ಮಂಗಳವಾರ, ಅಕ್ಟೋಬರ್ 12, 2010

"ಕನ್ನಡ ಕವಿ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿ


ಕನ್ನಡನಾಡು ನುಡಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ ಕನ್ನಡ ಭಾಷೆ ಹಾಗು ಸಂಸ್ಕೃತಿಯ ಬಗ್ಗೆ ಎಲ್ಲರಲ್ಲಿ ಅಭಿಮಾನ ಉಂಟಾಗಲಿ ಎಂಬ ಉದ್ದೇಶದಿಂದ ನಮ್ಮ ತಂಡ "ಕನ್ನಡ ಕವಿ ಬಳಗ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಸಲುವಾಗಿ "ಕನ್ನಡ ಕವಿ" (www.kannadakavi.com)ಎಂಬ ಅಂತರ್ಜಾಲ ತಾಣವೊಂದನ್ನು ನಿರ್ಮಿಸಿ ಈಗಾಗಲೇ ವರ್ಷ ಕಳೆದಿದೆ. ಈಗ ಹೊಸ ವಿನ್ಯಾಸದಲ್ಲಿ ಯುನಿಕೋಡ್ ಆವೃತ್ತಿಯಲ್ಲಿ ಓದುಗರ ಸಮಕ್ಷಮಕ್ಕೆ ಇಡಲಾಗುತ್ತಿದೆ. ಬಾನುಲಿ ಡಿಸೈನ್ ಸ್ಟುಡಿಯೋಸ್(ಈ ಮುಂಚೆ ಐಡಿ ಟಕ್ನಾಲಜಿ)ಸಂಸ್ಥೆಯ ಶ್ರೀ ಪ್ರಶಾಂತ್ ಕಲ್ಲೂರ್ ಹಾಗೂ ತಂಡದವರು ಈ ಹೊಸ ವಿನ್ಯಾಸದ ರುವಾರಿಗಳಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ