ಗುರುವಾರ, ಸೆಪ್ಟೆಂಬರ್ 9, 2010

ಗೋಯಾತ್ರೆಯ ಜಾಲತಾಣ

ಭಾರತೀಯ ಗೋತಳಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಸಂಕಲ್ಪದಿಂದ ವಿಶ್ವಮಂಗಲ ಗೋಗ್ರಾಮ ಯಾತ್ರೆ ನಡೆಯುತ್ತಿದೆ. ಇದು ಸಪ್ಟೆಂಬರ್ ೩೦, ೨೦೦೯ರಂದು ಕುರುಕ್ಷೇತ್ರದಿಂದ ಪ್ರಾರಂಭವಾಗಿ ದೇಶಾದ್ಯಂತ ಸುತ್ತಿ ಜನವರಿ ೧೭, ೨೦೧೦ರಂದು ನಾಗಪುರದಲ್ಲಿ ಸಮಾವೇಶಗೊಳ್ಳಲಿದೆ.  ಈ ಯಾತ್ರೆಯ ಸಮಗ್ರ ವಿವರ ನೀಡುವ ಜಾಲತಾಣ gougram.org. ಈ ಜಾಲತಾಣ ಇಂಗ್ಲಿಶ್, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿವೆ. ಗೋಯಾತ್ರೆಯ ವಿವರಗಳಲ್ಲದೆ, ಭಾರತೀಯ ಗೋತಳಿಗಳ ಮಾಹಿತಿ, ಗೋ ಆಧಾರಿತ ಕೃಷಿ ಮತ್ತು ಜೀವನ ಸಂಬಂಧಿ ಲೇಖನಗಳೂ ಇಲ್ಲಿವೆ. ಕನ್ನಡ ಭಾಷೆಯಲ್ಲಿ ಗೋವಿನ ಬಗ್ಗೆ ಪ್ರಕಟವಾಗುತ್ತಿರುವ ಏಕೈಕ e-ಪತ್ರಿಕೆ “ಗೋ ವಿಶ್ವ”ದ ಎಲ್ಲ ಸಂಚಿಕೆಗಳನ್ನು ಕೂಡ ಇಲ್ಲಿ ಓದಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ