬ್ ಸೈಟನ್ನು ಆರಂಭಿಸಿರುವುದು ತಿಳಿದು ತುಂಬಾ ಖುಷಿಯಾಯಿತು ಹಾಗೂ ಕಳೆದುಹೋದ ವಸ್ತುವೊಂದು ನಿಧಿ ರೂಪದಂತೆ ಸಿಕ್ಕ ಸಂತೋಷವನ್ನು ನನ್ನ ಬ್ಗಾಗಿನ ಓದುಗರಾದ  ತಮ್ಮೆಲ್ಲರಿಗೂ ತಿಳಿಸಲೇಬೇಕೆಂದು ನನ್ನ ಬ್ಲಾಗಿನಲ್ಲಿ ಪೋಸ್ಷ್ ಮಾಡಿದ್ದೇನೆ. ದಯವಿಟ್ಟು ಭೇಟಿ ಕೊಡಿ.