ಶುಕ್ರವಾರ, ಅಕ್ಟೋಬರ್ 8, 2010

ಚೆಕ್ ಬರೆಯುವಾಗ ಇರಲಿ ಎಚ್ಚರ

ಇನ್ನು ಮುಂದೆ ಹಿಂದಿನಂತೆ ಚೆಕ್ ಬರೆಯುವಾಗ ಸ್ಪೆಲ್ಲಿಂಗ್ ಅಥವಾ ಡೇಟ್ ತಪ್ಪಾದರೆ ಅದನ್ನೇ ತಿದ್ದಿ, ಅದರ ಮೇಲೆಯೇ ಸಣ್ಣದೊಂದು ಸಹಿ ಮಾಡಿ ಚೆಕ್ ಪ್ರೆಸೆಂಟ್ ಮಾಡುವ ಹಾಗಿಲ್ಲ. ತಿದ್ದಿದ ಚೆಕ್ಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿಬಿಟ್ಟಿದೆ. ಅದಕ್ಕೆಂದೇ ಪ್ರತ್ಯೇಕ ನಿಯಮವನ್ನೂ ಜಾರಿಗೊಳಿಸುತ್ತಿದೆ. ಚೆಕ್ ತಿದ್ದುವಿಕೆಗಳು ವಂಚನೆಗೆ ಕಾರಣವಾಗುತ್ತಿವೆ ಎಂದು ಭಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮ ಜಾರಿಗೆ ತರುತ್ತಿದೆ. ಚೆಕ್ಗಳಿಗೆ ನಿರ್ದಿಷ್ಟ ಸ್ಟ್ಯಾಂಡರ್ಡ್ ಹಾಗೂ ಸೆಕ್ಯೂರಿಟಿ ಇರಬೇಕೆನ್ನುವ ಕಾರಣವೂ ಹೊಸ ನಿಯಮ ರೂಪಿಸಲು ಕಾರಣವಾಗಿದೆ.
ಹೊಸ ನಿಯಮ ಇನ್ನೊಂದು ತಿಂಗಳಲ್ಲಿ  ಜಾರಿಗೆ ಬರಲಿದೆ. ಅನುಷ್ಠಾನಕ್ಕೆ ಬರಲಿರುವ ನಿಯಮಗಳನ್ನು ಸಿ.ಟಿ.ಎಸ್. 2010 ಸ್ಟ್ಯಾಂಡರ್ಡ್ ಎಂದು ಕರೆಯಲಾಗಿದೆ.  ಸಿಟಿಎಸ್ ಎಂದರೆ ಚೆಕ್ ಟ್ರಂಕೇಶನ್ ಸಿಸ್ಟಮ್. ಹಾಗೂ ತಿದ್ದಿದ ಚೆಕ್ ಅನ್ನೇ ಕೊಟ್ಟರೆ ಅದಕ್ಕೆ ದಂಡವನ್ನೂ ವಿಧಿಸಲಾಗುತ್ತದೆ ಎಂಬುದೂ ನಿಮ್ಮ ಗಮನದಲ್ಲಿರಲಿ. ತಿದ್ದಿದ ಚೆಕ್ಗಳಿಗೆ ದಂಡ ವಿಧಿಸುವ ಅಧಿಕಾರವನ್ನು ಬ್ಯಾಂಕ್ಗಳಿಗೆ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು 100 ರೂಪಾಯಿನಿಂದ 250 ರೂ.ಗಳ ವರೆಗೆ ದಂಡ ವಿಧಿಸಬಹುದಾದರೆ ಖಾಸಗಿ ವಲಯದ ಬ್ಯಾಂಕ್ಗಳು 550 ರೂಪಾಯಿಗಳ ವರೆಗೆ ದಂಡ ವಿಧಿಸಬಹುದು.
ಸಿಟಿಎಸ್ 2010ರ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಆರ್ಬಿಐ ಬ್ಯಾಂಕ್ಗಳಿಗೆ ನೀಡಿದೆ. ಎಲ್ಲ ಬ್ಯಾಂಕ್ಗಳು ಗ್ರಾಹಕರಿಗೆ ಈ ಬಗ್ಗೆ ಇನ್ನೂ ಮಾಹಿತಿ ನೀಡಬೇಕಿದೆ.

ಸಿಟಿಎಸ್ ಏನು ಹೇಳುತ್ತದೆ?

=    ಚೆಕ್ ಪ್ರಿಂಟ್ ಮಾಡುವ ಪೇಪರ್ಗಳ ಗುಣಮಟ್ಟಕ್ಕೆ ಒತ್ತು
=    ಚೆಕ್ ಲೀಫ್ನ ಮೇಲೆ ಸಿಟಿಎಸ್ ಇಂಡಿಯಾ ಎನ್ನುವ ವಾಟರ್ ಮಾಕರ್್ ಕಡ್ಡಾಯ
=    ಈ ವಾಟರ್ ಮಾಕರ್್ ಎಲ್ಲ ರೀತಿಯ ಬೆಳಕಿಗೆ ಕಾಣುವಂತಿರಬೇಕು.
=    ಚೆಕ್ ಬರೆಯುವಾಗ ದಿನಾಂಕ ತಪ್ಪಿದರೆ ಅದನ್ನು ತಿದ್ದಲು ಮಾತ್ರ ಅವಕಾಶ
=    ಆದರೆ ಪೇಯೀಸ್ ನೇಮ್, ಲೀಗಲ್ ಅಮೌಂಟ್ (ಅಕ್ಷರದಲ್ಲಿ ಮೊತ್ತ) ಹಾಗೂ ಕರ್ಟಸಿ ಅಮೌಂಟ್ 
       (ಅಂಕೆಗಳಲ್ಲಿ ಮೊತ್ತ)     ತಿದ್ದುವಂತಿಲ್ಲ.
=    ಬರೆಯುವಾಗ ಏನಾದರೂ ತಪ್ಪಿತೆಂದರೆ ಹೊಸ ಚೆಕ್ ಬರೆಯಬೇಕು.

ಇದು ಮೂವತ್ತೆರಡರ ಯುವಕನ ಮಾತು

ಗೂಗಲ್ ಎಂಬ ಅಂತರ್ಜಾಲ ಅಕ್ಷರಗಳನ್ನು ಗೊಂಬೆಯಂತೆ, ಕುಂಬಳಕಾಯಂತೆ, ಧ್ವಜದಂತೆ ಬರೆದು ಎಲ್ಲರ ಮನ ಗೆಲ್ಲುವಾತ ಮೂವತ್ತೆರಡು ವರ್ಷದ ಯುವಕ ಅಂದರೆ ನಂಬುತ್ತೀರಾ ? ಇವನ ಕಲಾಕೃತಿಯನ್ನು ಯಾವ ಆಟರ್್ ಗ್ಯಾಲರಿಯಲ್ಲಾಗಲೀ, ಮ್ಯೂಸಿಯಂನಲ್ಲಾಗಲೀ ತೂಗು ಹಾಕಿಲ್ಲ. ಆದರೂ ಈತ ಬರೆದ ಚಿತ್ರವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನ ವೀಕ್ಷಿಸಿ ಖುಷಿ ಪಡುತ್ತಾರೆ !
ಗೂಗಲ್ ಎಂದರೆ ಏನೆಂದು ಗೊತ್ತಿಲ್ಲದವರನ್ನು ಅನಕ್ಷರಸ್ಥ ಅಂತ ಕರೆಯುವ ಕಾಲ ಬಂದಿದೆ. ಗೂಗಲ್ ಇಲ್ಲದ ಅಂತರ್ಜಾಲ ಉಪ್ಪಿಲ್ಲದ ಸಮುದ್ರ ಅಂತಲೇ ಹೇಳಬೇಕು. ಈ `ಹೈಫೈ’ ಯುಗದಲ್ಲಿ ಬದುಕುತ್ತಿರುವ ನಾವು ಅಂತರ್ಜಾಲ ತಾಣಕ್ಕೆ ಹೋದರೆ, ಕೂತರೆ ಒಂದಲ್ಲ ಒಂದು ಸಲ ಗೂಗಲ್ ಪುಟವನ್ನು ಎಡತಾಕಲೇ ಬೇಕು.
ಗೂಗಲ್ ಪುಟ ತೆರೆದೊಡನೆ ನಮಗೆ ಬಣ್ಣ ಬಣ್ಣಗಳಲ್ಲಿ ಬರೆದ ಗೂಗಲ್ ಬರಹ ಕಾಣುತ್ತದೆ. ಕೆಲವೊಮ್ಮೆ ಈ ಆರು ಅಕ್ಷರಗಳು ಕೇವಲ ಅಕ್ಷರಗಳಾಗಿರದೆ ಯಾರದೋ ಮುಖದ ಕಣ್ಣುಗಳೋ, ಕಪ್ಪೆಯ ಕಾಲುಗಳೋ, ಡಿಎನ್ಎ ಸರಪಳಿಯೋ, ಲೈಟುಕಂಬವೋ ಆಗುವುದುಂಟು ! ಇತ್ತೀಚೆಗೆ ಗೂಗಲ್ ಪುಟ ಪಕ್ಮಾನ್ ಎಂಬ ಅತ್ಯಂತ ಜನಪ್ರಿಯ ಆಟದ ಅಂಗಳವಾಗಿ ಮಾರ್ಪಟ್ಟಿತ್ತು !
ಹೀಗೆ, ಇರುವ ಅಕ್ಷರಗಳನ್ನೇ ತಿರುಗಿಸಿ ಹಿಗ್ಗಿಸಿ ಹಿಂಜಿ ಹೊಸಹೊಸ ರೂಪ ಕೊಡುವ ಕಲೆಗೆ `ಡೂಡಲ್’ ಎನ್ನುತ್ತಾರೆ. ಗೂಗಲ್ ತೆರೆದಾಗ ಎಲ್ಲರ ಕಣ್ಣು ಸೆಳೆಯುವ ಈ ಡೂಡಲ್ಗಳು ಎಷ್ಟು ಜನಪ್ರಿಯವಾಗಿವೆಯೆಂದರೆ, ಅದರ ಮೇಲೆ ಬೇರೆ ಬೇರೆ ವೆಬ್ಪುಟಗಳಲ್ಲಿ ಪೇಜುಗಟ್ಟಲೆ ವಾದ ಹೂಡುವ, ಮೆಚ್ಚುಗೆ ಸೂಚಿಸುವ, ಕತೆ- ಪುರಾಣ ಬರೆಯುವ ಜಾಲಿಗರಿದ್ದಾರೆ. ಡೂಡಲ್ಗೇ ನೂರಾರು ಫ್ಯಾನ್ಕ್ಲಬ್ಗಳು ಹುಟ್ಟಿಕೊಂಡಿವೆ. ವಾರಕ್ಕೆ ಕನಿಷ್ಠ ಎರಡಾದರೂ ಇಂತಹ ಚಿತ್ರ `ವಿಚಿತ್ರ’ ಡೂಡಲ್ಗಳನ್ನು ಬರೆದು ಜಗತ್ತಿನ ಜಾಲಿಗರ ಕಣ್ಣು ತಂಪು ಮಾಡುವವನು ಡೆನ್ನಿಸ್ ಹ್ವಾಂಗ್ ಎಂಬ ಮೂವತ್ತೆರಡರ ಹರೆಯದ ಕೊರಿಯನ್ ಕಲಾವಿದ.
ಡೆನ್ನಿಸ್ ಹ್ವಾಂಗ್ ಗೂಗಲ್ಗೆ ಬಣ್ಣ ಮೆತ್ತಲು ಶುರು ಮಾಡಿದ್ದು ಅನಿರೀಕ್ಷಿತವಾಗಿ. ಗೂಗಲ್ ಕಂಪೆನಿಯಲ್ಲಿ ವೆಬ್ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ಹ್ವಾಂಗ್ ಬಳಿ ಗೂಗಲ್ ಮಾಲೀಕರಾದ ಲ್ಯಾರಿ ಪೇಜ್ ಮತ್ತು ಸೆಗರ್ಿ ಬ್ರಿನ್ ಬಂದು `ಹೇಗೂ ಕಾಲೇಜಲ್ಲಿ ಕಲೆಯನ್ನು ಕಲಿತವನು ನೀನು, ಯಾಕೆ ನಮ್ಮ ಕಂಪೆನಿಯ ಹೆಸರಿನ ಜೊತೆ ತುಸು ಕಸರತ್ತು ಮಾಡಬಾರದು?’ ಎಂದು ಕೇಳಿದರಂತೆ. ಮಾಲೀಕರ ಈ ಮಾತೇ ಅವನ ಪ್ರಯೋಗಗಳಿಗೆ ಒಂದು ಮುಖ್ಯ ಕಾರಣವಾಯಿತು. 2000ರ ಜುಲೈ 14ರಂದು ಹ್ವಾಂಗ್, ಬ್ಯಾಸ್ತಿಲ್ ದಿನಕ್ಕಾಗಿ ಒಂದು ವಿಶೇಷ ಡೂಡಲ್ ಬರೆದ. ಅದುವರೆಗೆ ಕೇವಲ ಹೆಸರನ್ನಷ್ಟೇ ನೋಡಿ ಒಗ್ಗಿಹೋಗಿದ್ದ ಜಾಲಿಗರಿಗೆ ಹ್ವಾಂಗ್ ಬರೆದ ಡೂಡಲ್ ಖುಷಿ ಕೊಟ್ಟಿತು. ಹೊಸ ಹವೆ ಕಣ್ಣುಗಳಿಗೆ ಮುತ್ತಿಕ್ಕಿ ಹೋದಂತಾಯಿತು. ಜಗತ್ತಿನಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂತು. ಅಂದಿನಿಂದ ಇಂದಿನವರೆಗೆ ಹ್ವಾಂಗ್, ತನ್ನ ಕಂಪೆನಿಯ ಪುಟ ಕಟ್ಟುವ ಕೆಲಸದಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದಾನೆ. ವರ್ಷಕ್ಕೆ ಕನಿಷ್ಠ ಐವತ್ತು ಡೂಡಲ್ ಬರೆದು ಜಾಲಿಗರ ಮನಸ್ಸಿಗೆ ಕಚಗುಳಿಯಿಡುತ್ತಾನೆ.
ಹ್ವಾಂಗ್ ಮೂಲತಃ ಕೊರಿಯದವನು. ಅಪ್ಪ ಫುಲ್ಬ್ರೈಟ್ ಫೆಲೋಶಿಪ್ ಪಡೆದು ಅಧ್ಯಯನಕ್ಕೆಂದು ಅಮೆರಿಕೆಗೆ ಬಂದಾಗ, ಜತೆಯಲ್ಲೇ ತಾನೂ ಬಂದವನು. ಆಗ ಅವನಿಗೆ ಹದಿನಾಲ್ಕು ವರ್ಷ. ಕೊರಿಯನ್ ಬಿಟ್ಟರೆ ಬೇರಾವ ಭಾಷೆಯೂ ಗೊತ್ತಿರಲಿಲ್ಲ. ಸುಮಾರು ಆರೇಳು ತಿಂಗಳು ಶಾಲೆಯಲ್ಲಿ ಓರಗೆಯವರು ಮತ್ತು ಅಧ್ಯಾಪಕರ ಬಾಯಿ ನೋಡುತ್ತ ಕೂರುವುದೇ ಅವನ ಕೆಲಸವಾಗಿತ್ತು !
ಮುಂದಿನ ದಿನಗಳಲ್ಲಿ ಕಷ್ಟಪಟ್ಟು ಇಂಗ್ಲಿಷ್ ಕಲಿತ. ಅಮೆರಿಕದ ಶಾಲೆಯಲ್ಲಿ ಕಲಿತಾದ ಮೇಲೆ ಸ್ಟಾನ್ಫೋಡರ್್ ವಿವಿಯಿಂದ ಕಲೆ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ  ಪದವಿ ಪಡೆದ. ಗೂಗಲ್ ಕಂಪೆನಿಯಲ್ಲಿ ವೆಬ್ಮಾಸ್ಟರ್ ಆಗಿ ಸೇರಿದ. ತನ್ನ  ಕೌಶಲ ಮತ್ತು ಜಾಣ್ಮೆಯಿಂದ, ಸೇರಿದ ಕೆಲವೇ ದಿನಗಳಲ್ಲಿ ಮುಂಬಡ್ತಿ ಪಡೆಯುತ್ತಾ ಹೋಗಿ, ಗೂಗಲ್ ತಾಂತ್ರಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಮುಖ್ಯಸ್ಥನ ಹುದ್ದೆಗೇರಿದ. ಬಿಡುವಿನ ಸಮಯದಲ್ಲಿ ಡೂಡಲ್ ಗೆರೆಗಳನ್ನೆಯುವ ಹ್ವಾಂಗ್ನಿಗೆ ಉಳಿದಂತೆ ತಲೆ ತುಂಬ, ಕೈತುಂಬ ಕೆಲಸ ಇದ್ದೇ ಇದೆ.
ಅವನ ಪ್ರಕಾರ ಎಯನ್ನು ಬೇಕಾದಂತೆ ಬಗ್ಗಿಸಲು ತುಂಬ ಕಷ್ಟ. ಹೆಸರಿನಲ್ಲಿ ಎರಡು ಕಡೆ ಬರುವ ಈ ಅಕ್ಷರ `ಕಲಾವಿದನಿಗೆ ತಲೆನೋವು ಮತ್ತು ಸವಾಲು’ ಎನ್ನುತ್ತಾನೆ ಆತ.
ಡೆನ್ನಿಸ್ ಹ್ವಾಂಗ್ ಜಗತ್ತಿನಾದ್ಯಂತ ಅತಿ ಹೆಚ್ಚು ಜನಪ್ರಿಯನಾದ, ಆದರೂ ಅಜ್ಞಾತವಾಗಿಯೇ ಉಳಿದಿರುವ ವಿಶಿಷ್ಟ ಕಲಾವಿದ. ದಿನವೊಂದಕ್ಕೆ ಕೋಟಿಗಟ್ಟಲೆ ಜನ ಡೂಡಲ್ಗಳತ್ತ ಕಣ್ಣು ಹಾಯಿಸಿದರೂ ಅದರ ಹಿಂದಿರುವ ಕೈಗಳ ಬಗ್ಗೆ ಚಿಂತಿಸುವವರು ವಿರಳ. ಸಂಕೋಚದ ಮುದ್ದೆಯಾಗಿರುವ ಹ್ವಾಂಗ್ಗೆ ಕೂಡ ಅನಾಮಿಕನಾಗಿಯೇ ಉಳಿಯುವುದು ಇಷ್ಟ. ವಿಚಿತ್ರವೆಂದರೆ, ಹ್ವಾಂಗ್ ಇಂತಹ ಡೂಡಲ್ಗಳಿಗೆ ಪಡೆಯುವ ಸಂಭಾವನೆ ಎಷ್ಟೆಂದು ಆತ ಮತ್ತು ಆತನ ಬಾಸ್ಗಳನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ !

ನೀಟಾಗಿರಲಿ ಬಯೋಡೇಟಾ

ಉದ್ಯೋಗ ಅರಸ ಹೊರಟವರ ಕೈಲಿ ಇರಬೇಕಾದ ಮೊದಲ ಆಯುಧವೇ ಸ್ವ-ವಿವರ ಅಥವಾ ಬಯೋಡೇಟಾ. ತನ್ನ ವೈಯಕ್ತಿಕ ಸಾಧನೆಗಳ ವಿವರ, ಶೈಕ್ಷಣಿಕ ಅರ್ಹತೆ, ಕೌಶಲ, ಅನುಭವ ಇತ್ಯಾದಿಗಳ ಕುರಿತು ಉದ್ಯೋಗಾಕಾಂಕ್ಷಿ ನೀಡುವ ಸಂಕ್ಷಿಪ್ತ ಪಟ್ಟಿ ಇದು. ತಮ್ಮಲ್ಲಿ ಖಾಲಿ ಇರುವ ಹುದ್ದೆ ತುಂಬುವಾಗ ಉದ್ಯೋಗದಾತರು ಮೊದಲು ನೋಡುವುದು ಇದೇ ಸ್ವ ವಿವರವನ್ನು. ಅದು ಯೋಗ್ಯ ಎನಿಸಿದರೆ ಮಾತ್ರ ಅಭ್ಯರ್ಥಿಗೆ ಭೇಟಿಯಾಗುವ ಅವಕಾಶ. ಹಾಗಾಗಿ ಸ್ವ-ವಿವರ ಎನ್ನುವುದು ಅಷ್ಟು ಪ್ರಭಾವಿಯಾಗಿರುವುದು ಅಗತ್ಯ. ಹಾಗಾಗಿ ಇದನ್ನು ತಯಾರಿಸುವಾಗ ಅಭ್ಯರ್ಥಿಯು ಬಹಳ ಕಾಳಜಿ ವಹಿಸಬೇಕು. ಹುದ್ದೆಯ ಅವಶ್ಯಕ್ಕೆ ಪೂರಕವಾಗಿ ತನ್ನಲ್ಲಿರುವ ಅರ್ಹತೆಗಳನ್ನು ಮಾತ್ರ ತಿಳಿಸಬೇಕು. ಅಂಥ ಪ್ರಭಾವಿ ಸ್ವ-ವಿವರ ತಯಾರಿಸುವುದೂ ಒಂದು ಕಲೆ.

ಚಿಕ್ಕ ಹಾಗೂ ಚೊಕ್ಕದಾಗಿರಲಿ

ಉನ್ನತ ಹುದ್ದೆಯಲ್ಲಿರುವವರಿಗೆ ಸಮಯ ಅತ್ಯಮೂಲ್ಯ. ಉದ್ದನೆ ಸ್ವ-ವಿವರ ನೋಡಲೂ ಅವರಿಗೆ ಸಮಯ ಇರಲಿಕ್ಕಿಲ್ಲ. ಹಾಗಾಗಿ ಅದು ಆದಷ್ಟು ಚಿಕ್ಕದು ಹಾಗೂ ಚೊಕ್ಕದಾಗಿರಬೇಕು. ಸೂಕ್ತ ಶಬ್ದ ಬಳಸಿ, ಎಲ್ಲಾ ಅವಶ್ಯ ಮಾಹಿತಿಗಳನ್ನೂ ನೀಡಬೇಕು. ಕೆಲವು ಉದ್ಯೋಗಗಳಿಗೆ ಅವುಗಳದ್ದೇ ಆದ ಅರ್ಹತೆ, ಕೌಶಲಗಳು ಮುಖ್ಯ. ಅಭ್ಯಥರ್ಿಗಳು ಅದನ್ನು ಗಮನಿಸಿ ಸ್ವ-ವಿವರ ತಯಾರಿಸಬೇಕು.

ವಿಷಯ ಏನಿರಬೇಕು?

ಸ್ವವಿವರವು ನಿಮ್ಮ ಸಾಧನೆಗಳ ಪಟ್ಟಿ ಮಾತ್ರ ಆಗಿರಬೇಕು. ಯಾವುದೇ ತಪ್ಪು ಮಾಹಿತಿ ಕೊಡಬಾರದು. ಮೊದಲ ಸಲ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ತಮ್ಮ ಸ್ವ-ವಿವರದಲ್ಲಿ ಹೆಸರು, ವಿದ್ಯಾರ್ಹತೆ, ಭಾಷೆಗಳ ಜ್ಞಾನ, ಪಠ್ಯೇತರ ಚಟುವಟಿಕೆ, ವಿಶೇಷ ಜ್ಞಾನ, ವಯಸ್ಸು, ಸಮಾಜ ಸೇವೆ, ಎನ್ಎಸ್ಎಸ್, ಎನ್ಸಿಸಿ, ಕ್ರೀಡೆ ಇತ್ಯಾದಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದರ ಬಗ್ಗೆ ಬರೆದಿರಬೇಕು. ಸಂಪರ್ಕಿಸಬೇಕಾದ ಕಾಯಂ ವಿಳಾಸ ಇರಬೇಕು. ಅನುಭವಿ ಕೆಲಸಗಾರರು ಎರಡನೆ ಹಂತದ ಉದ್ಯೋಗಕ್ಕೆ ಸೇರಬಯಸುವವರು ಮೇಲ್ಕಂಡ ವಿಷಯಗಳ ಜತೆ ತಮ್ಮ ಈಗಿನ ಹುದ್ದೆ ಹಾಗೂ ಸಂಸ್ಥೆಯ ಹೆಸರು ತಿಳಿಸಬೇಕು. ಆ ಉದ್ಯೋಗದಲ್ಲಿ ಮಾಡಿರುವ ಸಾಧನೆಗಳ ಬಗ್ಗೆಯೂ ತಿಳಿಸಬಹುದು.

ಶೈಕ್ಷಣಿಕ ಅರ್ಹತೆಗಳು

ಅತಿ ಹೆಚ್ಚಿನ ಅರ್ಹತೆಯನ್ನು ಮೊದಲು ಬರೆದು ನಂತರ ಇಳಿಕೆ ಕ್ರಮದಲ್ಲಿ ಉಳಿದವುಗಳನ್ನು ಬರೆಯಬೇಕು. ಉದಾ: ಎಂಎ ಮಾಡಿಕೊಂಡಿರುವುದನ್ನು ಮೊದಲು ಬರೆದು, ನಂತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಬಗ್ಗೆ ಬರೆಯಬೇಕು. ಯಾವ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ್ದೀರಿ ಎಂಬುದರ ಜತೆಗೆ ಆ ಸಂಸ್ಥೆಯ ಸಾಮಾಜಿಕ ಮನ್ನಣೆ ಬಗ್ಗೆಯೂ ಬರೆಯಬಹುದು. ಪಡೆದ ಅಂಕಗಳು, ಗ್ರೇಡ್, ಶೇಕಡಾವಾರು, ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡ ವಿಷಯದ ಬಗೆಗೂ ತಿಳಿಸಬೇಕು.

ಪಠ್ಯೇತರ ಚಟುವಟಿಕೆಗಳು

ನೀವು ಕೇವಲ ಶೈಕ್ಷಣಿಕ ಅರ್ಹತೆ ಹಾಗೂ ಅನುಭವ ಪಡೆದುಕೊಂಡಿದ್ದರೆ ಸಾಲದು. ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರ ಬಗ್ಗೆ ಬರೆದರೆ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಉದ್ಯೋಗದಾತರಿಗೆ ಸಾಧ್ಯವಾಗುವುದು. ನೀವು ಸಾಮಾಜಿಕ ಜೀವಿ ಹಾಗೂ ಹೊಂದಾಣಿಕೆ ಸ್ವಭಾವದವರೆಂದು ತಿಳಿದುಕೊಳ್ಳಲು ಇದರಿಂದ ಸಾಧ್ಯ.

ಅನುಭವವೇ ಆಧಾರ

ಅನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ತರಬೇತಿ ಸಮಯ ಹಾಗೂ ವೆಚ್ಚ ಉಳಿತಾಯವಾಗುತ್ತದೆ. ಹಾಗಾಗಿಯೇ ಅನುಭವಸ್ಥರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ನೀವೂ ಕೂಡ ಅನುಭವದ ಅವಧಿ, ಪಡೆದಿರುವ ಕೌಶಲ, ಸಾಧನೆಗಳ ಪಟ್ಟಿ ಇತ್ಯಾದಿಗಳನ್ನು ವಿವರವಾಗಿ ನೀಡಬೇಕು.

ಸಂಪೂರ್ಣ ವಿಳಾಸ ಇರಲಿ

ಇಂದು ಅಂತರ್ಜಾಲದ ಮೂಲಕ ಶೀಘ್ರವಾಗಿ ಮಾಹಿತಿ ರವಾನಿಸುವ ಕಾಲ. ಹಾಗಾಗಿ ನಿಮ್ಮ ವಿಳಾಸವು ಇ-ಮೇಲ್, ಮೊಬೈಲ್ ಸಂಖ್ಯೆ ಹೊಂದಿರಲಿ. ಸದ್ಯದ ವಿಳಾಸ ಹಾಗೂ ಕಾಯಂ ವಿಳಾಸವನ್ನೂ ತಿಳಿಸುವುದು ಅಗತ್ಯ.

ಇತರೆ ವಿಷಯಗಳು

ಹೆಚ್ಚು ಭಾಷೆಗಳ ಜ್ಞಾನ ಹೊಂದಿದ್ದರೆ ಒಳಿತು. ಆ ಬಗ್ಗೆ ನಿಮ್ಮ ಸ್ವ ವಿವರದಲ್ಲಿ ತಿಳಿಸಿ. ನಿಮ್ಮ ವಯಸ್ಸು, ಮುಂದಿನ ಗುರಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು, ಸದಸ್ಯತ್ವ ಪಡೆದುಕೊಂಡಿರುವುದು, ಇಬ್ಬರು ಪರಿಚಯಸ್ಥರು ಹಾಗೂ ಅವರ ಹುದ್ದೆ, ವಿಳಾಸ ತಿಳಿಸಬೇಕು.

ಅರ್ಜಿಯೂ ಇರಲಿ

ಯಾವುದೇ ಉದ್ಯೋಗಕ್ಕೆ ನೇರವಾಗಿ ಸ್ವ-ವಿವರ ನೀಡಬೇಡಿ. ಅದರ ಜತೆಗೆ ಒಂದು ಅರ್ಜಿ ಇರಲಿ. ಯಾವ ಹುದ್ದೆ ಬಯಸುತ್ತಿದ್ದೀರಿ ಎಂಬುದನ್ನು ಅದರಲ್ಲಿ ಸ್ಪಷ್ಟವಾಗಿ ತಿಳಿಸಿ. ಅರ್ಜಿಯು ಚಿಕ್ಕ ಹಾಗೂ ಚೊಕ್ಕದಾಗಿದ್ದು, ನಿಮ್ಮ ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ಪ್ರಮುಖವಾದ ಒಂದು ವಾಕ್ಯ ಅದರಲ್ಲಿರಲಿ. ಅರ್ಜಿಯ ಕೊನೆಯಲ್ಲಿ ತಾವು ಅವಕಾಶ ಮಾಡಿ ಕೊಟ್ಟಲ್ಲಿ ಸಂದರ್ಶನಕ್ಕೆ ಹಾಜರಾಗಲು ಸಿದ್ಧನಿರುವುದಾಗಿ ತಿಳಿಸಬೇಕು.
ಅರ್ಜಿ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೆಂದು ದಪ್ಪಕ್ಷರದಲ್ಲಿ ಬರೆಯಬೇಕು. ಪ್ರತಿ ಹುದ್ದೆಗೂ ವಿಶೇಷವಾಗಿ ಸ್ವ-ವಿವರ ತಯಾರಿಸುವುದು ಸೂಕ್ತ.

ಮರದಿಂದ ಮೊಬೈಲ್ ಚಾರ್ಜ್

ಕಾಲಿಟ್ಟಲ್ಲೆಲ್ಲಾ ಪರಿಸರವನ್ನು ಹಾಳು ಮಾಡೋ ಸ್ವಭಾವ ನಮ್ಮದು. ಮರಗಿಡಗಳನ್ನು ನೆಲಸಮ ಮಾಡಿ ಕಾಂಕ್ರಿಟ್

ಕಾಡು ಬೆಳೆಸೋ ತಿಕ್ಕಲುತನ . ಈ ಪ್ರಕೃತಿಯಾದ್ರೂ ಅಷ್ಟೇ. ಬರೀ ಜೀವ ತೇಯೋದೊಂದು ಗೊತ್ತು. ಸ್ವಾರ್ಥ ಅನ್ನೋದೇ ಇಲ್ವೇ? ತನ್ನ ಮೇಲೆ ಇಷ್ಟೆಲ್ಲ ದಾಳಿ ನಡೆಸ್ತಾ ಇದ್ರೂ ಹೆಲ್ಪ್ ಮಾಡೋದು ಮರೆಯಲ್ಲ. ಅದರ ಸಾಲಿಗೆ ಈಗ ಇನ್ನೊಂದು ಸೇರಿದೆ. ಏನಪ್ಪಾ ಅಂದ್ರೆ, ಮರದಲ್ಲಿರುವ ಬಯೋಎಲೆಕ್ಟ್ರಿಕ್ ಅಂಶ ತುಂಬ ನೈಸಗರ್ಿಕವಾಗಿ ನಮ್ಮ ಎಲೆಕ್ಟ್ರಾನಿಕ್ ಸರ್ಕ್ಯೂಟ್ಗೆ ಶಕ್ತಿ ನೀಡಬಲ್ಲದು! ಆಧುನಿಕ ಮೊಬೈಲ್ಗೆ ತೀರ ಕಡಿಮೆ ವಿದ್ಯುತ್ ಸಾಕು. ಹೀಗಾಗಿ ಟಚ್ ಸ್ಕ್ರೀನ್ ಮೊಬೈಲ್ ಬ್ಯಾಟರಿಯನ್ನು ಮರದಿಂದ ನೇರವಾಗಿ ಚಾರ್ಜ್ ಮಾಡ್ಕೋಬಹುದು ಅಂತ ಹೇಳಲಾಗ್ತಿದೆ. ಅಮೆರಿಕದ ಮೇಪಲ್ ಮರಗಳಿಂದ 1.1 ವೋಲ್ಟ್ ವಿದ್ಯುತ್ ಪಡೆಯಲಾಗಿದೆಯಂತೆ. ಇನ್ನಾದರೂ ಮನೆಯಂಗಳದಲ್ಲಿ ಮರ ಬೆಳೆಸೋ ಹವ್ಯಾಸ ರೂಢಿಸಿಕೊಳ್ತಾರೇನೋ ನಮ್ಮ ಜನ. ಯಾಕೆಂದ್ರೆ ಸುಲಭವಾಗಿ ರೀಚಾರ್ಜ್ ಮಾಡ್ಕೋಬಹುದಲ್ವಾ?

ಗುರುವಾರ, ಅಕ್ಟೋಬರ್ 7, 2010

ಕೊನೆಗೂ ಬಂತು ಕೃತಕ ರಕ್ತ

ಬ್ರಿಟಿಷ್ ವಿಜ್ಞಾನಿಗಳು ಭ್ರೂಣದ ಕಾಂಡಕೋಶಗಳಿಂದ ಮಾನವ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು, ರಕ್ತ ವರ್ಗಾವಣೆ ಸಮಯದಲ್ಲಿ  ಅಗತ್ಯವಿರುವ ಕೃತಕ  `ಒ’  ನೆಗೆಟಿವ್ ರಕ್ತವನ್ನು ತಯಾರಿಸಲು ಅನುವು ಮಾಡಿಕೊಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪರ್ಯಾಯ ರಕ್ತವನ್ನು ತಯಾರಿಸುವ ಸಲುವಾಗಿ ಆರಂಭಿಸಲಾದ 300 ಲಕ್ಷ ಪೌಂಡ್ ವೆಚ್ಚದ ಸಂಶೋಧನಾ ಯೋಜನೆಯಡಿ ಈ ಮಹತ್ವದ ಯಶಸ್ಸನ್ನು ಸಾಧಿಸಲಾಗಿದೆ. ಭ್ರೂಣದ ಹೆಚ್ಚುವರಿ ಕಾಂಡಕೋಶಗಳ ನೆರವಿನಿಂದ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ಸನ್ನು ಸಾಧಿಸಲಾಗಿದೆ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಕೃತಕ ಗರ್ಬಧಾರಣೆ ಕ್ಲಿನಿಕ್ಗಳಲ್ಲಿ ಬಳಸಿದ ನಂತರ ಉಳಿದಿದ್ದ ಸುಮಾರು 100ಕ್ಕೂ ಹೆಚ್ಚು ಭ್ರೂಣಗಳ ನೆರವಿನಿಂದ ಈ ಪ್ರಯೋಗವನ್ನು ನಡೆಸಲಾಗಿದೆ. ಈ ಭ್ರೂಣಗಳಿಂದ ಹಲವಾರು ಲೈನ್ಸ್ ಎಂಬ ಕಾಂಡಕೋಶಗಳನ್ನು ನಿರ್ಮಿಸಲಾಗಿದೆ. ಆರ್ಸಿ-7 ಎಂಬ ಲೈನನ್ನು, ಆಮ್ಲಜನಕವನ್ನು ಸಾಗಿಸುವ ಗುಣವುಳ್ಳ ಹಿಮೊಗ್ಲೋಬಿನ್ ಹೊಂದಿರುವ ಕೆಂಪು ರಕ್ತ ಕಣಗಳನ್ನಾಗಿ ಪರಿವರ್ತಿಸುವ ಮೊದಲು, ರಕ್ತದ ಕಾಂಡಕೋಶದೊಳಕ್ಕೆ ವರ್ಗಾವಣೆ ಮಾಡಲಾಗಿತ್ತು.
ಎಡಿನ್ಬರ್ಗ್ ನಲ್ಲಿನ ಸ್ಕಾಟಿಶ್ ನ್ಯಾಷನಲ್ ಬ್ಲಡ್ ಟ್ರಾನ್ಸ್ ಫ್ಯೂಷನ್ ಸರ್ವಿಸ್  ಸಂಸ್ಥೆಯ ನಿರ್ದೇಶಕ ಹಾಗೂ ಈ ಸಂಶೋಧನಾ ತಂಡದ ಮುಖ್ಯಸ್ಥ ಪ್ರೊ. ಮಾರ್ಕ್  ಟರ್ನರ್ ಹೇಳಿದ್ದಾರೆ. ಭಾರಿ ಪ್ರಮಾಣದಲ್ಲಿ ಕೃತಕ ರಕ್ತ ನಿರ್ಮಾಣದಿಂದ ರಕ್ತದ ಕೊರತೆಯನ್ನು ನಿವಾರಿಸಬಹುದಾಗಿದೆ ಮತ್ತು ರಕ್ತ ವರ್ಗಾವಣೆ ಸಮಯದಲ್ಲಿ ರಕ್ತದ ದಾನಿಗಳು ಮತ್ತು ರಕ್ತವನ್ನು ಪಡೆಯುವವರಲ್ಲಿ ಯಾವುದೇ ರೀತಿಯ ಸೋಂಕನ್ನು ತಡೆಗಟ್ಟಲು ಸಹ ಇದು ಸಹಕಾರಿ ಎಂದು ಅವರು ಹೇಳಿದ್ದಾರೆ. ಭ್ರೂಣದ ಕಾಂಡಕೋಶಗಳ ಲೈನ್ಗಳಿಂದ ಕೆಂಪು ರಕ್ತ ಕಣಗಳನ್ನು ತಯಾರಿಸಬಹುದು ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಮೂರು ವರ್ಷಗಳ ಅಂತ್ಯದಲ್ಲಿ ನಾವು ಒಂದು ಪಿಂಟ್  ಉನ್ನತ ಮಟ್ಟದ, ಮಾನವ ರಕ್ತ ಸ್ವಭಾವದ ಎಲ್ಲ ಬಗೆಯ ಗುಣಲಕ್ಷಣಗಳನ್ನು ಹೊಂದಿರುವ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದು ಪ್ರೊ.ಟರ್ನರ್ ಹೇಳಿದ್ದಾರೆ.

ಬುಧವಾರ, ಅಕ್ಟೋಬರ್ 6, 2010

ಕಾರು ಕಳವು ತಡೆಗೆ ನೂತನ ತಂತ್ರಜ್ಞಾನ

ಇದು ವಾಹನ ಮಾಲೀಕನಿಗೆ ಎಸ್ಎಂಎಸ್ ಕಳುಹಿಸುತ್ತದೆ
ಇತೀಚಿನ ದಿನಗಳಲ್ಲಿ ಸಿರಿವಂತರಷ್ಟೇ ಅಲ್ಲ ಮಧ್ಯಮ ವರ್ಗದವರ ಮನೆ ಮುಂದೆಯೂ ಕಾರುಗಳು ಇರುವುದು ಈಗ ಸಾಮಾನ್ಯ ನೋಟ. ಥರಹೇವಾರಿ ಕಾರುಗಳಿಗೇನು ಕೊರತೆ ಇಲ್ಲ. ತಿಂಗಳಲ್ಲಿ ಹಲವು ಹೊಸ ಮಾದರಿ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತವೆ. ಮಾರಾಟವೂ ಅಷ್ಟೇ ಭರ್ಜರಿಯಾಗಿ ನಡೆಯುತ್ತಿದೆ.
ಜತೆಗೆ ಕಾರು ಕಳ್ಳರ ಕೈಚಳಕವೂ ಹೆಚ್ಚಾಗಿದೆ. ಕಾರುಗಳ ಕಳ್ಳತನದಲ್ಲಿ ದೆಹಲಿ, ಮುಂಬಯಿ ನಂತರ ಸ್ಥಾನದಲ್ಲಿ ಬೆಂಗಳೂರು ಹಾಗೂ ಮೈಸೂರು ಇದೆ. ವಾಹನ ಕಳ್ಳತನ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವ ಅಪರಾಧವಾಗಿದೆ. ಕಾರು ಕಳೆದುಕೊಂಡು ಪರದಾಡುವವರಿಗೆ ಈಗ ತಂತ್ರಜ್ಞಾನ ನೆರವಿಗೆ ಬಂದಿದೆ. ಈ ಸಾಧನಗಳ ನೆರವಿನಿಂದ ಕಾರುಗಳನ್ನು ಕಳ್ಳತನ ಆಗದಂತೆ ತಡೆಗಟ್ಟಬಹುದು.
 
ಅದು ಮೊಬೈಲ್ ಫೋನ್ನಿಂದ ಮಾತ್ರ ಅಂದ್ರೆ ವಿಚಿತ್ರ ಅನ್ಸುತ್ತೆ. ಆದ್ರೂ ನಿಜ. ಅಂತಹ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನ ‘ಐಟ್ರಾನ್ಸ್ ಟೆಕ್ನಾಲಜೀಸ್’ ಪರಿಚಯಿಸಿದೆ.
ಈ ತಂತ್ರಜ್ಞಾನದ ಹೆಸರು ‘ಟಿಕಾಪ್’ ಇದು ಜಿಎಸ್ಎಂ ಆಧಾರಿತ ತಂತ್ರಜ್ಞಾನ. ಟಿಕಾಪ್ನಲ್ಲಿ ವೋಡಾಫೋನ್ ಸಿಮ್ ಕಾರ್ಡನ್ನು ಹಾಕಿ ಕಾರಿನಲ್ಲಿ ಅಳವಡಿಸಿ ಅಕ್ಟಿವೇಟ್ ಮಾಡಲಾಗುತ್ತದೆ. ಟಿಕಾಪ್ ಜತೆ ಮಾಲೀಕನ ಯಾವುದೇ ಟೆಲಿಕಾಂ ಸೇವೆಯ ಮೊಬೈಲ್ ಸಂಪರ್ಕ ಕಲ್ಪಿಸಬಹುದು. ಇದೊಂದು ಪುಟ್ಟ ಸಾಧನವಾಗಿದ್ದು, ವಾಹನ ಕಳ್ಳತನವಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಹೆಚ್ಚು ಅನುಕೂಲತೆ ಕಲ್ಪಿಸಿದೆ.
ಟಿಕಾಪ್ ತಂತ್ರಜ್ಞಾನ ಅಳವಡಿಸಿದ ವಾಹನವು ಪ್ರತಿ 5 ನಿಮಿಷಕ್ಕೊಮ್ಮೆ ಯಾವ ಸ್ಥಳದಲ್ಲಿದೆ ಎಂಬುದನ್ನು ಎಸ್ಎಂಎಸ್ ಮೂಲಕ ಸೂಚನೆ ನೀಡುತ್ತದೆ. ಯಾರಾದರೂ ಕಾರು ಕಳ್ಳತನ ಮಾಡುವ ಉದ್ದೇಶದಿಂದ ಒಳ ನುಗ್ಗಲು ಯತ್ನಿಸಿದರೆ ತಕ್ಷಣವೇ ಕಾರು ಮಾಲೀಕನಿಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನಿಸುತ್ತದೆ.
ಆಗ ಮಾಲೀಕ ತಕ್ಷಣ ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಬಹುದು. ಕಾರ್ ಕಳ್ಳತನ ಮಾಡಿದ ಕಳ್ಳನು ಟಿಕಾಪ್ ಅಳವಡಿಕೆಯ ಬಗ್ಗೆ ಗೊತ್ತಿಲ್ಲದೆ ಇದ್ದಾಗ ಮಾಲೀಕರು ತಕ್ಷಣವೇ ಎಸ್ಎಂಎಸ್ ಮಾಡಿ ಸೈರನ್ ಆನ್ ಆಗುವ ಹಾಗೆ ಮಾಡಬಹುದು. ಇದರಿಂದ ಕಳ್ಳನು ಸಿಕ್ಕಿಬೀಳುವ ಸಾಧ್ಯತೆಗಳುಂಟು. ಸೈರನ್ ಬೇಕಾದಾಗ ಆನ್ ಅಥವಾ ಆಫ್ ಮಾಡುವ ಸೌಲಭ್ಯವೂ ಉಂಟು. ಯಾರಾದರೂ ನಿಮ್ಮ ವಾಹನವನ್ನು ಕೇಳಿ ಪಡೆದು ಬೇಕಾಬಿಟ್ಟಿ ಎಲ್ಲೆಲ್ಲೊ ಸುತ್ತಾಡುವುದಕ್ಕೂ ತಡೆ ಹಾಕಬಹುದು.
ಈ ಟೆಕಾಪ್ ತಂತ್ರಜ್ಞಾನದಿಂದ ಇದೆಲ್ಲಾ ಹೇಗ್ಪಾ ಸಾಧ್ಯ ಅಂತೀರಾ? ಟೆಕಾಪ್ ಅಳವಡಿಸಿದ ಯಾವುದೇ ವಾಹನವು ಚಾಲನೆಯಾದ 72 ಗಂಟೆಗಳ ಚಲನೆಯ ದತ್ತಾಂಶಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ. ವಾಹನ ದುರ್ಬಳಕೆ ಮತ್ತು ಕಳ್ಳತನಕ್ಕೆ ಟೆಕಾಪ್ ದೊಡ್ಡ ಅಸ್ತ್ರವೇ ಆಗಿದೆ.
ಶಾಲಾ ವಾಹನ ಸೇರಿದಂತೆ ಅನೇಕ ವಾಹನಗಳನ್ನು ಹೊಂದಿರುವವರಿಗೂ ಇದರಿಂದ ಲಾಭವಿದೆ. ಬಳಿಯಲ್ಲಿ ಹಲವು ಚಾಲಕರು ಕೆಲಸಕ್ಕೆ ಇರುವಾಗಲೂ ಇದು ಬಹಳ ಸಹಾಯಕ. ಮಕ್ಕಳ ಪಾಲಕರಿಗೆ ಶಾಲಾ ವಾಹನ ಎಲಿದೆ. ಬರಲು ಇನ್ನೂ ಎಷ್ಟು ಸಮಯ ಬೇಕು ಎನ್ನುವ ಮಾಹಿತಿ ತಿಳಿಸಬಹುದು. ಬೇಕೆಂದಾಗ ಮೊಬೈಲ್ ಸಂಖ್ಯೆಗಳನ್ನು ಸೇರಿಸಬಹುದು ಅಥವಾ ತೆಗೆಯಬಹುದು.
ಮಾಹಿತಿಗೆ http://www.tcop.co.in/ತಾಣಕ್ಕೆ ಭೇಟಿ ನೀಡಿ.

ಮುಕ್ತ ವಿವಿಯಲ್ಲಿ ಇ-ರಿಸೋರ್ಸ್ ಸೆಂಟರ್ ಆರಂಭ

                             Ksou buliding
ಪ್ರಸಕ್ತ ಸಾಲಿನಲ್ಲಿ 2 ಲಕ್ಷ ವಿದ್ಯಾರ್ಥಿಗಳಿಂದ ವಿವಿ ಪ್ರವೇಶ

ಮೈಸೂರು: ದಿನೇ ದಿನೆ ತನ್ನ ಕಾರ್ಯವ್ಯಾಪಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ.
ಈ ಕುರಿತು ಜಸ್ಟ್ ಕನ್ನಡದೊಂದಿಗೆ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ. ಆರ್.ರಂಗಪ್ಪ ತನ್ನ ನೂತನ ಯೋಜನೆಗಳನ್ನು ವಿವರಿಸಿದ್ದು ಹೀಗೆ…
ತನ್ನ ವಿದ್ಯಾರ್ಥಿಗಳಿಗೆ ಕುಳಿತಲ್ಲಿಯೇ ಪಠ್ಯ ಮತ್ತಿತರ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರಂಥಾಲಯದಲ್ಲಿ ವಿದ್ಯುನ್ಮಾನ-ಸಂಪನ್ಮೂಲ ಕೇಂದ್ರ (ಇ ರಿಸೋರ್ಸ್ ಸೆಂಟರ್) ಆರಂಭಿಸಲಾಗಿದೆ.
ದೂರಶಿಕ್ಷಣ ಕಲ್ಪಿಸುವ ಸವಾಲುಗಳನ್ನು ಮೀರಿ ನಿಲ್ಲಲು ಅಭ್ಯರ್ಥಿಗಳು ತಾವು ಇರುವಲ್ಲಿಯೇ ಅಥವಾ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದಲೇ ಕಲಿಕೆಗೆ ಮುಂದಾಗಲಿ ಎಂಬ ಉದ್ದೇಶದಿಂದ ಇಂತಹ ಅತ್ಯಾಧುನಿಕ ಸೇವೆಗಳನ್ನು ಕಲ್ಪಿಸುತ್ತಿದೆ. ಇಲ್ಲಿನ ಗ್ರಂಥಾಲಯದಲ್ಲಿ ಇ-ಸಂಪನ್ಮೂಲವಲ್ಲದೆ 1 ಲಕ್ಷಕ್ಕೂ ಹೆಚ್ಚು ಸಂಪುಟಗಳನ್ನು ಹೊಂದಿದೆ. ಸುಸಜ್ಜಿತ ಕಂಪ್ಯೂಟರ್ ಸೇವೆಗಳು, ಸಿಡಿ-ಡಿವಿಡಿ ಮೂಲಾಂಶ, ಅಂತರ್ಜಾಲ, ಇ-ಕಲಿಕಾ ಪ್ಯಾಕೇಜ್, ಸಂಪೂರ್ಣ ಪಠ್ಯವಿರುವ ಇ-ಸಂಪನ್ಮೂಲ ಮತ್ತಿತರ ಸೇವೆ ಒಳಗೊಂಡಿದೆ. ಹೀಗಾಗಿ ಸಾಂಪ್ರದಾಯಕ ಗ್ರಂಥಾಲಯವು ಸಹ ಅತ್ಯಾಧುನಿಕ ಸ್ಪರ್ಶವನ್ನು ಪಡೆದುಕೊಂಡಿದ್ದು, ಕಲಿಕಾರ್ಥಿಗಳ ಇಂದಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಸಜ್ಜಾಗಿದೆ.
KSOU VC pro.Rangappa
ಸಮರ್ಗ ಮಾಹಿತಿಗೆ ಈ ವೆಬ್ ಸೈಟ್ ನೋಡಿ
www.ksoumysore.edu.in ವೆಬ್ ಸೈಟ್ ಪ್ರವೇಶಿಸಿ, ತಮಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ಸಹ ಪಡೆಯಬಹುದು. ಒಂದೇ ಮಾಹಿತಿಯನ್ನು ಏಕಕಾಲದಲ್ಲಿ ಹಲವು ಮಂದಿ ಪಡೆಯಬಹುದು. ಒಂದೇ ಮಾಹಿತಿಯನ್ನು ಏಕಕಾಲದಲ್ಲಿ ಹಲವು ಮಂದಿ ಪಡಯಬಹುದು. ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯೋದ್ದೇಶವನ್ನು ಸಾಕಾರಗೊಳಿಸುವ ಗುರಿಯೊಂದಿಗೆ ಈ ಕೇಂದ್ರ ಆರಂಭವಾಗಿದೆ. ದೃಷ್ಟಿ ದೋಷ ಉಳ್ಳವರಿಗೆ ಅಗತ್ಯ ಸಾಫ್ಟ್ ವೇರ್ ಗಳನ್ನು ಬಳಸುವ ಮೂಲಕ ವಿಶೇಷ ಸೇವೆ ಕಲ್ಪಿಸಲು ವಿವಿ ಯೋಜಿಸಿದೆ. ಇದಲ್ಲದೆ ಸಾವಿರಾರು ಇ-ಜರ್ನಲ್ ಗಳು, ಇ-ಪುಸ್ತಕಗಳು ಮೊದಲಾದವುಗಳನ್ನು ಅಂತರ್ಜಾಲದ ಮೂಲಕ ಡೆಯಬಹುದು ಎಂದು ರಂಗಪ್ಪ ವಿವರಿಸಿದರು.
2009-10ನೇ ಸಾಲಿನಲ್ಲಿ ವಿವಿಗೆ ಪ್ರವೇಶ ಪಡೆದವರ ಸಂಖ್ಯೆ 1 ಲಕ್ಷ ಮೀರಿತ್ತು. 2010-11ನೇ ಸಾಲಿನಲ್ಲಿ ಈ ಸಂಖ್ಯೆ 2 ಲಕ್ಷ ಮುಟ್ಟುವ ನಿರೀಕ್ಷೆ ಇದೆ. ಈ ಪ್ರಮಾಣದ ವಿದ್ಯಾರ್ಥಿಗಳ್ನು ಸುಲಭವಾಗಿ ತಲುಪುವಂತಗಲು ವಿವಿಯು ಅತ್ಯಾಧುನಿಕ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಗೊಂದಲ ಅಥವಾ ಮತ್ತಷ್ಟು ಮಾಹಿತಿ ಬೇಕೆಂದರೆ ದೂರವಾಣಿ ಸಂಖ್ಯೆ: 0821-2512471 ಅನ್ನು ಸಂಪರ್ಕಿಸಬಹುದು .

ಮಂಗಳವಾರ, ಅಕ್ಟೋಬರ್ 5, 2010

ಹೆಡ್ಫೋನ್ ಹೆಚ್ಚು ಬಳಸಿದರೆ ಕಿವಿಗೆ ಹಾನಿ

* ಕಿವಿಗೆ ಹೆಡ್ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಹಳಿ ದಾಟಬೇಕಾದರೆ ರೈಲು ಡಿಕ್ಕಿ ಹೊಡೆದು ಮೂವರು ಮೃತಪಟ್ಟ ಪ್ರತ್ಯೇಕ ಪ್ರಕರಣ ಇತ್ತೀಚೆಗೆ ಬೆಂಗಳೂರಿನಲ್ಲಿ ದಾಖಲಾಗಿತ್ತು. ಅಂದರೆ ಹೆಡ್ಫೋನ್ ಹಾಕಿಕೊಂಡು ತಮ್ಮ ಪ್ರಾಣಕ್ಕೆ ಸಂಚಾಕಾರ ತಂದುಕೊಂಡ ಇವರೆಲ್ಲರೂ 20ರಿಂದ 30 ವರ್ಷದೊಳಗಿನವರು.
* ಬಸ್ಸಿನಲ್ಲೂ ಹೆಡ್ಫೋನ್ ಕಚಚಿಕೊಂಡಿರಬೇಕು, ಮೈಕಲ್ ಜಾಕ್ಸನ್ ಸ್ಟೈಲ್ನಲ್ಲಿ ಕಾಲು ಕುಣಿಸುವ ಯುವಕನನ್ನು ಕಂಡು ಪಕ್ಕದಲ್ಲಿದ್ದ ಅಜ್ಜನಿಗೂ ಉಮೇದು ! ರಸ್ತೆಯಲ್ಲಿ ಹೋಗುವಾಗ ಮ್ಯೂಸಿಕ್ನಲ್ಲಿ ಪರವಶನಾದ ಹುಡುಗ, ಎದುರು ಬಂದವರಿಗೆ ಡಿಕ್ಕಿ ಹೊಡೆದು ‘ಸಾರಿ ಯಾರ್…’ ಎನ್ನುತ್ತಲೇ ಇಯರ್ಫೋನ್ ಸರಿಪಡಿಸಿಕೊಳ್ಳುತ್ತ ಸಾಗುತ್ತಾನೆ. ಎಲ್ಲೆಡೆ ಕಾಣುವ ಹೆಡ್ಫೋನ್ ಮಾಯೆಯ ಸನ್ನಿವೇಶಗಳಿವು. 
ಆದರೆ ಈ ಮೋಹದ ಬಲೆ ಸರಿಸಿದಗ ಕೇಳುವುದೇ ಬೇರೆ.
ಇಪ್ಪತ್ತು ವರ್ಷದ ರೋಹನ್ ಈಚೆಗೆ ಟೀವಿ ನೋಡುವಾಗ ವಾಲ್ಯೂಮ್ ಅನ್ನು ಗರಿಷ್ಠ ಮಾಡಿಡುತ್ತಿದ್ದ. ಕಡಿಮೆ ಮಾಡು ಎಂದು ಅಪ್ಪ, ಅಮ್ಮ ಹೇಳಿದರೆ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ಅವರೇನಾದರೂ ಸೌಂಡ್ ಕಡಿಮೆ ಮಾಡಿದರೆ ಕೇಳಿಸುವಿದಲ್ಲ ಎಂದು ತಕರಾರು ಮಾಡುತ್ತಿದ್ದ. ಈ ಸಮಸ್ಯೆಯ ರಹಸ್ಯೆ ಅರಿಯಲು ಇಎನ್ಟಿ ಸ್ಪೆಷಲಿಸ್ಟ್ ಬೇಕಾಯಿತು.
ಟೀನೇಜ್ನವರಲ್ಲಿ ಕಿವುಡುತನ ಸಂಬಂಧಿ ತೊಂದರೆಗಳು ಹೆಚ್ಚುತ್ತಿವೆ ಎಂಬುದು ವೈದ್ಯರ ಆತಂಖ. ಕಳೆದೆರಡು ದಶಕಗಳಿಂದ ಇದು ಗಮನಾರ್ಹವಾಗಿ ಏರಿದೆ.
55 ವಯಸ್ಸಿನ ನಂತರ ಕಿವಿ ಮಂದವಾಗುವ ವಯೋಸಹಜ, ರಕ್ತನಾಳಗಳು ದಪ್ಪವಾಗತೊಡಗಿರುವುದರಿಂದ ಕ್ರಮೇಣ ಶ್ರವಣ ತೊಂದರೆ, ಅಂದರೆ ವರ್ಷಕ್ಕೆ ಒಂದು ಡೆಸಿಬಲ್ನಷ್ಟು ಕಿವುಡತನ ಉಂಟಾಗುತ್ತದೆ. ಈ ಲೆಕ್ಕದಲ್ಲಿ 65 ಆಗುವ ಹೊತ್ತಿಗೆ ಸುಮಾರು 10 ಡೆಸಿಬಲ್ನಷ್ಟು ಕಿವುಡುತನ ಉಂಟಾಗುವುದು ಕಳವಳದ ವಿಚಾರವೇನಲ್ಲ.
ಈಗ ಹದಿಹರೆಯದವರು ಮತ್ತು ಯುವಜನರಲ್ಲೂ ಕಿವುಡುತನ ಸಮಸ್ಯೆ ಕಾಣಿಸುತ್ತಿದೆ. ತಂಬಾಕು ಬಳಕೆಯಿಂದ ನರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಲೌಡ್ ಮ್ಯೂಸಿಕ್ನಿಂದ ಕಿವಿಯ ಒಳಭಾಗಕ್ಕೆ ಹಾನಿಯಾಗುತ್ತದೆ. ಮೊಬೈಲ್ ಫೋನ್ ಅತಿ ಬಳಕೆಯೂ ಈ ತೊಂದರೆಗೆ ಕೊಡುಗೆ ನೀಡುವಲ್ಲಿ ಒಂದು ಮುಖ್ಯ ಕಾರಣ ಎಂದು ವೈದ್ಯರು ವಿಶ್ಲೇಷಿಸುತ್ತಾರೆ.
ದೊಡ್ಡ ಸದ್ದಿಗೆ ಹೆಚ್ಚು ಹೊತ್ತು ಕಿವಿಗೊಟ್ಟಷ್ಟು ದುಷ್ಪರಿಣಾಮ ಹೆಚ್ಚುತ್ತದೆ. ವ್ಯಕ್ತಿ ಸಣ್ಣ ವಯಸ್ಸಿನಲ್ಲೇ ಶ್ರವಣ ತೊಂದರೆ ಅನುಭವಿಸುವಂತಾಗುತ್ತದೆ.
ಇನ್ನೊಂದು ಅಪಾಯಕಾರಿ ಬೆಳವಣಿಗೆಯೆಂದರೆ ಐಪಾಡ್ ಮತ್ತು ಮೊಬೈಲ್ ಫೋನ್ ಮುಂತಾದ ಪೋರ್ಟಬಲ್ ಗ್ಯಾಜಿಟ್ಗಳ ಜನಪ್ರಿಯತೆ ಹೆಚ್ಚಿದೆ. ಹೀಗಾಗಿ ಕಿವಿಗೆ ಲೌಡ್ಸ್ಪೀಕರ್ಗಳಿಗಿಂತ ಹೆಡ್ಫೋನ್ಗಳಿಂದಾಗುವ ಹಾನಿಯ ಸಾಧ್ಯತೆಯೇ ಹೆಚ್ಚು ಎಂಬುದು ತಜ್ಞರ ವ್ಯಾಖ್ಯಾನ. ಸದ್ದಿನ ಮಟ್ಟ ಹೋಲಿಕೆಯಲ್ಲಿ ಒಂದೇ ಇದ್ದರೂ ಮೈಕಾಸುರನಿಗಿಂತ , ಹೆಡ್ಫೋನ್ನಿಂದ ಕಿವಿಗೆ ಆಗುವ ಡ್ಯಾಮೇಜ್ ಹೆಚ್ಚು. ಏಕೆಂದರೆ ಹೆಡ್ಫೋನ್ ಅಥವಾ ಇಯರ್ಫೋನ್ ಕಿವಿಯೊಳಗೇ ಎಂಟ್ರಿ ಪಡೆದಿರುತ್ತವೆ. ಹೆಡ್ಫೋನ್ ಬಳಕೆ ಹೆಚ್ಚಿದ್ದರಿಂದ ಶ್ರವಣ ಸಮಸ್ಯೆಗಳೂ ಹೆಚ್ಚಿವೆ ಎಂಬುದನ್ನು ಇಎನ್ಟಿ ತಜ್ಞರು ಹೇಳುತ್ತಾರೆ.

 

ಎಚ್ಚರ

ನಮ್ಮ ನಿತ್ಯ ಜೀವನದಲ್ಲಿ ಕಿವಿಗೊಡಬೇಕಾದ ಸದ್ದುಗಳ ಬಗೆ ಮತ್ತು ಪ್ರಮಾಣ 60 ಡೆಸಿಬಲ್. ಮಾಮೂಲು ಸಂಭಾಷಣೆ, ಟೆಲಿಫೋನ್ ರಿಂಗಿಂಗ್, 70 ಡೆಸಿಬಲ್, ರೆಸ್ಪಾರಂಟ್ 80 ಡೆಸಿಬಲ್, ಹೆವಿ ಟ್ರಾಫಿಕ್, 2 ಅಡಿ ದೂರದಲ್ಲಿರುವ ಅಲರ್ಮ್ ಕ್ಲಾರ್ಕ್, ಫ್ಯಾಕ್ಟರಿ ಸದ್ದು, ವಾಕ್ಯೂಮ್ ಕ್ಲೀನರ್, 90 ಡೆಸಿಬಲ್: ಭೂಗತ ರೈಲು, ಮೋಟಾರ್ ಸೈಕಲ್, ವರ್ಕ್ ಷಾಪ್ ಟೂಲ್ಸ್, ಚೈನು, ಗರಗಸ, 110 ಡೆಸಿಬಲ್, ಡಾನ್ಸ್ ಕ್ಲಬ್ ಸೌಂಡ್, 120 ಡೆಸಿಬಲ್ :ರಾಕ್ ಕಾರ್ಯಕ್ರಮದ ಸ್ಪೀಕರ್ ಸದ್ದು ಸ್ಯಾಂಡ್ಬ್ಲಾಸ್ಟರ್, ಸಿಡಿಲು, 130 ಡೆಸಿಬಲ್ : ಜೆಟ್ ಟೇಕಾಫ್, ಬಂದೂಕಿನ ಸದ್ದು .

ಅತಿಯಾದ ಮೊಬೈಲ್ ಬಳಕೆ: ಆರೋಗ್ಯದಲ್ಲಿ ಆಗುತ್ತದೆ ತೊಂದರೆ

ಕಸ ಗುಡಿಸುವವರಿಂದ ಹಿಡಿದು ಆಫೀಸರ್ಗಳವರೆಗೆ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಸೈಕಲ್ ತುಳಿಯುವವನಿಂದ ಹಿಡಿದು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಓಡಾಡುವವರಿಗೂ ಚಲಿಸುವ ದೂರವಾಣಿ ಬೇಕೇ ಬೇಕು.
ಮೊಬೈಲ್ ಅನ್ನು ನಾವು ಎಷ್ಟು ಅವಲಂಬಿಸಿದ್ದೇವೆಂದರೆ ಹೆಂಡತಿ, ಪ್ರಿಯಕರ , ಸ್ನೇಹಿತ ಬೇಕಾದರೆ ಮನೆಯವರನ್ನು ಬಿಟ್ಟೇವು ಆದರೆ ಹ್ಯಾಂಡ್ ಫೋನ್ ಮಾತ್ರ ಬಿಡಲೊಲ್ಲೇವು ಎನ್ನುವವರೇ ಇಂದು ಹೆಚ್ಚಾಗಿದ್ದಾರೆ. ಅಷ್ಟರ ಮಟ್ಟಿಗೆ ಇದು ಜನಮಾನಸವಾಗಿದೆ. ಸ್ವಲ್ಪ ಹೊತ್ತು ಇದು ಇಲ್ಲದಿದ್ದರೆ ಚಡಪಡಿಸಿಬಿಡುತ್ತೇವೆ. ಏನೋ ಕಳೆದುಕೊಂಡ ಭಾಸ. ಏಕೆಂದರೆ ಇದೇ ನಮ್ಮ ಮನರಂಜನಾ, ಸಂಗಾತಿ, ಫ್ರೆಂಡ್, ಫಿಲಾಸಫರ್, ಗೈಡ್ ಹೀಗೆ ಹತ್ತು ಹಲವು.
ಒಂದು ಸೆಲ್ಫೋನ್ ಎಂಬುದು ಕಂಪ್ಯೂಟರ್, ಇಂಟರ್ನೆಟ್, ಮ್ಯೂಸಿಕ್ಪ್ಲೇಯರ್, ಟಿವಿ ಎಲ್ಲವೂ ಹೌದು. ಸೆಲ್ ಇದೆ ಎಂದೇ ವಾಚ್ ಕಟ್ಟುವುದನ್ನು ಬಿಟ್ಟಿದ್ದೇವೆ, ಕ್ಯಾಲ್ಕ್ಯುಲೇಟರ್ , ಅಲಾರಾಂ ಇಡುವುದನ್ನು ಬಿಟ್ಟಿದ್ದೇವೆ. ಹೀಗಾಗಿ ಸೆಲ್ ಫೋನ್ ಬಳಕೆ ಬಗ್ಗೆ ಯಾರು , ಏನು ಎಷ್ಟು ಎಚ್ಚರಿಕೆ ಹೇಳಿದರೂ ಅದು ಕೇಳಿದಷ್ಟೇ ಹೊತ್ತು ಎನ್ನುವುದು ಗೊತ್ತಿದೆ. ಆದರೂ ಅದರ ರೇಡಿಯೇಷನ್ ಬಗ್ಗೆ ದೀರ್ಘಾವಧಿಯಲ್ಲಿ ಅದರಿಂದಾಗುವ ತೊಂದರೆಗಳ ಬಗ್ಗೆ ಎಚ್ಚರಿಸುವುದು ತಪ್ಪಾಗಲಿಕ್ಕಿಲ್ಲವೇನೋ.
ನಾವು ಮೊಬೈಲ್ಗೆ ಎಷ್ಟು ಅಂಟಿಕೊಂಡಿದ್ದೀವೋ ಅಷ್ಟೇ ತೊಂದರೆಗಳು ಎದುರಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದರೂ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಹ್ಯಾಂಡ್ಫೋನ್ ಹೆಚ್ಚು ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಒಂದು ಕಿರು ಮಾಹಿತಿ ಇಲ್ಲಿದೆ.
* ನಮ್ಮ ದೇಹದ ಉಷ್ಣತೆ ಸೆಲ್ಫೋನ್ನಿಂದ ಹೆಚ್ಚಾಗುತ್ತದೆ. ಅದರಿಂದ ಹೊರಸೂಸುವ ರೇಡಿಯೋ ತರಂಗಗಳನ್ನು ಹೆಚ್ಚು ಹೀರಿಕೊಳ್ಳುವ ದೇಹದ ಭಾಗ ಎಂದರೆ ತಲೆ ಹಾಗೂ ಕತ್ತು. ಅಧಿಕ ಬಳಕೆಯಿಂದ ಜೀವಕೋಶ ಹಾಗೂ ಅಂಗಾಂಶಗಳ ಮೇಲಿನ ಅಪಾಯ ದ್ವಿಗುಣಗೊಳ್ಳುತ್ತದೆ.

* ಗರ್ಭಿಣಿಯರು ಸೆಲ್ಫೋನ್ ಬಳಕೆ ಮಾಡಿದರೆ ಹಾನಿ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಅದು ಕ್ರಮೇಣ ಸಂತಾನೋತ್ಪತ್ತಿಯ ಮೇಲೂ ಪರಿಣಾಮ ಬೀರುತ್ತದೆ. ಗರ್ಭದಲ್ಲಿರುವ ಭ್ರೂಣ ಸರಿಯಾಗಿ ಬೆಳೆಯದಂತೆ ಮಾಡಬಲ್ಲದು. ಇಲ್ಲವಾದಲ್ಲಿ ಏನಾದರೂ ತೊಂದರೆ ಕಂಡುಬರುವುದು.
* ಮಿದುಳಿಗೆ ಹೆಚ್ಚಿನ ಕೆಲಸ ನೀಡಿ ಅಲ್ಲಿನ ಕೋಶಗಳ ಮೇಲೆ ಒತ್ತಡ ಹೆಚ್ಚಿಸಬಹುದು. ನಿದ್ರೆಯಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣವೇ ಎಚ್ಚೆತ್ತುಕೊಳ್ಳುವುದು ಒಳಿತು.
* ಮಕ್ಕಳಲ್ಲಿ ನರಗಳ ಬೆಳವಣಿಗೆ ಆಗುತ್ತಿರುತ್ತದೆ. ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆಯಾದರೆ ಅಲ್ಲಿನ ನರಗಳು ಶಕ್ತಿಹೀನವಾಗುತ್ತವೆ. ಇದು ಮುಂದೆ ಸ್ಮರಣ ನಾಶ. ಕಲಿಕೆಯ ತೊಂದರೆ ಹಾಗೂ ನಡವಳಿಕೆಯ ಸಮಸ್ಯೆಗಳು ತಲೆದೋರಬಹುದು.
*ಸೆಲ್ಫೋನ್ ಹಾಗೂ ಇದರ ಟವರ್ಗಳಿಂದ ಹೊರಬರುವ ವಿಕಿರಣಗಳಿಂದ ಡಿಎನ್ಎ ಕಣಗಳಿಗೆ ತೊಂದರೆಯಾಗುತ್ತದೆ. ಮಿದುಳಿನ ಫ್ರೀ ರ್ಯಾಡಿಕಲ್ಸ್ ಹಾಗೂ ಸ್ಪೈಸ್ ಪ್ರೊಟೀನ್ಸ್ ಮೇಲೆ ಪರಿಣಾಮ ಉಂಟಾಗಿ ವ್ಯವಸ್ಥೆಗೆ ಹಾನಿಯಾಗುತ್ತದೆ. ಇದರಿಂದ ಮರೆವು, ಪಾಶ್ವವಾಯು, ಮಲ್ಪಿಪಲ್ ಸ್ಲೈರೊಸಿಸ್ ಮತ್ತಿತರ ಸಮಸ್ಯೆ ಉಂಟಾಗಬಹುದು.
* ಸುಮಾರು 10 ವರ್ಷಕ್ಕೂ ಹೆಚ್ಚು ಕಾಲ ಮಿತಿ ಮೀರಿ ಸೆಲ್ ಫೋನ್ ಬಳಕೆಯಿಂದ ಕಿವಿಗಳಲ್ಲಿ ಗಡ್ಡೆ ಉಂಟಾಗುವ ಅಪಾಯ ನಾಲ್ಕು ಪಟ್ಟು ಹೆಚ್ಚು ಮೆದುಳು ಕ್ಯಾನ್ಸರ್ನ ಅಪಾಯ ಎರಡು ಪಟ್ಟು ಜಾಸ್ತಿ. ಕಿವಿ ಸಂಪೂರ್ಣವಾಗಿ ತನ್ನ ಶಕ್ತಿ ಕಳೆದುಕೊಳ್ಳಬಹುದು.
ಅದಕ್ಕಾಗಿಯೇ ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ. ನೋಡಿ ಈಗಲಾದರೂ ಸೆಲ್ ಫೋನ್ ಬಳಕೆ ಪೂರ್ಣ ಬಿಡಿ ಎನ್ನಲಾಗುವುದಿಲ್ಲ. ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿ. ಆರೋಗ್ಯ ಚನ್ನಾಗಿಟ್ಟುಕೊಳ್ಳಿ .

ಆಟೋ ರಾಜ ಶಂಕರ್ ನಾಗ್

ಕರಾಟೆ ಕಿಂಗ್ ಸಕಲ ಕಲಾ ನಿಸ್ಸೀಮ ಆಟೋ ರಾಜ ಶಂಕರ್ ನಾಗ್ ನಮ್ಮನ್ನಗಲಿ ೨೧ ವರ್ಷಗಳು….ಅವರ ಸವಿ-ಸಿಹಿ ನೆನಪಿನಲ್ಲಿ….http://www.shankarnag.in/ ಭೇಟಿ ನೀಡಿ.ಅವರ ಕೆಲವು ಅಪರೂಪದ ಚಿತ್ರಗಳು ಕಾಣದೊರಕುತ್ತವೆ.ಶಂಕರಣ್ಣನ ನೆನಪಿನ ದೋಣಿಯಲ್ಲಿ ತೇಲೋಣ.

ಸೋಮವಾರ, ಅಕ್ಟೋಬರ್ 4, 2010

ಭೂಮಿಯಾಚೆ ಬದುಕು ಇಲ್ಲವಾ ?

                                                        alien image,
ಹೃತಿಕ್ ರೋಷನ್ ‘ಕೋಯಿ ಮಿಲ್ ಗಯಾ’ ನೋಡಿದ ಪ್ರತಿಯೊಬ್ಬರಿಗೂ, ‘ಛೇ, ನಮಗೂ ಅಂಥದ್ದೊಂದು ಅನ್ಯಗ್ರಹ ಜೀವಿಯ ಭೇಟಿಯಾಗಬಾರದೆ!’ ಅಂತನ್ನಿಸಿದ್ದರೆ ಆಶ್ಚರ್ಯವಿಲ್ಲ. ಆದರೆ, ಸದ್ಯಕ್ಕಂತೂ ಅದು ಸಾಧ್ಯವಿಲ್ಲದ ಮಾತು. ಅನ್ಯಗ್ರಹ ಜೀವಿ ಅನ್ನೋದು ಫ್ಯಾಂಟಸಿಯ ಪುಟಗಳಲ್ಲಷ್ಟೇ ಇರುವ ಸೃಷ್ಟಿ.
ವಿಜ್ಞಾನಿಗಳ ಪ್ರಕಾರ, ಭೂಮಿಯಿಂದಾಚೆ ಜೀವ ಸಂಕುಲ ಇರೋದು ದುಸ್ಸಾಧ್ಯ. ಆದರೆ ಹಾಗಂತ ಅವರು ಖಡಾ ಖಂಡಿತವಾಗಿ ‘never’ ಎಂದು ಹೇಳಲಾರರು. ಖಗೋಳಶಾಸ್ತ್ರದ ಮಜಾ ಇರೋದೇ ಹೀಗೆ, ನಮಗೆ ಗೊತ್ತು ಅಂದುಕೊಂಡ ವಿಷಯವನ್ನೂ ಕೂಡ ದೃಢವಾಗಿ `I know it’ ಅಂತ ಹೇಳಲಾಗದಿರೋ ಅನಿಶ್ಚಿತತೆಯಲ್ಲಿ !
ಬ್ರಿಟಿಷ್ ಖಗೋಳ ವಿಜ್ಞಾನಿ ಫ್ರೆಡ್ಹಾಯ್ಲ್ 1950ರಲ್ಲೇ ಹೇಳಿದ್ದ; ಭೂಮಿಯಾಚೆ ಲೈಫ್ ಇರೋದು ಅನುಮಾನ ಅಂತ. ಬದುಕಿನ ಸೃಷ್ಟಿಗೆ ಬೇಕಾದಂತಹ ವಸ್ತುಗಳೆಲ್ಲವೂ ಭೂಮಿಯಲ್ಲಿ ಅತ್ಯಂತ ನಿಖರವಾದ ಪ್ರಮಾಣದಲ್ಲಿ ಇರೋದ್ರಿಂದಲೇ ಇಲ್ಲಿ ನಾವೆಲ್ಲಾ ಹುಟ್ಟಿದ್ದೇವೆ; ಕಾರ್ಬನ್ ಮತ್ತು ಆಕ್ಸಿಜನ್ ಅಳತೆಯಲ್ಲಿ ಸ್ವಲ್ಪ ಏರುಪೇರಾಗಿದ್ದಿದ್ದರೂ, ಇವತ್ತು ಅನ್ಯಗ್ರಹ ಜೀವಿಗಳ ಬಗ್ಗೆ ಮಾತಾಡೋದಿಕ್ಕೆ ನಾವು ಇರುತ್ತಿರಲಿಲ್ಲ ಅಂತವನು ಹೇಳಿದ್ದ. ಭೂಮಿ ಹೀಗೆ ಸೃಷ್ಟಿಯಾಗಿರೋದೇ ವಿಶ್ವದ ಹುಟ್ಟಿನ ಅದ್ಭುತಗಳಲ್ಲೊಂದು
ಹೊರಗಿನ ವಿಶ್ವವನ್ನು ಬಿಡಿ, ನಮ್ಮ ಸೌರಮಂಡಲದಲ್ಲೇ ಬೇರೆಲ್ಲಾದರೂ ನಮ್ಮಂತಹ ಅಥವಾ ನಮ್ಮ ಹುಟ್ಟಿಗೆ ಕಾರಣವಾದಂತಹ ಜೀವಿಗಳು ಇವೆಯೇ ಅನ್ನೋದನ್ನು ಹುಡುಕೋದಿಕ್ಕೆ 1960ರ ದಶಕದಲ್ಲೇ ನೌಕೆಗಳು ಗಗನಕ್ಕೆ ಹಾರಿದ್ದವು. 1976ರಲ್ಲಿ ವೈಕಿಂಗ್-1 ಹಾಗೂ ವೈಕಿಂಗ್-2 ನೌಕೆಗಳು ಮಂಗಳನ ಮಣ್ಣನ್ನು ಜಾಲಾಡಿದ್ದವು. ಉಹುಂ, ಒಂದೇ ಒಂದು ಬ್ಯಾಕ್ಟೀರಿಯಾದ ಸುಳಿವೂ ಕಂಡಿರಲಿಲ್ಲ. ಮೊನ್ನೆ ಮಾರ್ಸ್ನ ಮೇಲಿಳಿದ ಇನ್ನೊಂದು ನೌಕೆಯೂ ಆ ಗ್ರಹದ ಮೇಲೆ ಓಡಾಡಿತ್ತು. ಈಚೆಗೆ ಮಂಗಳ ನಮ್ಮ ಹಿತ್ತಲಿಗೇ ಬಂದಿದ್ದಾಗಲೂ, ಜಗತ್ತಿನ ಟೆಲಿಸ್ಕೋಪುಗಳೆಲ್ಲವೂ ಅದರ ಮೈಸವರಿದ್ದವು. ಎಲ್ಲಿಯೂ ಜೀವಿಗಳ ಗುರುತು ಕಂಡಿರಲಿಲ್ಲ.
ಆದರೆ ಅಷ್ಟಕ್ಕೇ ಮಂಗಳ ಬಂಜೆ ಅಂತ ಹೇಳಲಾಗುವುದಿಲ್ಲ ! ಯಾಕೆಂದರೆ, ಮಂಗಳ ಗ್ರಹದ ಮೇಲೆ ನಮ್ಮಲ್ಲಿರುವ ಹಾಗೇ ಭಿನ್ನಾತಿಭಿನ್ನ ವಾತಾವರಣದ ಪ್ರದೇಶಗಳಿವೆ. ಅಲ್ಲೆಲ್ಲಾದರೂ, ಒಂದು ಕಡೆಯಾದರೂ, ನಮ್ಮ ಬ್ಯಾಕ್ಟೀರಿಯಾಗಳನ್ನು ಹೋಲುವಂಥ ಜೀವಿಗಳಿರಬಹುದು ಅನ್ನೋದು ಎಲ್ಲರ ಭಯಮಿಶ್ರಿತ ನಿರೀಕ್ಷೆ ! ಮಂಗಳ ಬಿಟ್ಟರೆ, ನಮ್ಮ ಸೌರಮಂಡಲದಲ್ಲಿ ಬದುಕನ್ನು ಬೆಂಬಲಿಸಬಲ್ಲಂಥ ಗುಣಗಳಿರೋದು ಗುರುಗ್ರಹದ ಉಪಗ್ರಹ ಯೂರೋಪಾ ಮತ್ತು ಶನಿಯ ದೈತ್ಯ ಚಂದ್ರ, ಟೈಟನ್ಗೆ ಮಾತ್ರ. ಯೂರೋಪಾ ಮೇಲ್ಪದರದಡಿಯಲ್ಲಿ ಅಗಾಧ ಪ್ರಮಾಣದ ದ್ರವವಿದೆಯಂತೆ. ಅದು ನೀರೇ ಇರಬಹುದು ಅನ್ನೋದು ಒಂದು ಅನುಮಾನ. ಅಲ್ಲಿ ಆಕ್ಸಿಜನ್ ಇಲ್ಲ, ಸೂರ್ಯನ ಬೆಳಕೂ ವಿಪರೀತ ಮಂದ. ಆದರೆ ನಮ್ಮಲ್ಲೇ ಆಮ್ಲಜನಕ ಹಾಗೂ ಬೆಳಕು ದುರ್ಲಭವಾದಂಥ ಸಾಗರ ತಳಗಳಲ್ಲಿ ಕೆಲವು ಸೂಕ್ಷ್ಮ ಜೀವಿಗಳು ಬದುಕಿಲ್ಲವೆ? ಅಂಥವೇ ಯೂರೋಪಾದ ಅಂತರ್ಜಲದಲ್ಲೂ ಯಾಕಿರಬಾರದು?
ಇನ್ನು ಟೈಟನ್ನ ವಾತಾವರಣದಲ್ಲಿರೋದು ಬರೀ ನೈಟ್ರೋಜನ್ ಹಾಗೂ ಮೀಥೇನ್ ಗ್ಯಾಸುಗಳಾದರೂ, ಆ ಗ್ರಹದ ಮೇಲ್ಮೈ ನಮ್ಮ ಭೂಮಿಯ ಹಾಗೇ ಇದೆ; ವಿಶಾಲವಾದ ಭೂಪ್ರದೇಶ, ನಡುನಡುವೆ ಅಳತೆಗೆ ಸಿಗದಷ್ಟು ವಿಸ್ತಾರವಾದ ಸಾಗರಗಳು! ಆದರೆ, ಈ ಸಾಗರಗಳು ನೀರಿನವಲ್ಲ; ಪೆಟ್ರೋಲಿಯಂದು ! ಈ ಸಾಗರಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಬದುಕಲಾರವು ಅನ್ನೋದನ್ನು ಒಪ್ಪಿಕೊಳ್ಳೋದಿಕ್ಕೆ ವಿಜ್ಞಾನಿಗಳು ಸಿದ್ಧರಿಲ್ಲ.
ಹುಡುಕಾಟ ನಡೆದೇ ಇದೆ. 1992ರಲ್ಲಿ, ನೂರು ಮಿಲಿಯನ್ ಡಾಲರ್ ವೆಚ್ಚದಲ್ಲಿ, ನಾಸಾ ಶುರು ಮಾಡಿದ್ದ ಹತ್ತು ವರ್ಷಗಳ  SETI [search for extra-terrestial intelligence] ಅನ್ನೋ ಯೋಜನೆ, ಈಗ ಸುಮಾರು ಒಂದು ಸಾವಿರ ಸೌರ ಮಂಡಲಗಳಿಂದ ಅಕ್ಷರಶಃ ಹುಚ್ಚು ಹಿಡಿಯುವಷ್ಟು ಮಾಹಿತಿಗಳನ್ನು ಸೆಳೆದು, ಕ್ರೋಢೀಕರಿಸಿಕೊಡಿದೆ. ನಿಖರವಾದ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಮಂಗಳ, ಯೂರೋಪಾ ಹಾಗೂ ಟೈಟನ್ ಹೊರತು ಪಡಿಸಿದಂತೆ, ನಮ್ಮ ಸೌರವ್ಯೂಹದ ಉಳಿದ ಯಾವ ಗ್ರಹಗಳಲ್ಲೂ ಜೀವಿಗಳಿರಲಾರವು ಅನ್ನೋ ತೀಮರ್ಾನಕ್ಕಂತೂ ಸದ್ಯಕ್ಕೆ ರಲಾಗಿದೆ. ಯಾಕೆಂದರೆ, ಸೂರ್ಯನಿಗೆ ವಿಪರೀತ ಹತ್ತಿರವಿರುವ ಬುಧ ಹಾಗೂ ಶುಕ್ರಗಳಲ್ಲಿ ಹಿಂದೆಂದಾದರೂ ಜೀವ ಇದ್ದಿದ್ದರೂ ಅದೀಗ ಭಸ್ಮವಾಗಿ ಹೋಗಿರೋದು ಗ್ಯಾರಂಟಿ. ಇನ್ನು, ಮಂಗಳನಾಚೆ ಇರುವ ಗ್ರಹಗಳೆಲ್ಲವೂ ಬರೀ ಗ್ಯಾಸಿನ ಗೋಳಗಳು! ಪ್ಲೂಟೋ ಹೊರತುಪಡಿಸಿದಂತೆ ಇವುಗಳನ್ನೆಲ್ಲಾ ಕರೆಯೋದೇ ಗ್ಯಾಸ್ ಬಕಾಸುರರು ಅಂತ.
ಮಂಗಳನವರೆಗಿನ ನಾಲ್ಕು ಗ್ರಹಗಳು ಕಲ್ಲು-ಮಣ್ಣಿನಿಂದಾಗಿರುವ ಪುಟ್ಟ ಗೋಳಗಳಾದರೆ, ಅಲ್ಲಿಂದಾಚೆಗಿನ ಗೋಳಗಳಲ್ಲಿ ತುಂಬಿರೋದು ಬರೀ ಹೈಡ್ರೋಜನ್ ಹಾಗೂ ಹೀಲಿಯಂ. ಅವು ಯಾಕೆ ಹಾಗೆ ಉಳಿದಿವೆ ಅನ್ನೋದಿಕ್ಕೆ ಕಾರಣವಿದೆ! ಸೌರಮಂಡಲ ಹುಟ್ಟಿದ್ದೇ ಒಂದು ಭಯಂಕರ ಗ್ಯಾಸು ಹಾಗೂ ಧೂಳಿನ ಮನೆಯಾಗಿ. ಹುಟ್ಟಿದ ಕ್ಷಣಗಳಲ್ಲಿ ಭೂಮಿಯೂ ಸೇರಿದಂತೆ ಎಲ್ಲವೂ ಗ್ಯಾಸುಮಯವಾಗಿದ್ದವು. ಆದರೆ ದಿನಗಳೆದಂತೆ ಸೂರ್ಯನ ಬಿಸಿಗೆ ಹತ್ತಿರವಾದ ಗ್ರಹಗಳೆಲ್ಲವೂ ತಮ್ಮ ಹೈಡ್ರೋಜನ್ ಹಾಗೂ ಹೀಲಿಯಂ ಅಂಶಗಳನ್ನು ಕಳೆದುಕೊಂಡು ಕಲ್ಲಾಗಿ ಉಳಿದರೆ, ಅವನ ತಾಪ ತಟ್ಟದಂಥವು ಗ್ಯಾಸುಗಳಾಗೇ ಉಳಿದುಬಿಟ್ಟವು. ವೈತುಂಬಾ ಗ್ಯಾಸೇ ಇರೋದ್ರಿಂದ ಅವುಗಳು ಸೈಜೂ ದೊಡ್ಡದು. ಉದಾಹರಣೆಗೆ, ಗುರುವಿನ ವ್ಯಾಸ ಭೂಮಿಗಿಂತ ಹನ್ನೊಂದು ಪಟ್ಟು ಹೆಚ್ಚು!
ಈ ಗುಂಪಿನಲ್ಲಿ ತೀರಾ ಹೊರಗಿನವನ ಹಾಗೆ ಉಳಿಯೋದು ಪ್ಲೂಟೋ ಅನ್ನೋ ಗೋಲಿ ಮಾತ್ರ. ಹಿಂದೊಮ್ಮೆ ಅದು ನೆಪ್ಚೂನ್ನ ಉಪಗ್ರಹವಾಗಿದ್ದಿರ ಬೇಕು ಅನ್ನೋ ಅನುಮಾನವಿದೆ.

ಎಟಿಎಂ ಕೆಲಸ ಮಾಡೋದು ಹೀಗೆ !

ಇಂಡಿಯಾ ‘ಹಳ್ಳಿಗಳ ದೇಶ’ವೇ ಇರಬಹುದು; ಆದರೆ ಇಲ್ಲೂ ಎಟಿಎಂಗಳಿವೆ; ಅದೇ ಹೆಗ್ಗಳಿಕೆ!
                             ATM
ಇವತ್ತು ಎಲ್ಲ ನಗರಗಳಲ್ಲೂ ಎಟಿಎಂ ಹಬ್ಬಿರುವ ಪರಿ ನೋಡಿದರೆ, ಇಂಥದ್ದೊಂದು ಬೆಳವಣಿಗೆಯನ್ನು ಹತ್ತೇ ಹತ್ತು ವರ್ಷದ ಹಿಂದೆ ನಾವು ಕಲ್ಪಿಸಿಕೊಳ್ಳಲಿಕ್ಕಾದರೂ ಸಾಧ್ಯವಿತ್ತಾ ಅನ್ನುವುದು ಅನುಮಾನ.
ಮಧ್ಯಾಹ್ನ ಎರಡು-ಎರಡೂವರೆಯ ಹೊತ್ತಿಗೆ ಬ್ಯಾಂಕನ ಟೈಮು ಮುಗಿದುಬಿಟ್ಟರೆ, ಆಮೇಲೆ ಬೇಕಾಗಬಹುದಾದ ತುರ್ತು ಹಣಕ್ಕೆ `ದೊಡ್ಡ’ ಗೆಳೆಯರ ಮರ್ಜಿಯೇ ಗತಿ ಅನ್ನುವಂತಿತ್ತು (ಆಗ `ದೊಡ್ಡ’ ಗೆಳೆಯರು ಅಂದರೆ, ಪರ್ಸಿನಲ್ಲಿ ನಮಗಿಂತ ಹೆಚ್ಚು ದುಡ್ಡಿಟ್ಟುಕೊಂಡಿರುವವರು!) ಈಗ ಹಾಗಿಲ್ಲ; ಎಟಿಎಂ ಎಂಬುದು `ಆಲ್ ಟೈಮ್ ಮನಿ’ ಅಂತಲೇ ಆಗಿ ಹೋಗಿದೆ. ವಾಸ್ತವವಾಗಿ ಎ.ಟಿ.ಎಂ. ಅಂದ್ರೆ ಅಟೋಮೆಟಿಕ್ ಟೆಲ್ಲರ್ ಮೆಶಿನ್.

                                      ATM
ಯಾವ ಹೊತ್ತಿನಲ್ಲಿ ಬೇಕಿದ್ದರೂ, ಯಾವ ನಗರದಲ್ಲಿ ಬೇಕಿದ್ದರೂ, ನಮ್ಮ ಅಕೌಂಟಿನಿಂದ ದುಡ್ಡು ತೆಗೆಯುವ ವ್ಯವಸ್ಥೆಯೇ, ಎಟಿಎಂನ ಜಾಲ. ಇದು, ಅಂತರ್ಜಾಲ ಯುಗದ ಅತಿಮುಖ್ಯವಾದ ಆವಿಷ್ಕಾರಗಳಲ್ಲೊಂದು.
ನಮ್ಮ ಬ್ಯಾಂಕಿನವರು ನಮಗೊಂದು `ಎಟಿಎಂ ಕಾರ್ಡ್’ ಅಥವಾ `ಕ್ರೆಡಿಟ್ ಕಾರ್ಡ್’ ಕೊಟ್ಟಿರುತ್ತಾರಲ್ಲಾ, ಅದರ ಹಿಂಬದಿಯಲ್ಲಿ ದಟ್ಟ ಕಂದುಬಣ್ಣದ ಒಂದು ಮೆಟಾಲಿಕ್ ಪಟ್ಟಿಯಿರುತ್ತದೆ. ಅದರ ಹೆಸರು, `ಮ್ಯಾಗ್ನೆಟಿಕ್ ಸ್ಟ್ರಿಪ್’. ನಮ್ಮ ಅಕೌಂಟಿನ ಸವ
ಸ್ತ ಮಾಹಿತಿಯನ್ನೂ ಹೊಂದಿರುವ ಜಾತಕ ಅದು. ನಾವು ಒಂದು ಎಟಿಎಂ ಬೂತಿನ ಒಳಹೊಕ್ಕು, ಮಷೀನಿನೊಳಗೆ ನಮ್ಮ ಕಾರ್ಡನ್ನು ತೂರಿಸಿದ ತಕ್ಷಣ, ಈ ಮಷೀನಿನಲ್ಲಿರುವ ಕಂಪ್ಯೂಟರಿನಿಂದ ಈ ಮಾಹಿತಿಗಳೆಲ್ಲವೂinternet ಮೂಲಕ ತನ್ನ ಅಕೌಂಟುಗಳ ನಿರ್ವಹಣೆಗೆಂದೇ ನಮ್ಮ ಬ್ಯಾಂಕು ತೆರೆದಿಟ್ಟಿರುವ ಇನ್ನೊಂದು ಕಂಪ್ಯೂಟರನ್ನು ತಲುಪುತ್ತದೆ. ನಾವು ನಮ್ಮ `ಪರ್ಸನಲ್ ಐಡೆಂಟಿಫಿಕೇಷನ್ ನಂಬರ್’ (PIN) ಅಂದರೆ ಸೀಕ್ರೆಟ್ ಕೋಡನ್ನು ಒತ್ತಿದ ಮೇಲೆ, ಬ್ಯಾಂಕಿನ ಕಂಪ್ಯೂಟರು ಆ ಕೋಡನ್ನು ತನ್ನ ಹತ್ತಿರವಿರುವ ಮಾಹಿತಿ ಹೊಂದಿಸಿ ನೋಡಿ, ಅದು ತಾಳೆಯಾದರೆ ಮಾತ್ರ ಮುಂದಿನ ವಹಿವಾಟಗೆ ಒಪ್ಪಿಗೆ ಕೊಡುತ್ತದೆ. ಇಲ್ಲವಾದರೆ ಇಲ್ಲ.
ಇದು, ಎಟಿಎಂ ಕೆಲಸ ಮಾಡುವ ವಿಧಾನ. ಇಲ್ಲಿ, ಎಟಿಎಂನ ಕಂಪ್ಯೂಟರು ಅಂತರ್ಜಾಲದ ಮೂಲಕ ಬ್ಯಾಂಕಿನ ಕಂಪ್ಯೂಟರ್ ಜೊತೆ ಸಂಪರ್ಕ ಪಡೆಯುವುದಕ್ಕೆ ಅನೇಕ ಕಡೆಗಳಲ್ಲಿ ಹೈಸ್ಪೀಡ್ ಕೇಬಲ್ಗಳನ್ನು ಜೋಡಿಸಲಾಗಿರುತ್ತದೆ. ಕೆಲವು ಎಟಿಎಂಗಳಲ್ಲಿ ನೇರವಾಗಿ ಸೆಟಲೈಟ್ ಮೂಲಕ ಸಂದೇಶ ವಿನಿಮಯ ಮಾಡಿಕೊಳ್ಳುವ ವಿಸ್ಯಾಟ್ ಡಿಷ್ಗಳನ್ನೂ ಹಾಕಲಾಗಿರುತ್ತದೆ.
ಇದೆಲ್ಲಾ ಸರಿ, ಆದರೆ ದುಡ್ಡನ್ನು ಎಣಿಸಿಕೊಡುವ `ಬುದ್ಧಿ’ ಎಟಿಎಂಗೆಲ್ಲಿಂದ ಬರುತ್ತದೆ? ಈ ಕೆಲಸ ಮಾಡುವುದು `ಬುದ್ಧಿ’ಯಲ್ಲ; `ಎಲೆಕ್ಟ್ರಿಕ್ ಐ’ ಅನ್ನುವ ಒಂದು ಮಾಯಾಕಣ್ಣು ಮತ್ತು `ಸೆನ್ಸರ್’ ಅನ್ನುವ ಒಂದು ಎಣಿಕಾ ಯಂತ್ರ! ಇವೆರಡೂ ಸೇರಿ, ನೋಟಗಳ ಬೆಲೆ ಹಾಗೂ ಅವುಗಳ  `ದಪ್ಪ’ವನ್ನಾಧರಿಸಿ ಲೆಕ್ಕ ಮಾಡುತ್ತವೆ. ನೋಟಗಳು ಬಿಡಿ-ಬಿಡಿಯಾಗಿರದೆ, ಒಂದರೊಡನೊಂದು ಸೇರಿ ಕೊಂಡಿದ್ದರೆ, ಅಂಥ ನೋಟುಗಳೆಲ್ಲಾ `ರಿಜೆಕ್ಟ ಬಿನ್’ಗೆ ಬೀಳುತ್ತವೆ. ಅಂದಹಾಗೆ, ಎಟಿಎಂ ನಮಗೆ ಕೊಡುವ ದುಡ್ಡೆಲ್ಲವೂ, ಅದರೆ ಬುಡದಲ್ಲಿರುವ ತಿಜೋರಿಯೊಂದರೊಳಗೆ ಇರುತ್ತದೆ.
ಇಲ್ಲಿ, ಮಷೀನಿನಿಂದ ಹೊರಬಿದ್ದ ಪ್ರತಿಯೊಂದು ನೋಟೂ ಎಟಿಎಂ ಸೆಂಟರಿನ ಅಕೌಂಟನಿಂದ ನಮಗೆ ಸಿಗುವಂಥದ್ದು. ಮಷೀನಿನೊಳಗೆ ನಾವು ಕಾರ್ಡು ತೂರಿಸಿ ಕೀಗಳನ್ನು ಒತ್ತಿದ ತಕ್ಷಣ, ನಮ್ಮ ಬ್ಯಾಂಕಿನ ನಮ್ಮ ಅಕೌಂಟಿನಿಂದ ಅಂತಜರ್ಾಲದ ಮೂಲಕವೇ ಎಟಿಎಂ ಸೆಂಟರಿನ ಅಕೌಂಟಿನ ದುಡ್ಡು ‘ಟ್ರಾನ್ಸಫರ್’ ಆಗಿಬಿಡುತ್ತದೆ. ಎರಡು ಕಡೆಯೂ ಲೆಕ್ಕ ದಾಖಲಾಗುತ್ತದೆ.

`ಇ’-ದೆಂಥಾ ಲೋಕವಯ್ಯ…!


 `ಇ’-ದು ಕಂಪ್ಯೂಟರ್ ಏಜ್. ಸ್ಲೇಟು ಬಳಪ ಹಿಡಿಬೇಕಾದ ಪುಟಾಣಿ ಕೈಗಳೇ ಕೀಲಿಮಣೆ ಹಿಡ್ಕೊಂಡು ಅಕ್ಷರಾಭ್ಯಾಸ ಮಾಡ್ತಿವೆ. ಅಂದ ಮೇಲೆ ಇದನ್ನೆಲ್ಲಾ ಅರೆದು ಕುಡಿದಿರೋ ಸೀನಿಯರ್ಸ್ ಹೊಸ್ ಹೊಸ್ದಾಗಿ ಏನಾನ್ನಾದರು ಕಂಡು ಹಿಡ್ದೀರ್ಲೇ ಬೇಕು ಅಲ್ವ.
ಇಂಥದ್ದೇ ಕುತೂಹಲದಿಂದ ಅಂರ್ಜಾಲ ತಡಕಾಡಿದಾಗ ಊಹೆ ನಿಜವಾಯಿತು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಕಂಪ್ಯೂಟರ್ ಬಳಕೆಯ ಈ ಪರಿ ಅಚ್ಚರಿ ಮೂಡಿಸುವಂತಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರೇ `ಟಾಪ್ ಮೋಸ್ಟ್’ ಅಂದ್ಕೊಂಡ್ರು ಇಲ್ಲಿನ ಪ್ರತಿಭೆಗಳೆಲ್ಲಾ ಪಲಾಯನಗೊಂಡಿರುವ ಪರಿಣಾಮ ಅವರ ಸಂಶೋಧನೆ ವಿದೇಶಿ ನೆಲದಲ್ಲಿ ಫಲ ನೀಡುತ್ತಿದೆ ಎನ್ನುವುದು ಕಹಿ ವಾಸ್ತವ.

* ಕಂಪ್ಯೂಟರ್ ಇತಿಹಾಸ

ಆರಂಭದ ದಿನಗಳಲ್ಲಿ ಬಳಸುತ್ತಿದ್ದ ಕಂಪ್ಯೂಟರ್ಗೆ ಇಡೀ ಕೋಣೆಯನ್ನೇ ಮೀಸಲಿಡಬೇಕಿತ್ತು. ಏಕೆಂದರೆ ಅವು ಅಷ್ಟು ಬೃಹತ್ ಗಾತ್ರದಲ್ಲಿದ್ದವು. ಇವನ್ನು ಫಸ್ಟ್ ಜನರೇಷನ್ ಕಂಪ್ಯೂಟರ್ ಎನ್ನುತ್ತಾರೆ. (ಇಂಥ ಕಂಪ್ಯೂಟರ್ಗಳನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ಈಗಲೂ ನೋಡಬಹುದು)
ಬಳಿಕ ಬಂದದ್ದೇ ಟಾಪ್ ಟೇಬಲ್ ಕಂಪ್ಯೂಟರ್ಸ್. ಇವುಗಲನ್ನು ಹವಾನಿಯಂತ್ರಿತ ಕೋಣೆಗಳಲ್ಲಿ ಬಳಸಬೇಕು ಎಂಬ ಅಲಿಖಿತ ನಿಯಮ ಪಾಲಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಕೊಂಡೊಯ್ಯಬಹುದಾದ ಲ್ಯಾಪ್ಟಾಪ್ ಕಂಪ್ಯೂಟರ್ಸ್ ಬಂದವು. ಇದಾದ ಮೇಲೆ ಅಂಗೈಯಲ್ಲಿರಿಸಿಕೊಳ್ಳುವ ಪಾಮ್ಟ್ಯಾಪ್ ಬಳಕೆಗೆ ಬಂದಿತು. ಬಳಿಕ ಅಗೋಚರ ಕಂಪ್ಯೂಟರ್ ಹಾಗೂ ಇದೀಗ ಬಂದಿರುವುದೇ ಧರಿಸಿಕೊಳ್ಳಬಹುದಾದ ತಂತ್ರಜ್ಞಾನ. ಕಂಪ್ಯೂಟರ್ಸ್ ದಟ್ ವಿ ಕ್ಯಾನ್ ವೇರ್…!
ಆಶ್ಚರ್ಯ ಆಗುತ್ತೆ ಅಲ್ವ…!, ಬಟ್ಟೆ ಹಾಕ್ಕೊಳೋದು ಗೊತ್ತು. ಆದ್ರೆ ಇದೇನಿದು ಧರಿಸಿಕೊಳ್ಳುವ ಕಂಪ್ಯೂಟರ್. ಇದು ತಂತ್ರಜ್ಞಾನದ ಉತ್ಕೃಷ್ಟ ಹಂತ. ಟಿ-ಶರ್ಟ್ ಮಾದರಿಯಲ್ಲೇ ಇಂಥ ಕಂಪ್ಯೂಟರ್ ಶರ್ಟ್ಗಳನ್ನು ಮನುಷ್ಯರು ಧರಿಸಿಕೊಳ್ಳಬಹುದಾಗಿದೆ.

* ಎಲ್ಲಿದೆ ಇದು?

ಅಮೆರಿಕಾದ `ಜಾರ್ಜಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಸಂಶೋಧಕರು ಇಂಥ ಇ-ಶರ್ಟ್ ಕಂಡು ಹಿಡಿದಿದ್ದಾರೆ. ಭಾರತೀಯ ಮೂಲದ ಸಾಫ್ಟ್ವೇರ್ ವಿಜ್ಞಾನಿಯೊಬ್ಬರು ಇ-ಶರ್ಟಿನ ಜನಕ. ಗಾಜಿನೆಳೆ (ಫೈಬರ್ ಆಪ್ಟಿಕ್ಸ್) ನೇಯ್ದ ಬಟ್ಟೆಯಂತೆ ಧರಿಸುವ ಕಂಪ್ಯೂಟರ್ ಮದರ್ ಬೋಡರ್್ ಈ `ಇ-ಶರ್ಟ್’.
ಇದು ಕಂಪ್ಯೂಟರ್ ಮತ್ತು ಜವಳಿ ಕಲೆಗಳ ಸಂಗಮ. ಸಂವೇದಕ (ಸೆನ್ಸಾರ್)ಗಳನ್ನು ಅಳವಡಿಸುವ ಮೂಲಕ ಇದನ್ನು ಧರಿಸಿದ ವ್ಯಕ್ತಿಯ ಹೃದಯ ಬಡಿತ, ದೇಹದ ಉಷ್ಣತೆ ಇತರೆ ವಿವರಗಳನ್ನು ತಿಳಿಯಬಹುದು. ಸೊಂಟದಲ್ಲಿ ಧರಿಸಿದ ವಿನಿ ಕಂಪ್ಯೂಟರ್ ಮೂಲಕ ಅವುಗಳ ವಿಶ್ಲೇಷಣೆ ನಡೆಸಿ ಮಾಹಿತಿ ಸಂಗ್ರಹಿಸಬಹುದು. ಅಮೆರಿಕಾದ ಮಿಲಿಟರಿಯಲ್ಲಿ ಇ-ಶಟರ್್ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಆಯ್ದ ಸೈನಿಕರಿಗೆ ಇದನ್ನು ಧರಿಸಿಕೊಳ್ಳುವ ಅನುಮತಿ ನೀಡಲಾಗಿದೆ. ಆ ಮೂಲಕ ಇದರ ಪ್ರಯೋಜನಗಳ ಅಧ್ಯಯನ ನಡೆಸಲಾಗುತ್ತಿದೆ. ಸೈನಿಕ ಇಂಥ ಜಾಕೆಟ್ ಧರಿಸಿಕೊಂಡು ಯುದ್ಧ ಭೂಮಿಗೆ ತೆರಳಿ ಅಲ್ಲಿ ಅನಾಹುತ ಸಂಭವಿಸಿ ಗಾಯಗೊಂಡರೆ ಆಗ ಆತನ ದೇಹ ಸ್ಥಿತಿಯನ್ನು ಮಿಲಿಟರಿ ಕ್ಯಾಂಪಿನಲ್ಲಿರುವ ವೈದ್ಯರು ತಿಳಿದುಕೊಳ್ಳಬಹುದು. ಜತೆಗೆ ಆತನ ದೇಹ ತರುವಷ್ಟರಲ್ಲಿ ಚಿಕಿತ್ಸೆಗೆ ಪೂರ್ವ ಸಿದ್ಧತೆ ನಡೆಸಬಹುದು. ಚಿಕಿತ್ಸೆ ನೀಡಲು ಇ-ಶಟರ್್ನಲ್ಲಿರುವ ಸೂಕ್ಷ್ಮ ತಂತು ಹಾಗೂ ಮಿನಿ ಆಂಟನಾ ಇದಕ್ಕೆ ಸಹಕಾರಿ. ಇದರಿಂದ ಸೈನಿಕನ ಪ್ರಾಣ ಉಳಿಸುವ ಅವಕಾಶ ದುಪ್ಪಟುಗೊಳ್ಳುತ್ತದೆ ಎನ್ನುವುದು ವಿಜ್ಞಾನಿಗಳ ಹಂಬಲ.

* ಇ-ಇಂಕ್:

ಈ ಎಲೆಕ್ಟ್ರಾನಿಕ್ ಶಾಹಿ ಸೂಕ್ಷ್ಮಾತಿಸೂಕ್ಷ್ಮ ಗೋಲಗಳನ್ನು (ಕೂದಲೆಗಳೆಗಳಿಗಿಂತಲು ಸಾವಿರ ಪಟ್ಟು ಚಿಕ್ಕದಾದ ಗೋಲಗಳು) ಒಳಗೊಂಡಿದೆ. ಪ್ರತಿಯೊಂದು ಗೋಲವು ಅರ್ದ ಬಿಳಿ, ಅರ್ದ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಇಂಥ ಪ್ರತಿ ಗೋಲವನ್ನು ವಿದ್ಯುತ್ ಬಳಸಿ ಚಳಿ ಅಥವಾ ಕಪ್ಪು ಬಣ್ಣಕ್ಕೆ ಬದಲಿಸಬಹುದು. ಈ ಬಹು ಸೂಕ್ಷ್ಮ ಗೋಲ ರೂಪದ ಪುಡಿಯನ್ನು ವಿಶಿಷ್ಟವಾದ ಇ – ಪೇಪರ್ (ಎಲೆಕ್ಟ್ರಾನಿಕ್ ಕಾಗದ) ಮೇಲೆ ಲೇಪಿಸಬಹುದು. ಈ ಕಾಗದ ಉದ್ದ ಹಾಗೂ ಅಡ್ಡಲಾಗಿ ಸಾವಿರಾರು ಸೂಕ್ಷ್ಮ ತಂತಿಗಳನ್ನು ಹೊಂದಿರುತ್ತದೆ. ಇವುಗಳ ಮೇಲೆ ಇ-ಇಂಕ್ ಸವರಿ ವಿದ್ಯುಚ್ಛಕ್ತಿಯನ್ನು  ನಿರ್ದಿಷ್ಟ ತಂತಿಗಳಿಗೆ ಹರಿಸಿದಾಗ ಇ – ಪೇಪರ್ನಲ್ಲಿ ಅಕ್ಷರಗಳು ಮತ್ತು ಚಿತ್ರಗಳು ಮೂಡುತ್ತವೆ.

* ಇ-ಪುಸ್ತಕ

ಅಮೆರಿಕಾದ ಮೇಸಾಚ್ಯೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ `ಮೀಡಿಯಾ ಲ್ಯಾಬ್’ನಲ್ಲಿ `ದ ಲಾಸ್ಟ್ ಬುಕ್’ ಎಂಬ ಸಂಶೋಧನೆ ನಡೆಸಲಾಗುತ್ತಿದೆ.
ಅದರಲ್ಲೇನು ವಿಶೇಷ ಎಂದು ಮೂಗು ಮುರಿಯಬೇಡಿ. ಕಾರಣ ಇಲ್ಲಿ ನಡೆಯುತ್ತಿರುವ ಸಂಶೋಧನೆ ಫಲವಾಗಿ ಮುಂದಿನ ದಿನಗಳಲ್ಲಿ ಬದಲಾವಣೆಯ ಕ್ರಾಂತಿಯೇ ಸಂಭವಿಸಲಿದೆ.
ಇದು ಸಂಪೂರ್ಣಗೊಂಡ ಬಳಿಕ ಭವಿಷ್ಯದಲ್ಲಿನ ಎಲ್ಲ ಪುಸ್ತಕಗಳನ್ನು (ಬೇಕಾದರೆ ಪುಸ್ತಕಾಲಯಗಳನ್ನು) ಸಂಗ್ರಹಿಸಿ ಸಿಡಿ ರೂಪದಲ್ಲಿ ಇಡಬಹುದು. ಕಾರ್ಡಲೆಸ್ ರೂಪದಲ್ಲಿಯೂ ಬೇಕಾದರೆ ಒಂದೆಡೆಯಿಂದ ಮತ್ತೊಂದಡೆ ಕೊಂಡೊಯ್ಯಬಹುದು. ದೀಪ ಇಲ್ಲದೆ ಓದಬಹುದು. ಓದುವವರು ಮಂಪುರ ಬಂದು ನಿದ್ರಿಸಿದರೆ ಅದೇ ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ.

ಇನ್ಮುಂದೆ ಮೌಸ್ ಸದ್ದು ಮಾಡುವುದಿಲ್ಲ…

Magic track pad
ಕಂಪ್ಯೂಟರ್ ಜತೆಗೆ ಕೀ ಬೋರ್ಡ್, ಮೌಸ್, ಯುಪಿಎಸ್ ಇದ್ದೇ ಇರಬೇಕೆಂಬುದೇನೋ ಸರಿ. ಆದರೆ ಕಾಲ ಬದಲಾದಂತೆಲ್ಲ ಎಲ್ಲವೂ ಬದಲಾಗುತ್ತದೆ. ಈಗ ಏನಿದ್ದರೂ ಆಲ್ ಇನ್ ಒನ್ !
ಗಣಪತಿಯ ಪಕ್ಕ ಇಲಿಯಂತೆ ರಾರಾಜಿಸುತ್ತಿದ್ದ ಮೌಸ್ ಮತ್ತು ಕಂಪ್ಯೂಟರ್ನ ಸಂಬಂಧ ಇನ್ನು ಕಡಿದು ಹೋಗಲಿದೆ. ಅರ್ಥಾತ್ ಮೌಸಿಲ್ಲದೇನೇ ಗಣಕಯಂತ್ರವನ್ನು ನಿರ್ವಹಿಸಬಹುದಾಗಿದೆ. ಅದು ಹೇಗೆ ಬಲ್ಲಿರಾ ? ಅದೇ ಆ್ಯಪಲ್ ಕಂಪನಿ ಇಲ್ವಾ, ಅದು ಹೊಸದೊಂದು ಕಂಪ್ಯೂಟರ್ನಂಥ ‘ಮ್ಯಾಜಿಕ್ ಟ್ರ್ಯಾಕ್ಪ್ಯಾಡ್’ ಎಂಬ ಉಪಕರಣವೊಂದನ್ನು ಅಭಿವೃದ್ಧಿಪಡಿಸಿದೆ. ಈ ಟ್ರ್ಯಾಕ್ ಪ್ಯಾಡ್ನಲ್ಲಿ ಕೈ ಬೆರಳಿನ ಕೈಚಳಕದಲ್ಲೇ ಡೆಸ್ಕ್ಟಾಪ್ ಸೇರಿದಂತೆ ಎಲ್ಲ ಕೆಲವನ್ನೂ ಮಾಡಬಹುದು. ಇದೊಂದು ಬ್ಯಾಟರಿ ಆಧಾರಿತ ಟಚ್ಪ್ಯಾಡ್. ಇದು ಮೌಸ್ನ ಕೆಲಸ ಮಾಡುತ್ತೆ. ಇದನ್ನು ಗ್ಲಾಸ್ ಮತ್ತು ಅಲ್ಯುಮಿನಿಯಂನಿಂದ ತಯಾರಿಸಲಾಗಿದ್ದು, ನೋಟ್ಪ್ಯಾಡ್ನಂತಿದೆ. ಬ್ಲ್ಯೂಟೂಥ್ ಮೂಲಕ ಆ್ಯಪಲ್ನ ಮ್ಯಾಕ್ ಪ್ಯಾಡ್ನ ಬೆಲೆ ಆನ್ಲೈನ್ನಲ್ಲಿ 69 ಡಾಲರ್ಗಳು (ಅಂದಾಜು 3250 ರೂ.) ಐಫೋನ್ ಮತ್ತು ಐಪ್ಯಾಡ್ನ ಅನುಭವ ಉಳ್ಳವರಿಗೆ ಇದು ಸಲೀಸು. ಇದು ಕಂಪ್ಯೂಟರ್ನಿಂದ 10 ಮೀಟರ್ ಅಂತರದಲ್ಲಿದ್ದರೂ ಕಾರ್ಯನಿರ್ವಹಿಸುತ್ತದೆ ಎನ್ನುತ್ತದೆ ಕಂಪನಿ.
ಮೌಸ್ನಿಂದಾಗುವ ಕಿರಿಕಿರಿಗಳು ಅಷ್ಟಿಷ್ಟಲ್ಲ. ಸಿಕ್ಕಾಪಟ್ಟೆ ಜಾಗಬೇಕು. ಕೈ ಕೂಡ ನೋಯುತ್ತೆ. ಪಕ್ಕದಲ್ಲಿದ್ದ ಪೇಪರ್ ಮತ್ತಿತರ ವಸ್ತುಗಳಿಗೆ ತಗುಲುತ್ತೆ ಎಂದೆಲ್ಲ ಗೊಣಗುವವರು ಇನ್ನು ಟ್ರ್ಯಾಕ್ ಪ್ಯಾಡ್ಗೆ ಮೊರೆ ಹೋಗಬಹುದು ಅಲ್ವೇ .

ಭಾನುವಾರ, ಅಕ್ಟೋಬರ್ 3, 2010

ದರ್ಬಾರ್ ಹಾಲ್ ನ ರತ್ನಖಚಿತ ಸಿಂಹಾಸನ

ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು [^], ಅರಮನೆ [^] ನಗರಿ ಕೂಡಾ ಹೌದು. ವಿಶ್ವವಿಖ್ಯಾತ ದಸರಾ [^] ಸಂಭ್ರಮದಲ್ಲಿ ಜಂಬೂ ಸವಾರಿ ಆಕರ್ಷಣೆ ಒಂದು ಬಗೆಯದಾದರೆ, ಮೈಸೂರು ಒಡೆಯರ ವೈಭವ ಸಾರುವ ಅರಮನೆ ರತ್ನಖಚಿತ ಚಿನ್ನದ ಸಿಂಹಾಸನ ನೋಡುವುದೇ ಒಂದು ರೀತಿ ಖುಷಿ.
ರತ್ನಖಚಿತ ಸಿಂಹಾಸನ: ಅರಮನೆಯ ದರ್ಬಾರ್ ಹಾಲ್‌ನಲ್ಲಿರುವ ರತ್ನ ಖಚಿತ ಸಿಂಹಾಸನವು ಆಕರ್ಷಕವಾಗಿದ್ದು, ಇದನ್ನು ದಸರಾ ಸಂದರ್ಭ ಮಾತ್ರ ಜೋಡಿಸಲಾಗುತ್ತದೆ. ಈ ಕಾರ್ಯಕ್ಕೆ ಮೈಸೂರಿಗೆ ಸಮೀಪದ ಗೆಜ್ಜಗಳ್ಳಿ ಗ್ರಾಮದಿಂದ ಆಯ್ದ ಕೆಲವರನ್ನು ಮಾತ್ರ ಕರೆತರಲಾಗುತ್ತದೆ.

ಇದು ತಲತಲಾಂತರದಿಂದ ನಡೆದು ಬಂದಿದೆ. ನವರಾತ್ರಿಯ ದಿನಗಳಲ್ಲಿ ಶ್ರೀಕಂಠದತ್ತನರಸಿಂಹರಾಜ ಒಡೆಯರ್ [^] ಆರೋಹಣ ಮಾಡಿ ಖಾಸಗಿ ದರ್ಬಾರ್ ನಡೆಸುತ್ತಾರೆ. ಈ ಸಂದರ್ಭ ಹಿಂದಿನ ಕಾಲದ ರಾಜವೈಭವ ಮರುಕಳಿಸಿದ ಅನುಭವವಾಗಿ ಬಿಡುತ್ತದೆ.

ಈ ಸಿಂಹಾಸನವು ಪುರಾತನವಾದದ್ದೆಂದು ಹೇಳಲಾಗಿದೆ. ಇದಕ್ಕೊಂದು ಚರಿತ್ರೆಯೂ ಇದೆ. ಪಾಂಡವರ ಕಾಲದೆನ್ನಲಾಗಿದ್ದು, ಆ ಕಾಲದಲ್ಲಿ ಕಂಪುಲ ರಾಜನು ಇದನ್ನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದನು ಎನ್ನಲಾಗಿದೆ.

1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಠಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂದು ಅದರಂತೆ ಹೊರತೆಗೆದು 150 ವರ್ಷಗಳ ಕಾಲ ಆನೆಗೊಂದಿಯಲ್ಲಿ ಅಲಂಕರಿಸಿದರೆಂದೂ ಬಳಿಕ ವಿಜಯನಗರದ ಅವನತಿಯ ವೇಳೆಗೆ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಭಾರಿಯ ಅರಮನೆಗೆ ಸಾಗಿಸಲಾಯಿತೆಂದು ಹೇಳಲಾಗಿದೆ.

ಆ ಬಳಿಕ 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗರಾಜುಲುರನ್ನು ತಲಕಾಡಿಗೆ ಓಡಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. 1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಲಾಯಿತು.

ಸಿಂಹಾಸನವು ಚಿನ್ನದ ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದೆ. ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನು ಹತ್ತುವ ಎರಡು ಕಡೆಗಳಲ್ಲೂ ಸ್ತ್ರೀಪುತ್ಥಳಿಯನ್ನು ನಿರ್ಮಿಸಲಾಗಿದೆ.
ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಅಲ್ಲದೆ ಸಿಂಹಾಸನಕ್ಕೆ ಕೂರ್ಮರೂಪದ ಆಸನವನ್ನು ಒದಗಿಸಲಾಗಿದೆ. ಉಭಯ ಪಾಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿ ಲತೆಗಳನ್ನು ಕೆತ್ತಲಾಗಿದೆ.

ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ.

ನಾಗದೇವತೆಗಳ ಚಿತ್ರಗಳು, ಸ್ವಾಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕಗಳಿವೆ.